ಆ್ಯಪ್ನಗರ

ಬಜಪೆ ಬಸ್‌ಸ್ಟ್ಯಾಂಡ್‌ ಕಾಂಕ್ರೀಟ್‌ ಕಾಮಗಾರಿ ಉದ್ಘಾಟನೆ

ಮೂಡುಬಿದಿರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೂತನ ಸರಕಾರಿಂದ ಸಾಧ್ಯ ಅನುದಾನವನ್ನು ತರುವುದೇ ನನ್ನ ಪ್ರಮುಖ ಧ್ಯೇಯ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಹಾಗೂಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಸಹಕರಿಸಬೇಕು ಎಂದು ಮೂಡುಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಹೇಳಿದರು.

Vijaya Karnataka 29 Jul 2019, 3:13 pm
ಬಜಪೆ: ಮೂಡುಬಿದಿರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನೂತನ ಸರಕಾರಿಂದ ಸಾಧ್ಯ ಅನುದಾನವನ್ನು ತರುವುದೇ ನನ್ನ ಪ್ರಮುಖ ಧ್ಯೇಯ. ಈ ನಿಟ್ಟಿನಲ್ಲಿ ಕ್ಷೇತ್ರದ ಜನತೆ ಹಾಗೂಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಸಹಕರಿಸಬೇಕು ಎಂದು ಮೂಡುಬಿದಿರೆ ಶಾಸಕ ಉಮಾನಾಥ್‌ ಕೋಟ್ಯಾನ್‌ ಹೇಳಿದರು.
Vijaya Karnataka Web 28vm umanath


ಬಜಪೆಯ ಬಸ್‌ಸ್ಟ್ಯಾಂಡ್‌ಗೆ ಮಳೆಹಾನಿ ಯೋಜನೆಯಡಿ ಮಂಜೂರಾಗಿದ್ದ 20 ಲಕ್ಷ ರೂ. ಅನುದಾನದಲ್ಲಿ ನಡೆಸಲಾದ ಕಾಂಕ್ರೀಟಿಕರಣ ಕಾಮಗಾರಿ ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಬಜಪೆಯ ಬಸ್‌ ಏಜೆಂಟರ ಬಳಗದ ವತಿಯಿಂದ ಶಾಸಕ ಉಮನಾಥ್‌ ಕೋಟ್ಯಾನ್‌ ಅವರನ್ನು ಗೌರವಿಸಲಾಯಿತು. ಗುತ್ತಿಗೆದಾರ ಶ್ರೀಧರ್‌ ಅವರನ್ನು ಉಮಾನಾಥ್‌ ಕೋಟ್ಯಾನ್‌ ಸನ್ಮಾನಿಸಿದರು. ದ.ಕ. ಜಿ ಪಂಚಾಯಿತಿ ಸದಸ್ಯೆ ವಸಂತಿ ಕಿಶೋರ್‌, ತಾಪಂ ಸದಸ್ಯೆ ಉಷಾ ಸುವರ್ಣ, ಗ್ರಾ.ಪಂ ಅಧ್ಯಕ್ಷೆ ರೋಜಿ ಮಥಾಯಸ್‌, ಉಪಾಧ್ಯಕ್ಷ ಶರೀಫ್‌, ಗ್ರಾಪಂ ಸದಸ್ಯರು, ಬಜಪೆ ಗ್ರಾ.ಪಂ. ಪಿಡಿಒ ಸಾಯೀಶ್‌ ಚೌಟ, ಬಜಪೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ಲೋಕೇಶ್‌ಪೂಜಾರಿ, ಜಿ.ಪಂ. ಮಾಜಿ ಉಪಾಧ್ಯಕ್ಷ ರಿತೇಶ್‌ ಶೆಟ್ಟಿ, ತಾಪಂ ಮಾಜಿ ಸದಸ್ಯ ಜೋಕಿಂ ಡಿಕೋಸ್ತ, ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ