ಆ್ಯಪ್ನಗರ

'ಅಯೋಧ್ಯೆ' ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾಗಲಿ: ವೀರೇಂದ್ರ ಹೆಗ್ಗಡೆ ಆಶಯ

ಅಯೋಧ್ಯೆ ರಾಮಜನ್ಮಭೂಮಿ ಸಮಸ್ಯೆ ಬಗೆಹರಿದಿದ್ದು, ಭವ್ಯ ಮಂದಿರ ಶೀಘ್ರ ನಿರ್ಮಾಣವಾಗಲಿ. ಈ ಮಂದಿರ ಶ್ರದ್ಧೆ ಮತ್ತು ಭಕ್ತಿಯ ಕೇಂದ್ರವಾಗಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Vijaya Karnataka Web 27 Dec 2019, 7:01 pm
ಮಂಗಳೂರು: ದೇಶವೇ ಕಾತರದಿಂದ ಕಾಯುತ್ತಿದ್ದ ಅಯೋಧ್ಯೆ ರಾಮಜನ್ಮಭೂಮಿ ಸಮಸ್ಯೆ ಬಗೆಹರಿದಿರುವುದು ಸಂತಸದ ವಿಚಾರ. ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಭವ್ಯ ಮಂದಿರ ಶೀಘ್ರ ನಿರ್ಮಾಣವಾಗಲಿ. ಈ ಮಂದಿರ ಶ್ರದ್ಧೆ ಹಾಗೂ ಭಕ್ತಿಯ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
Vijaya Karnataka Web veerendra heggade  dharmasthala


ನಗರದ ಸಂಘನಿಕೇತನದಲ್ಲಿಶುಕ್ರವಾರ ನಡೆದ ವಿಶ್ವ ಹಿಂದೂ ಪರಿಷತ್‌ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್‌ ಉದ್ಘಾಟಿಸಿ ಮಾತನಾಡಿದರು. ಅಯೋಧ್ಯೆ ಕ್ಷೇತ್ರ ಸಂತರ ನಾಡಾಗಿ ಗುರುತಿಸಿಕೊಂಡಿದೆ. ಶ್ರೀರಾಮ ಮಂದಿರ ನಿರ್ಮಾಣವಾದ ಬಳಿಕ ಮುಂದೆ ಈ ಕ್ಷೇತ್ರ ಅಂತಾರಾಷ್ಟ್ರೀಯವಾಗಿ ಗುರುತಿಸುವಂತಹ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಹಿಂದೆ ಅನುಕಂಪದ ನೆಲೆಯಲ್ಲಿಮತಾಂತರ ನಡೆಯುತ್ತಿತ್ತು. ಅದಕ್ಕೆ ಅನೇಕ ಸಾಮಾಜಿಕ, ಆರ್ಥಿಕ ಕಾರಣಗಳಿದ್ದವು. ಇತರ ಧರ್ಮದವರು ಮನೆ ಮನೆಗಳಿಗೆ ತೆರಳಿ ಸಹಕಾರದ ಮೂಲಕ ಸಮಸ್ಯೆಗೊಳಗಾದವರನ್ನು ತಮ್ಮ ಧರ್ಮಗಳಿಗೆ ಮತಾಂತರ ನಡೆಸುವ ಕಾರ್ಯ ನಡೆಯುತ್ತಿತ್ತು. ಆದರೆ ಈಗ ಅನೇಕ ಯೋಜನೆಗಳ ಮೂಲಕ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯೂ ಆರ್ಥಿಕ ಸಬಲತೆ ಹೊಂದುವಂತಾಗಿದೆ. ಬಡತನ, ಅಸಹಾಯಕತೆಯಿಂದಾಗಿ ಈಗ ಮತಾಂತರ ಆಗುತ್ತಿಲ್ಲ. ಅನುಕಂಪದ ನೆಲೆಯಲ್ಲಿಇಂತಹ ಮತಾಂತರ ಇಂದು ಸಾಧ್ಯವಿಲ್ಲಎಂದರು.

ಪೇಜಾವರ ಶ್ರೀ ಆರೋಗ್ಯ ಸುಧಾರಣೆಗೆ ಮಠಾಧೀಶರ ವಿಶೇಷ ಪ್ರಾರ್ಥನೆ: ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ

ಉಡುಪಿ ಪೇಜಾವರ ಮಠದ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂದೂ ಸಂಸ್ಕೃತಿ ವಿಶ್ವದ ಕಲ್ಯಾಣವನ್ನು ಬಯಸುತ್ತದೆ. ಆದರೆ ವಿದೇಶಿಯರ ಆಕ್ರಮಣದಿಂದಾಗಿ ನಮ್ಮ ಸಂಸ್ಕೃತಿ ಮೋಡದಿಂದ ಕಣ್ಮರೆಯಾದ ಸೂರ್ಯನ ಸ್ಥಿತಿಯಂತಾಗಿತ್ತು. ಆದರೆ ವಿಎಚ್‌ಪಿ ಸ್ಥಾಪನೆಯಾದ ಬಳಿಕ ಸತತ ಹೋರಾಟದ ಫಲವಾಗಿ ಇಂದು ಹಿಂದೂ ಸಂಸ್ಕೃತಿ ಹೂವಾಗಿ ಅರಳಿದೆ. ಇದರ ಸಂಪೂರ್ಣ ಫಲವನ್ನು ಪಡೆಯಲು ನಾವು ಇನ್ನೂ ಹೋರಾಟ ಮಾಡಬೇಕಾಗಬಹುದು ಎಂದರು.

ನೆರೆ ಸಂತ್ರಸ್ತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 25 ಕೋಟಿ ರೂ.

ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್‌ ಕೋಕ್ಜೆ ಮಾತನಾಡಿ, ಧರ್ಮ ನಿರಪೇಕ್ಷ ತೆಯ ಹೆಸರಿನಲ್ಲಿ ಹಿಂದೂಗಳ ಮೇಲೆ ಆಕ್ರಮಣಕಾರಿ ಷಡ್ಯಂತ್ರ ನಡೆಯುತ್ತಲೇ ಇವೆ. ಆದರೆ 2014ರಿಂದೀಚೆಗೆ ಸಂಕುಚಿತವಾಗಿದ್ದ ಹಿಂದೂ ಧರ್ಮದವರು ತಮ್ಮನ್ನು ತಾವು ಹಿಂದೂಗಳೆಂದು ಕರೆಸಿಕೊಳ್ಳಲು ಹೆಮ್ಮೆ ಪಡುವಂತಾಗಿದೆ. ಇದು ವಿಎಚ್‌ಪಿಯ ಶಕ್ತಿ ಸಾಮರ್ಥ್ಯ‌ದಿಂದ ಸಾಧ್ಯವಾಗಿರುವಂತದ್ದು. ಜನಜಾಗೃತಿಯ ಮೂಲಕ ಹಿಂದೂಗಳ ಭಾವನೆಗಳನ್ನು ಜನರ ಮುಂದಿಟ್ಟು ನಾವು ಯಶಸ್ಸು ಕಾಣಬೇಕಾಗಿದೆ ಎಂದರು.

ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್‌ ಕುಮಾರ್‌, ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್‌ ಕುಮಾರ್‌ ಚೌಧರಿ, ಉಪಾಧ್ಯಕ್ಷ ರಾದ ಜೀವೇಶ್ವರ ಮಿಶ್ರಾ, ಬೀನಾ ಭಟ್‌, ಓಂಪ್ರಕಾಶ್‌ ಶಿಂಧೆ, ಜಗನ್ನಾಥ ಶಾಹಿ, ಚಂಪತ್‌ ರಾಯ್‌, ಮುಖ್ಯ ಟ್ರಸ್ಟಿ ರಮೇಶ್‌ ಮೋದಿ, ಕೋಶಾಧಿಕಾರಿ ಗೋಪಾಲ್‌ ಜುಂಜನ್‌ವಾಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್‌ ಪೆರಾಂಡೆ, ಸಂಘಟನಾ ಕಾರ್ಯದರ್ಶಿ ವಿನಾಯಕ ರಾವ್‌ ದೇಶಪಾಂಡೆ, ದಕ್ಷಿಣ ಕರ್ನಾಟಕ ಅಧ್ಯಕ್ಷ ವಿಜಯಲಕ್ಷ್ಮೇ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ