* ಮುಹಮ್ಮದ್ ಆರಿಫ್ ಮಂಗಳೂರು
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಿರಂತರ ಏಳು ಬಾರಿ ಸಂಸದರನ್ನು ಗೆಲ್ಲಿಸಿರುವ ಬಿಜೆಪಿ ತನ್ನ ಜೈತ್ರ ಯಾತ್ರೆ ಮುಂದುವರಿಸಲು ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.
1991, 1996, 1998, 1999ರಲ್ಲಿ ವಿ.ಧನಂಜಯ ಕುಮಾರ್, 2004ರಲ್ಲಿ ಡಿ.ವಿ.ಸದಾನಂದ ಗೌಡ, 2009 ಮತ್ತು 2014ರಲ್ಲಿ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದು, ಮುಂದಿನ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ಪಕ್ಷ ಮೈಕೊಡವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ಪೇಜ್ ಪ್ರಮುಖ್ ಯೋಜನೆ ಮೂಲಕ ವಿವಿಧ ಹಂತಗಳಲ್ಲಿ ಪ್ರಚಾರ ನಡೆಸಿ, ಜಿಲ್ಲೆಯ ಎಂಟರಲ್ಲಿ ಏಳು ಕ್ಷೇತ್ರ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಲೋಕಸಭೆ ಚುನಾವಣೆಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ಮಾಡಿಕೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಾಷಣ ಮಾಡುತ್ತಿದ್ದಾರೆ.
ಧ್ವಜ ಹಾರಾಟ: ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹಮ್ಮಿಕೊಂಡಿರುವ 'ಮೇರಾ ಪರಿವಾರ್- ಬಿಜೆಪಿ ಪರಿವಾರ್' ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಬಿಜೆಪಿ ಶಕ್ತಿ ಕೇಂದ್ರಗಳ ಮೂಲಕ ಪ್ರತಿಯೊಂದು ಮನೆಯಲ್ಲೂ ಪಕ್ಷದ ಧ್ವಜ ಹಾರಾಡಿಸುವುದು ಕಾರ್ಯಕ್ರಮದ ಪ್ರಮುಖ ಅಂಗ. ಮನೆಯವರ ಅನುಮತಿ ಪಡೆದು ಧ್ವಜ ಹಾಕಲಿದ್ದು, ಚುನಾವಣೆ ತನಕ ಹಾರಾಡಲಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್.
ದೇಣಿಗೆ ಸಂಗ್ರಹ: ದೇಶಾದ್ಯಂತ ಪ್ರಮುಖ ನಾಯಕರಿಂದ 'ಮೇರಾ ಪರಿವಾರ್ ಬಿಜೆಪಿ ಪರಿವಾರ್' ಸ್ಟಿಕ್ಕರ್ ಅಂಟಿಸುವ ಅಭಿಯಾನ ನಡೆಯುತ್ತಿದ್ದಂತೆ, ಇಲ್ಲೂ ನಡೆಯುತ್ತಿದೆ. ದೀನ್ ದಯಾಳ್ ಸಮರ್ಪಣ್ ದಿನ ಅಂಗವಾಗಿ ನಮೋ ಆ್ಯಪ್ ಮೂಲಕ ಪಕ್ಷಕ್ಕೆ 5, 50, 500, 1000 ರೂ. ದೇಣಿಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕಮಲ ಜ್ಯೋತಿ: ಚುನಾವಣೆ ಪ್ರಚಾರದ ಭಾಗವಾಗಿ, ಕೇಂದ್ರ ಸರಕಾರದಿಂದ ಸೌಲಭ್ಯ ಪಡೆದಿರುವ ಫಲಾನುಭವಿಗಳ ಮನೆಗೆ ತೆರಳಿ, ದೀಪ ಹಚ್ಚಿ ಬರುವುದು ಇನ್ನೊಂದು ಕಾರ್ಯಕ್ರಮವಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಯೋಜನೆಗಳ ಕರಪತ್ರ ಮುದ್ರಿಸಿ ಮನೆ ಮನೆಗೆ ವಿತರಿಸಿ, ಮತಗಳಾಗಿ ಪರಿವರ್ತಿಸಲು ಮನದಟ್ಟು ಮಾಡುವ ಕೆಲಸ ನಡೆಯಲಿದೆ.
ಬಿಜೆಪಿಯೇತರರ ಭೇಟಿ: ಪ್ರತಿ ಬೂತ್ಮಟ್ಟದ ಕಾರ್ಯಕರ್ತರಿಂದ ಬಿಜೆಪಿಯೇತರ ಪಕ್ಷಗಳ ಮುಖಂಡರ ಭೇಟಿ ನಡೆಯಲಿದೆ. ತಮ್ಮ ಪಕ್ಷಗಳ ಜತೆ ವೈಮನಸ್ಯ, ಮುನಿಸಿಕೊಂಡವರನ್ನು ಬಿಜೆಪಿಯತ್ತ ಸೆಳೆಯಲು ಮನಃಪರಿವರ್ತನೆ ಮಾಡಿಕೊಡುವ ಕಾರ್ಯಕ್ರಮ ಪ್ರಮುಖ ಮುಖಂಡರಿಂದ ನಡೆಯಲಿದೆ.
ಕೀ ವೋಟರ್ಸ್ ಸಂಪರ್ಕ: ಕನಿಷ್ಠ 10 ಮತಗಳನ್ನು ಹೊಂದಿರುವ ಪ್ರಮುಖ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಕೀ ವೋಟರ್ಸ್ ಕಾರ್ಯಕ್ರಮ ಮೂಲಕ ಬಿಜೆಪಿ ಮಾಡಲಿದೆ. ಜಾತಿ ಮುಖಂಡರನ್ನು ಸೋಶಿಯಲ್ ಕೀ ವೋಟರ್ಸ್, ಧರ್ಮ ಮುಖಂಡರನ್ನು ರಿಲೀಜಿಯಸ್, ಸಹಕಾರಿ ಕ್ಷೇತ್ರದ ಮುಖಂಡರನ್ನು ಕೋ- ಆಪರೇಟಿವ್ ಮತ್ತು ಸಾಮಾನ್ಯರನ್ನು ಜನರಲ್ ಕೀಟರ್ಸ್ ವೋಟರ್ಸ್ ಎಂದು ಸಂಪರ್ಕಿಸಿ, ಮನವೊಲಿಸುವ ಪ್ರಯತ್ನ ನಡೆಯಲಿದೆ.
ಹೊಸ ಮತದಾರರು: ಬಿಜೆಪಿಗೆ ಮತ ಹಾಕುವ ಖಾತ್ರಿ ಇರುವ ಹೊಸ ಮತದಾರರ ನೋಂದಣಿ ಕಾರ್ಯವನ್ನು ಬಿರುಸಿನಿಂದ ಮಾಡಲಿದ್ದು, ಪ್ರತಿ ಬೂತ್ನಿಂದ ಕನಿಷ್ಠ 15 ಮತದಾರರ ನೋಂದಣಿ ಮಾಡಿಸಲು ಸೂಚನೆ ನೀಡಲಾಗಿದೆ.
ಇನ್ನೊಂದೆಡೆ, ಟೀಮ್ ಮೋದಿಯಿಂದ ಪ್ರತ್ಯೇಕವಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದ ಯಾತ್ರೆ ಮತ್ತಿತರ ಕಾರ್ಯಕ್ರಮ ನಡೆಯುತ್ತಿದೆ. ಮತ್ತೊಂದೆಡೆ ಸಂಘ ಪರಿವಾರದಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಹೋಮ, ವಿಶೇಷ ಪೂಜೆಗಳು, ಚಿಂತನಾ ಸಭೆಗಳು ನಡೆಯಲಿವೆ ಎನ್ನುತ್ತಾರೆ ಮುಖಂಡರು.
ಮಾರ್ಚ್ಗೆ ಪ್ರಧಾನಿ ನಿರೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ನಲ್ಲಿ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದಕ್ಕೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿ, ಶಕ್ತಿ ಕೇಂದ್ರ ಮತ್ತು ಮಹಾ ಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಭೇಟಿ ನಡೆಸಲಿದ್ದಾರೆ. ಕಳೆದ ಬಾರಿ ಬಿ.ಸಿ.ರೋಡ್ನಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಕ್ಷೇತ್ರಗಳ ಶಕ್ತಿ ಕೇಂದ್ರದಆರು ಸಾವಿರ ಪದಾಧಿಕಾರಿಗಳ ಸಭೆ ನಡೆಸಿದಂತೆ, ಈ ಬಾರಿ ಮಂಗಳೂರಿನಲ್ಲಿ ಸಭೆ ನಡೆಸಲಿದ್ದು, ಅಂತಿಮಗೊಂಡಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು.
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಿರಂತರ ಏಳು ಬಾರಿ ಸಂಸದರನ್ನು ಗೆಲ್ಲಿಸಿರುವ ಬಿಜೆಪಿ ತನ್ನ ಜೈತ್ರ ಯಾತ್ರೆ ಮುಂದುವರಿಸಲು ವ್ಯವಸ್ಥಿತವಾಗಿ ಪಕ್ಷ ಸಂಘಟನೆ ಮಾಡುತ್ತಿದೆ. ಪೂರ್ಣ ಪ್ರಮಾಣದಲ್ಲಿ ಚುನಾವಣಾ ಪ್ರಚಾರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ.
1991, 1996, 1998, 1999ರಲ್ಲಿ ವಿ.ಧನಂಜಯ ಕುಮಾರ್, 2004ರಲ್ಲಿ ಡಿ.ವಿ.ಸದಾನಂದ ಗೌಡ, 2009 ಮತ್ತು 2014ರಲ್ಲಿ ನಳಿನ್ ಕುಮಾರ್ ಕಟೀಲ್ ಬಿಜೆಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದು, ಮುಂದಿನ ಚುನಾವಣೆ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ಪಕ್ಷ ಮೈಕೊಡವಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ಪೇಜ್ ಪ್ರಮುಖ್ ಯೋಜನೆ ಮೂಲಕ ವಿವಿಧ ಹಂತಗಳಲ್ಲಿ ಪ್ರಚಾರ ನಡೆಸಿ, ಜಿಲ್ಲೆಯ ಎಂಟರಲ್ಲಿ ಏಳು ಕ್ಷೇತ್ರ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಲೋಕಸಭೆ ಚುನಾವಣೆಗೆ ಮೂರು ತಿಂಗಳ ಹಿಂದೆಯೇ ಸಿದ್ಧತೆ ಮಾಡಿಕೊಂಡಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಪ್ರತಿ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಭಾಷಣ ಮಾಡುತ್ತಿದ್ದಾರೆ.
ಧ್ವಜ ಹಾರಾಟ: ರಾಷ್ಟ್ರಮಟ್ಟದಲ್ಲಿ ಬಿಜೆಪಿ ಹಮ್ಮಿಕೊಂಡಿರುವ 'ಮೇರಾ ಪರಿವಾರ್- ಬಿಜೆಪಿ ಪರಿವಾರ್' ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ. ಬಿಜೆಪಿ ಶಕ್ತಿ ಕೇಂದ್ರಗಳ ಮೂಲಕ ಪ್ರತಿಯೊಂದು ಮನೆಯಲ್ಲೂ ಪಕ್ಷದ ಧ್ವಜ ಹಾರಾಡಿಸುವುದು ಕಾರ್ಯಕ್ರಮದ ಪ್ರಮುಖ ಅಂಗ. ಮನೆಯವರ ಅನುಮತಿ ಪಡೆದು ಧ್ವಜ ಹಾಕಲಿದ್ದು, ಚುನಾವಣೆ ತನಕ ಹಾರಾಡಲಿದೆ ಎನ್ನುತ್ತಾರೆ ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್.
ದೇಣಿಗೆ ಸಂಗ್ರಹ: ದೇಶಾದ್ಯಂತ ಪ್ರಮುಖ ನಾಯಕರಿಂದ 'ಮೇರಾ ಪರಿವಾರ್ ಬಿಜೆಪಿ ಪರಿವಾರ್' ಸ್ಟಿಕ್ಕರ್ ಅಂಟಿಸುವ ಅಭಿಯಾನ ನಡೆಯುತ್ತಿದ್ದಂತೆ, ಇಲ್ಲೂ ನಡೆಯುತ್ತಿದೆ. ದೀನ್ ದಯಾಳ್ ಸಮರ್ಪಣ್ ದಿನ ಅಂಗವಾಗಿ ನಮೋ ಆ್ಯಪ್ ಮೂಲಕ ಪಕ್ಷಕ್ಕೆ 5, 50, 500, 1000 ರೂ. ದೇಣಿಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕಮಲ ಜ್ಯೋತಿ: ಚುನಾವಣೆ ಪ್ರಚಾರದ ಭಾಗವಾಗಿ, ಕೇಂದ್ರ ಸರಕಾರದಿಂದ ಸೌಲಭ್ಯ ಪಡೆದಿರುವ ಫಲಾನುಭವಿಗಳ ಮನೆಗೆ ತೆರಳಿ, ದೀಪ ಹಚ್ಚಿ ಬರುವುದು ಇನ್ನೊಂದು ಕಾರ್ಯಕ್ರಮವಾಗಿದೆ. ಅಲ್ಲದೆ, ಕೇಂದ್ರ ಸರಕಾರದ ಯೋಜನೆಗಳ ಕರಪತ್ರ ಮುದ್ರಿಸಿ ಮನೆ ಮನೆಗೆ ವಿತರಿಸಿ, ಮತಗಳಾಗಿ ಪರಿವರ್ತಿಸಲು ಮನದಟ್ಟು ಮಾಡುವ ಕೆಲಸ ನಡೆಯಲಿದೆ.
ಬಿಜೆಪಿಯೇತರರ ಭೇಟಿ: ಪ್ರತಿ ಬೂತ್ಮಟ್ಟದ ಕಾರ್ಯಕರ್ತರಿಂದ ಬಿಜೆಪಿಯೇತರ ಪಕ್ಷಗಳ ಮುಖಂಡರ ಭೇಟಿ ನಡೆಯಲಿದೆ. ತಮ್ಮ ಪಕ್ಷಗಳ ಜತೆ ವೈಮನಸ್ಯ, ಮುನಿಸಿಕೊಂಡವರನ್ನು ಬಿಜೆಪಿಯತ್ತ ಸೆಳೆಯಲು ಮನಃಪರಿವರ್ತನೆ ಮಾಡಿಕೊಡುವ ಕಾರ್ಯಕ್ರಮ ಪ್ರಮುಖ ಮುಖಂಡರಿಂದ ನಡೆಯಲಿದೆ.
ಕೀ ವೋಟರ್ಸ್ ಸಂಪರ್ಕ: ಕನಿಷ್ಠ 10 ಮತಗಳನ್ನು ಹೊಂದಿರುವ ಪ್ರಮುಖ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ಕೀ ವೋಟರ್ಸ್ ಕಾರ್ಯಕ್ರಮ ಮೂಲಕ ಬಿಜೆಪಿ ಮಾಡಲಿದೆ. ಜಾತಿ ಮುಖಂಡರನ್ನು ಸೋಶಿಯಲ್ ಕೀ ವೋಟರ್ಸ್, ಧರ್ಮ ಮುಖಂಡರನ್ನು ರಿಲೀಜಿಯಸ್, ಸಹಕಾರಿ ಕ್ಷೇತ್ರದ ಮುಖಂಡರನ್ನು ಕೋ- ಆಪರೇಟಿವ್ ಮತ್ತು ಸಾಮಾನ್ಯರನ್ನು ಜನರಲ್ ಕೀಟರ್ಸ್ ವೋಟರ್ಸ್ ಎಂದು ಸಂಪರ್ಕಿಸಿ, ಮನವೊಲಿಸುವ ಪ್ರಯತ್ನ ನಡೆಯಲಿದೆ.
ಹೊಸ ಮತದಾರರು: ಬಿಜೆಪಿಗೆ ಮತ ಹಾಕುವ ಖಾತ್ರಿ ಇರುವ ಹೊಸ ಮತದಾರರ ನೋಂದಣಿ ಕಾರ್ಯವನ್ನು ಬಿರುಸಿನಿಂದ ಮಾಡಲಿದ್ದು, ಪ್ರತಿ ಬೂತ್ನಿಂದ ಕನಿಷ್ಠ 15 ಮತದಾರರ ನೋಂದಣಿ ಮಾಡಿಸಲು ಸೂಚನೆ ನೀಡಲಾಗಿದೆ.
ಇನ್ನೊಂದೆಡೆ, ಟೀಮ್ ಮೋದಿಯಿಂದ ಪ್ರತ್ಯೇಕವಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದ ಯಾತ್ರೆ ಮತ್ತಿತರ ಕಾರ್ಯಕ್ರಮ ನಡೆಯುತ್ತಿದೆ. ಮತ್ತೊಂದೆಡೆ ಸಂಘ ಪರಿವಾರದಿಂದ ಧಾರ್ಮಿಕ ಕ್ಷೇತ್ರಗಳಲ್ಲಿ ಹೋಮ, ವಿಶೇಷ ಪೂಜೆಗಳು, ಚಿಂತನಾ ಸಭೆಗಳು ನಡೆಯಲಿವೆ ಎನ್ನುತ್ತಾರೆ ಮುಖಂಡರು.
ಮಾರ್ಚ್ಗೆ ಪ್ರಧಾನಿ ನಿರೀಕ್ಷೆ
ಪ್ರಧಾನಿ ನರೇಂದ್ರ ಮೋದಿ ಮಾರ್ಚ್ನಲ್ಲಿ ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದೆ. ಅದಕ್ಕೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ನೀಡಿ, ಶಕ್ತಿ ಕೇಂದ್ರ ಮತ್ತು ಮಹಾ ಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಭೇಟಿ ನಡೆಸಲಿದ್ದಾರೆ. ಕಳೆದ ಬಾರಿ ಬಿ.ಸಿ.ರೋಡ್ನಲ್ಲಿ ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ಕ್ಷೇತ್ರಗಳ ಶಕ್ತಿ ಕೇಂದ್ರದಆರು ಸಾವಿರ ಪದಾಧಿಕಾರಿಗಳ ಸಭೆ ನಡೆಸಿದಂತೆ, ಈ ಬಾರಿ ಮಂಗಳೂರಿನಲ್ಲಿ ಸಭೆ ನಡೆಸಲಿದ್ದು, ಅಂತಿಮಗೊಂಡಿಲ್ಲ ಎನ್ನುತ್ತವೆ ಪಕ್ಷದ ಮೂಲಗಳು.