ಆ್ಯಪ್ನಗರ

2.5 ಟನ್‌ ಗೋಮಾಂಸ ಪತ್ತೆ: ಹುಬ್ಬಳ್ಳಿಯಿಂದ ಮಂಗಳೂರಿಗೆ ಸಾಗಾಟ, ಇಬ್ಬರ ಸೆರೆ!

ಹುಬ್ಬಳ್ಳಿಯಿಂದ ಮಂಗಳೂರಿಗೆ ಮೀನಿನ ಲಾರಿಯಲ್ಲಿ ಗೋಮಾಂಸ ಸಾಗಾಟ ಮಾಡುವುದನ್ನು ಪತ್ತೆಹಚ್ಚಿದ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ವಿಷಯ ತಿಳಿಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಪೊಲೀಸರ ಕಣ್ತಪ್ಪಿಸಿ ಹುಬ್ಬಳ್ಳಿಯಿಂದ ನಾನಾ ದಾರಿಗಳನ್ನು ತಪ್ಪಿಸಿಕೊಂಡು ದನದ ಮಾಂಸ ಮಂಗಳೂರಿಗೆ ತರುತ್ತಿದ್ದರೆಂದು ಪೊಲೀಸ್‌ ವಿಚಾರಣೆಯಿಂದ ತಿಳಿದು ಬಂದಿದೆ.

Vijaya Karnataka Web 19 Oct 2020, 8:20 am
ಮಂಗಳೂರು: ಹುಬ್ಬಳ್ಳಿಯಿಂದ ಆಗಮಿಸುತ್ತಿದ್ದ ಮೀನಿನ ವಾಹನದಲ್ಲಿ 2.5 ಟನ್‌ ದನದ ಮಾಂಸ ಸಾಗಾಟ ಮಾಡುತ್ತಿರುವುದನ್ನು ಬಜರಂಗದಳ ಕಾರ್ಯಕರ್ತರು ನಗರದ ಕಣ್ಣೂರು ಸಮೀಪ ಪತ್ತೆ ಹಚ್ಚಿದ್ದು, ವಿಷಯ ತಿಳಿದ ಕಂಕನಾಡಿ ನಗರ ಠಾಣಾ ಪೊಲೀಸರು ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web beef
ಸಾಂದರ್ಭಿಕ ಚಿತ್ರ


ಹುಬ್ಬಳ್ಳಿ ನಿವಾಸಿಗಳಾದ ಮೈನುದ್ದೀನ್‌ (28), ರಫೀಕ್‌ ಜಾಫರ್‌ (25) ಬಂಧಿತ ಆರೋಪಿಗಳು. ಮೀನಿನ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕಣ್ಣೂರು ಸಮೀಪ ಮೀನಿನ ಟೆಂಪೊವನ್ನು ತಡೆದು ನಿಲ್ಲಿಸಿದ್ದಾರೆ.
ಈ ಸಂದರ್ಭ ಟೆಂಪೊದಲ್ಲಿ ಕೆಲವು ಟ್ರೇಗಳಲ್ಲಿ ಮೀನು ತುಂಬಿದ್ದರೆ ಉಳಿದ ಟ್ರೇಗಳಲ್ಲಿ ದನದ ಮಾಂಸ ಸಾಗಾಟ ಮಾಡಲಾಗುತ್ತಿತ್ತು. ವಿಷಯ ತಿಳಿದ ಕಂಕನಾಡಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಟೆಂಪೊ, ದನದ ಮಾಂಸ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಟ್ವಾಳದಲ್ಲಿ ಜಾನುವಾರು ಅಕ್ರಮ ಸಾಗಾಟ: ಓರ್ವ ಬಂಧನ

ಆರೋಪಿಗಳು ಪೊಲೀಸರ ಕಣ್ತಪ್ಪಿಸಿ ಹುಬ್ಬಳ್ಳಿಯಿಂದ ನಾನಾ ದಾರಿಗಳನ್ನು ತಪ್ಪಿಸಿಕೊಂಡು ದನದ ಮಾಂಸ ಮಂಗಳೂರಿಗೆ ತರುತ್ತಿದ್ದರೆಂದು ಪೊಲೀಸ್‌ ವಿಚಾರಣೆಯಿಂದ ತಿಳಿದು ಬಂದಿದೆ.
ಮಂಗಳೂರು: ಹಾಸನದಿಂದ ಬರುತ್ತಿದ್ದ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ, ಒಬ್ಬನ ಬಂಧನ

ವಾರದೊಳಗೆ 2ನೇ ಘಟನೆ
ಅ.13ರಂದು ಹಾಸನದಿಂದ ಆಗಮಿಸುತ್ತಿದ್ದ ಹಾಲಿನ ವಾಹನದಲ್ಲಿ ಇದೇ ರೀತಿ ಗೋಮಾಂಸ ಸಾಗಾಟ ಮಾಡುತ್ತಿದ್ದು, ಅದನ್ನು ಕೂಡಾ ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣದಲ್ಲಿ ಕೋಡಿಕಲ್‌ ನಿವಾಸಿ ಶಮೀರ್‌ ಎಂಬಾತನನ್ನು ಬಂಧಿಸಲಾಗಿದ್ದು, ಈತನ ಜತೆಗಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು. ಟೆಂಪೋದಲ್ಲಿ ದನದ ಮಾಂಸ ಮಾತ್ರ ಪತ್ತೆಯಾಗಿದ್ದು, ಹಾಲು ಇರಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ