ಆ್ಯಪ್ನಗರ

ಪೊಲೀಸ್ ಸಾರಥ್ಯದಲ್ಲಿ ಬಿ.ಸಿ.ರೋಡ್ ಸರ್ಕಲ್ ದುರಸ್ತಿ ಕಾಮಗಾರಿ ಪೂರ್ಣ

ಟ್ರಾಫಿಕ್ ಎಸ್‌ಐ ಚಂದ್ರಶೇಖರಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಕೈಗೆೆತ್ತಿಕೊಳ್ಳಲಾದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸರ್ಕಲ್ ದುರಸ್ತಿ ಕಾಮಗಾರಿ ಗುರುವಾರ ಪೂರ್ಣಗೊಂಡಿದೆ.

ವಿಕ ಸುದ್ದಿಲೋಕ 5 Mar 2016, 2:03 pm
ಬಂಟ್ವಾಳ: ಟ್ರಾಫಿಕ್ ಎಸ್‌ಐ ಚಂದ್ರಶೇಖರಯ್ಯ ಅವರ ನೇತೃತ್ವದಲ್ಲಿ ಶುಕ್ರವಾರ ಕೈಗೆೆತ್ತಿಕೊಳ್ಳಲಾದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸರ್ಕಲ್ ದುರಸ್ತಿ ಕಾಮಗಾರಿ ಗುರುವಾರ ಪೂರ್ಣಗೊಂಡಿದೆ.
Vijaya Karnataka Web bc road circle
ಪೊಲೀಸ್ ಸಾರಥ್ಯದಲ್ಲಿ ಬಿ.ಸಿ.ರೋಡ್ ಸರ್ಕಲ್ ದುರಸ್ತಿ ಕಾಮಗಾರಿ ಪೂರ್ಣ


ಸರ್ಕಲ್ ವಠಾರದಲ್ಲಿ ಬಾಯ್ತೆರೆದಿದ್ದ ಗುಂಡಿಗಳನ್ನು ಮುಚ್ಚಲಾಗಿದ್ದು, ವಾಹನ ಸಂಚಾರಕ್ಕೆ ಯೋಗ್ಯ ಮಾಡಿಕೊಡಲಾಯಿತು. ಸರ್ಕಲ್‌ನ ನಾಲ್ಕು ದಿಕ್ಕನ್ನು ಅಗಲೀಕರಣ ಮಾಡಿದ್ದರಿಂದಾಗಿ ವಾಹನ ಚಾಲಕರು, ಪ್ರಯಾಣಿಕರು ನಿರಾಳ ಗೊಂಡರು. ಹೊಸ ಸರ್ಕಲ್ ನಿರ್ಮಾಣ ವೇಳೆ ಡಾಮಾರು ಅಗೆಯಲಾಗಿದ್ದು,

ಹೊಂಡಗಳನ್ನು ಉಂಟಾಗಲು ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಾಹನ ಅವಘಡಗಳು ಸಂಭವಿಸುವುದರಿಂದ ಸರ್ಕಲ್ ದುರಸ್ತಿ ನಡೆಸಲಾಗಿದೆ. ಟ್ರಾಫಿಕ್ ಠಾಣಾಧಿಕಾರಿ ಚಂದ್ರಶೇಖರಯ್ಯ ಅವರ ವಿಶೇಷ ಮುತು ವರ್ಜಿಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹೆದ್ದಾರಿ ಇಲಾಖೆ ಹಾಗೂ ಪುರಸಭಾಡಳಿತದಿಂದ

ಸರ್ಕಲ್ ಕಾಯಕಲ್ಪ ಕಾಮಗಾರಿ ನಡೆಸಲಾಗಿದೆ.

ಬಿ.ಸಿ.ರೋಡಿನ ಮುಖ್ಯವತ್ತದಲ್ಲಿ ಹೊಂಡಗಳನ್ನು ಮಣ್ಣು ತುಂಬಿ ಬಳಿಕ ಡಾಮಾರಿಕರಣ ಮಾಡಿಸಲಾಗಿದ್ದು, ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಸ್ವಲ್ಪ ಮಟ್ಟಿಗೆ ನಿರಾಳಗೊಂಡಿದೆ. ಸರ್ಕಲ್ ಅಗಲೀಕರಣದಿಂದಾಗಿ ಬಿ.ಸಿ.ರೋಡಿನ ವಾಹನ ಸಂಚಾರವೂ ರಿಲೀಫ್ ಆಗಿದೆ. ರಸ್ತೆ ಅಗಲೀಕರಣ ಡಾಮರೀಕರಣ ಕಾರ್ಯ

ಪೂರ್ಣಗೊಳಿಸಿದ ಬಳಿಕ ವೈಜ್ಞಾನಿಕ ಸರ್ಕಲ್‌ಗೆ ರೂಪುರೇಷೆ ಹಾಕಲಾಗುವುದು ಎಂದು ಎಸ್‌ಐ ಚಂದ್ರಶೇಖರಯ್ಯ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಕಾರ್ಯವನ್ನು ಜನಪ್ರತಿನಿಗಳು ಹಾಗೂ ಸಾರ್ವಜನಿಕರು ಅಭಿನಂದಿಸಿದ್ದಾರೆ.

ಸರ್ಕಲ್ ವಠಾರದಲ್ಲಿರುವ ಅನಧಿಕೃತ ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸುವಂತೆ ಜನಪ್ರತಿನಿಧಿಗಳು ಸಲಹೆ ನೀಡಿದ್ದಾರೆ. ಅಂಗಡಿ ಮುಗ್ಗಟ್ಟುಗಳಿಂದ ವಾಹನ ಸಂಚಾರಕ್ಕೂ ಅಡೆಚಣೆ ಉಂಟಾಗುತ್ತಿದೆ. ಸರ್ಕಲ್ ವಿಸ್ತರಿಸುವ ನಿಟ್ಟಿನಲ್ಲಿ ಅನಧಿಕೃತ ಅಂಗಡಿ, ಕಟ್ಟಡ ಹಾಗೂ ಬ್ಯಾನರ್ ವಠಾರವನ್ನು ತೆರವುಗೊಳಿಸಲು

ಕ್ರಮ ಜರುಗಿಸಲಾಗುವುದೆಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ