ಆ್ಯಪ್ನಗರ

ಬೈದ್ಯೆತಿ ಮೂತಿ೯ಯ ಮೇಲೆ ಕೈ ಹಾಕಿ ಅಶ್ಲೀಲ ಭಂಗಿ: ಫೋಟೋ ವೈರಲ್

ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿಮಿ೯ಸಲಾದ ದೇಯಿ ಬೈದ್ಯೆತಿ ಔಷಧ ವನದಲ್ಲಿ ಇರುವ ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಘಟನೆ ನಡೆದಿದೆ.

Vijaya Karnataka 10 Sep 2017, 4:02 pm
ಪುತ್ತೂರು: ಪುತ್ತೂರು ತಾಲೂಕಿನ ಪಡುಮಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ನಿಮಿ೯ಸಲಾದ ದೇಯಿ ಬೈದ್ಯೆತಿ ಔಷಧ ವನದಲ್ಲಿ ಇರುವ ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಘಟನೆ ನಡೆದಿದೆ.
Vijaya Karnataka Web baidyati idol insult
ಬೈದ್ಯೆತಿ ಮೂತಿ೯ಯ ಮೇಲೆ ಕೈ ಹಾಕಿ ಅಶ್ಲೀಲ ಭಂಗಿ: ಫೋಟೋ ವೈರಲ್


ಅನ್ಯಧಮೀ೯ಯ ಯುವಕನೊಬ್ಬ ಈ ಔಷಧ ವನಕ್ಕೆ ಭೇಟಿ ನೀಡಿ ಅಲ್ಲಿರುವ ಕುಟೀರದ ಮುಂದೆ ಕುಳಿತ ಭಂಗಿಯಲ್ಲಿರುವ ದೇಯಿ ಬೈದ್ಯೆತಿಯ ಪ್ರತಿಮೆಯ ಮುಂದೆ ಕುಳಿತು ಮೂತಿ೯ಯ ಜತೆ ಅಶ್ಲೀಲ ಭಂಗಿಯಲ್ಲಿ ಫೋಟೊ ತೆಗೆಸಿಕೊಂಡ ಘಟನೆ ಇದಾಗಿದೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.

ಈ ಘಟನೆಗೆ ಕಾರಣವಾದ ಯುವಕನನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ ಪುತ್ತೂರು ತಾಲೂಕು ಬಿಲ್ಲವ ಸಂಘದ ವತಿಯಿಂದ ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಗೆ ದೂರು ನೀಡಲಾಗಿದೆ.

ತುಳುನಾಡಿನ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದ್ಯೆತಿ ಮಹಾನ್ ವೈದ್ಯ ಪಂಡಿತೆಯಾಗಿದ್ದು, ಐದು ಶತಮಾನಗಳ ಹಿಂದೆ ಬಾಳಿ ಬದುಕಿದ್ದರು.
ದೇಯಿ ಬೈದ್ಯೆತಿ ಹೆಸರಿನಲ್ಲಿ ಪಡುಮಲೆ ಸಮೀಪದ ಮುಡಿಪುನಡ್ಕ ಎಂಬಲ್ಲಿ ಅರಣ್ಯ ಇಲಾಖೆ ಔಷಧ ವನ ನಿಮಿ೯ಸಿ ಲೋಕಾಪ೯ಣೆ ಮಾಡಲಾಗಿದೆ. ವನದ ಮಧ್ಯೆ ಕುಟೀರ ನಿಮಿ೯ಸಲಾಗಿದ್ದು, ಅದರ ಜಗಲಿಯಲ್ಲಿ ದೇಯಿ ಬೈದ್ಯೆತಿ ಕುಳಿತು ನಾಟಿ ಮದ್ದು ತಯಾರಿಸುವ ಭಂಗಿಯ ಪ್ರತಿಮೆ ನಿಮಿ೯ಸಲಾಗಿದೆ.

ಪ್ರವಾಸಿ ತಾಣವೂ ಆಗಿರುವ ಇಲ್ಲಿಗೆ ಬಂದಿದ್ದ ಈ ಯುವಕ ಮೂತಿ೯ಯ ಮುಂದೆ ಕುಳಿತು ಮೂತಿ೯ಯ ಮೇಲೆ ಕೈ ಹಾಕಿ ಅಶ್ಲೀಲ ಭಂಗಿಯನ್ನು ತೋರಿಸುವಂತೆ ಫೋಟೋ ಕ್ಕಿಕ್ಕಿಸಿಕೊಂಡಿದ್ದಾನೆ. ಮಾತ್ರವಲ್ಲದೆ ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ