ಆ್ಯಪ್ನಗರ

ಮಳೆಗೆ ಹೆದರಿ ಬೀಚ್‌ಗಳು ಡಲ್‌ !

ಮಂಗಳೂರು: ಮಳೆಯ ಅಬ್ಬರಕ್ಕೆ ಹೆದರಿ ಭಾನುವಾರ ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಪ್ರವಾಸಿಗರಿಲ್ಲದೇ ಬಣಗುಟ್ಟುವ ದೃಶ್ಯಗಳು ಕಂಡು ಬಂತು.

Vijaya Karnataka 12 Aug 2019, 5:00 am
ಮಂಗಳೂರು: ಮಳೆಯ ಅಬ್ಬರಕ್ಕೆ ಹೆದರಿ ಭಾನುವಾರ ಪಣಂಬೂರು, ತಣ್ಣೀರುಬಾವಿ ಬೀಚ್‌ಗಳಲ್ಲಿ ಪ್ರವಾಸಿಗರಿಲ್ಲದೇ ಬಣಗುಟ್ಟುವ ದೃಶ್ಯಗಳು ಕಂಡು ಬಂತು.
Vijaya Karnataka Web beach dull
ಮಳೆಗೆ ಹೆದರಿ ಬೀಚ್‌ಗಳು ಡಲ್‌ !


ಸುಲ್ತಾನ್‌ ಬತ್ತೇರಿಯಲ್ಲಿ ಶನಿವಾರ ಮಳೆಯಿಂದಾಗಿ ಫೆರ್ರಿ ಪೂರ್ಣ ಪ್ರಮಾಣದಲ್ಲಿ ಸ್ಥಗಿತವಾಗಿತ್ತು. ಆದರೆ ಭಾನುವಾರ ಫೆರ್ರಿ ಆರಂಭವಾದರೂ ಸ್ಥಳೀಯರು ಮಾತ್ರ ಬೆಂಗ್ರೆಯಿಂದ ಬತ್ತೇರಿ ಹಾಗೂ ಬತ್ತೇರಿಯಿಂದ ಬೆಂಗ್ರೆಗೆ ಹೋಗುವ ದೃಶ್ಯಗಳು ಮಾತ್ರ ಕಾಣಿಸಿಕೊಂಡಿದೆ ಉಳಿದಂತೆ ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಇಳಿಮುಖವಾಗಿದೆ. ಕಸಬ ಬೆಂಗ್ರೆಗೆ ಸಾಗುವ ಫೆರ್ರಿಗಳ ಸಂಖ್ಯೆಯಲ್ಲೂ ಇಳಿಕೆಯಾಗಿದೆ. ಜನರೇ ಇಲ್ಲದೇ ಇದ್ರೆ ಫೆರ್ರಿ ಸಂಚಾರ ಕಷ್ಟಸಾಧ್ಯ ಎನ್ನುತ್ತಾರೆ ಸುಲ್ತಾನ್‌ ಬತ್ತೇರಿಯ ಫೆರ್ರಿಯ ನಿರ್ವಹಕ ಈಶ್ವರ್‌ ಅವರು.

ಪಣಂಬೂರು ಬೀಚ್‌ನಲ್ಲಿ ನೀರಿನ ಅಬ್ಬರ ತೀವ್ರವಾಗಿರುವುದರಿಂದ ಬೀಚ್‌ ಸುತ್ತಲೂ ಬೇಲಿ ಹಾಕಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ