ಆ್ಯಪ್ನಗರ

ಮಂಗಳೂರು: ಮೇಲ್ಕಾರಿನಲ್ಲಿ ಮಾರಕಾಸ್ತ್ರಗಳಿಂದ ಕಡಿದು ಯುವಕನ ಹತ್ಯೆ, ಆರೋಪಿ ಖಲೀಲ್‌ ಮೇಲೆ ಶೂಟೌಟ್‌!

ಮೇಲ್ಕಾರಿನ ಗುಡ್ಡೆಯಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಕಲ್ಲಡ್ಕ ನಿವಾಸಿ ಉಮರ್‌ ಫಾರೂಕ್‌ ಯಾನೆ ಚೆನ್ನಾ ಫಾರೂಕ್‌ (32) ನನ್ನು ಕೊಲೆ ಮಾಡಲಾಗಿದೆ. ಉಮರ್‌ ಫಾರೂಕ್‌ ಬೈಕ್‌ ನಲ್ಲಿ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್‌ ಫಾರೂಕ್‌ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ.

Vijaya Karnataka Web 24 Oct 2020, 9:35 am
ಬಂಟ್ವಾಳ: ಎರಡು ದಿನಗಳ ಹಿಂದೆ ರೌಡಿಶೀಟರ್‌ ಸುರೇಂದ್ರ ಬಂಟ್ವಾಳ್‌ ಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಂತೆಯೇ ಮತ್ತೆ ಬಂಟ್ವಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇನ್ನೊಂದು ಹತ್ಯೆ ನಡೆದಿದೆ. ಶುಕ್ರವಾರ ಸಂಜೆ ಮೇಲ್ಕಾರ್‌ ನ ಗುಡ್ಡೆಯಂಗಡಿ ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಹತ್ಯೆ ನಡೆಸಲಾಗಿದೆ.
Vijaya Karnataka Web 9DTmSeDQ


ಮೇಲ್ಕಾರಿನ ಗುಡ್ಡೆಯಂಗಡಿ ಎಂಬಲ್ಲಿ ಘಟನೆ ನಡೆದಿದ್ದು, ಕಲ್ಲಡ್ಕ ನಿವಾಸಿ ಉಮರ್‌ ಫಾರೂಕ್‌ ಯಾನೆ ಚೆನ್ನಾ ಫಾರೂಕ್‌ (32) ನನ್ನು ಕೊಲೆ ಮಾಡಲಾಗಿದೆ. ಉಮರ್‌ ಫಾರೂಕ್‌ ಬೈಕ್‌ ನಲ್ಲಿ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳ ತಂಡ ತಲವಾರಿನಿಂದ ದಾಳಿ ನಡೆಸಿದ್ದು ಗಂಭೀರ ಗಾಯಗೊಂಡ ಉಮರ್‌ ಫಾರೂಕ್‌ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ. ಉಮರ್‌ ಫಾರೂಕ್‌ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದು ರೌಡಿ ಶೀಟರ್‌ ಆಗಿದ್ದಾನೆ. ಪೂರ್ವದ್ವೇಷ ಹತ್ಯೆಗೆ ಕಾರಣ ಎನ್ನಲಾಗಿದೆ.

ಆರೋಪಿಗಳ ಮೇಲೆ ಶೂಟೌಟ್‌!

ತನಿಖೆ ನಡೆಸುತ್ತಿರುವ ಬಂಟ್ವಾಳ ಪೊಲೀಸರು ಕೊಲೆ ಸಂಬಂಧಪಟ್ಟ ಆರೋಪಿಯೊಬ್ಬನಿಗೆ ಫೈರಿಂಗ್ ನಡೆಸಿದ ಘಟನೆ ಶನಿವಾರ ಮುಂಜಾನೆ ಗುಂಡ್ಯದಲ್ಲಿ ನಡೆದಿದೆ. ನಂದಾವರ ನಿವಾಸಿ ಖಲೀಲ್ ಗಾಯಗೊಂಡವನು. ಘಟನೆಯಲ್ಲಿ ಆತನ ಕಾಲಿಗೆ ಗಾಯವಾಗಿದ್ದು, ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿತ್ರನಟ ಸುರೇಂದ್ರ ಬಂಟ್ವಾಳ್‌ ಹತ್ಯೆ: ಆಡಿಯೋ ವೈರಲ್, ಪೊಲೀಸರಿಂದ ತನಿಖೆ

ಆತ ತನ್ನ ಸಹಚರರ ಜತೆ ಸೇರಿ ಉಮರ್ ಪಾರೂಕ್ ನನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಲು ತೆರಳಿದ ವೇಳೆ ತಪ್ಪಿಸಲು ಯತ್ನಿಸಿದ್ದು, ಹೀಗಾಗಿ ಬಂಟ್ವಾಳ ಪೊಲೀಸರು ಫೈರಿಂಗ್ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ