ಆ್ಯಪ್ನಗರ

ಮಂಗಳೂರು: ಕುರಿ ಮಾಂಸದೊಂದಿಗೆ ದನ ಮಾಂಸ ಮಾರಾಟ; ಮಾರುಕಟ್ಟೆಗೆ ಮೇಯರ್ ದಾಳಿ‌

ನಗರದ ಉರ್ವ ಸ್ಟೋರ್‌, ಉರ್ವ ಮಾರ್ಕೆಟ್‌ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್‌ ತಂಡ ಸಮಗ್ರ ಪರಿಶೀಲನೆ ನಡೆಸಿ ವ್ಯಾಪಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರತಿ ದಿನದ ವ್ಯಾಪಾರವಾಗುವ ಮಾಂಸ, ಕಡಿಯುವ ಕುರಿ, ಆಡುಗಳ ಕುರಿತು ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದಿರುವ ಬಗ್ಗೆ ಮೇಯರ್‌ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Vijaya Karnataka 15 Oct 2020, 7:47 am
ಮಂಗಳೂರು: ಮಾಂಸದ ಮಾರುಕಟ್ಟೆಯಲ್ಲಿ ದನದ ಮಾಂಸವನ್ನು ಬೆರೆಸಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೇಯರ್‌ ದಿವಾಕರ ಪಾಂಡೇಶ್ವರ್‌ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳ ತಂಡ ಬುಧವಾರ ನಗರದ ವಿವಿಧ ಮಾಂಸದ ಮಾರುಕಟ್ಟೆಗಳಿಗೆ ದಿಢೀರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆದರೆ ದನದ ಮಾಂಸ ಮಾರಾಟ ಪತ್ತೆಯಾಗಿಲ್ಲ.
Vijaya Karnataka Web mangal


ನಗರದ ಉರ್ವ ಸ್ಟೋರ್‌, ಉರ್ವ ಮಾರ್ಕೆಟ್‌ ಮತ್ತು ಕುದ್ರೋಳಿ ಕಸಾಯಿಖಾನೆಗೆ ಭೇಟಿ ನೀಡಿದ ಮೇಯರ್‌ ತಂಡ ಸಮಗ್ರ ಪರಿಶೀಲನೆ ನಡೆಸಿ ವ್ಯಾಪಾರಿಗಳಿಂದ ಮಾಹಿತಿ ಪಡೆದುಕೊಂಡರು. ಪ್ರತಿ ದಿನದ ವ್ಯಾಪಾರವಾಗುವ ಮಾಂಸ, ಕಡಿಯುವ ಕುರಿ, ಆಡುಗಳ ಕುರಿತು ಯಾವುದೇ ದಾಖಲೆಗಳನ್ನು ಇಟ್ಟುಕೊಳ್ಳದಿರುವ ಬಗ್ಗೆ ಮೇಯರ್‌ ವ್ಯಾಪಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುರಿ, ಆಡುಗಳನ್ನು ಎಲ್ಲಿ ಖರೀದಿಸಿ ತರುತ್ತೀರಿ, ಅವುಗಳಲ್ಲಿ ದಿನಕ್ಕೆ ಎಷ್ಟು ಮಾಂಸಕ್ಕೆ ಕಡಿಯುತ್ತೀರಿ ಎನ್ನುವ ಬಗ್ಗೆ ಸಮಗ್ರ ದಾಖಲೆ ಇಟ್ಟುಕೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ ಇದನ್ನು ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಿದರು.ಆಡು, ದನಗಳನ್ನು ಕಡಿಯುವ ವೇಳೆ ಆರೋಗ್ಯ ಇಲಾಖೆ ಅಧಿಕಾರಿಗಳ ಅನುಮತಿ ಅಗತ್ಯ. ಆರೋಗ್ಯ ಅಧಿಕಾರಿಗಳು ಇದನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಿದರು.

ಮೂಡುಬಿದಿರೆಯ ವಿದ್ಯಾಗಮ ಶಿಕ್ಷಕಿಗೆ ಕೊರೊನಾ ಪಾಸಿಟಿವ್‌: ಸರಕಾರದಿಂದ ಆಸ್ಪತ್ರೆ ವೆಚ್ಚದ ಭರವಸೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ