ಆ್ಯಪ್ನಗರ

ಶಿಸ್ತು ಉಳಿಸಿಕೊಳ್ಳದಿದ್ದರೆ ಕಾಂಗ್ರೆಸ್ ಸ್ಥಿತಿ ಬಿಜೆಪಿಗೂ ಬಂದೀತು: ಡಿವಿಎಸ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಎಸ್‌ಡಿಪಿಐ ಅಲ್ಲಲ್ಲಿ ಸದ್ದು ಮಾಡುತ್ತಿದೆ. ಇದು ದೇಶ ವಿರೋಧಿಗಳಿಂದ ಕುಮ್ಮಕ್ಕು ಪಡೆದ ಸಂಘಟನೆ. ಒಂದೆರಡು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದಿದೆ ಎಂಬ ಮಾಹಿತಿ ಇದೆ. ಭವಿಷ್ಯದಲ್ಲಿ ಆ ಪಕ್ಷವನ್ನು ಕಿತ್ತೊಗೆಯುವ ಕೆಲಸವಾಗಬೇಕು ಎಂದು ಡಿವಿಎಸ್ ಕರೆ ನೀಡಿದರು.

Vijaya Karnataka Web 19 Jan 2021, 3:14 pm
ಪುತ್ತೂರು: ಶಿಸ್ತಿಗೆ ಹೆಸರಾದ ಬಿಜೆಪಿ ಈ ಕಾರಣದಿಂದಾಗಿಯೇ ಬಲಿಷ್ಠವಾಗಿ ಬೆಳೆದು ನಿಂತಿದೆ. ಅದೇ ಶಿಸ್ತು ಉಳಿಸಿಕೊಂಡರೆ ಮಾತ್ರ ಪಕ್ಷ ಸದೃಢವಾಗಿ ಬೆಳೆಯಬಲ್ಲದು. ಇಲ್ಲವಾದರೆ ಕಾಂಗ್ರೆಸ್ ಸ್ಥಿತಿಯೇ ಬರಬಹುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಎಚ್ಚರಿಸಿದ್ದಾರೆ.
Vijaya Karnataka Web ಡಿವಿ ಸದಾನಂದಗೌಡ
ಡಿವಿ ಸದಾನಂದಗೌಡ


ಪುತ್ತೂರಿನಲ್ಲಿ ಮಂಗಳವಾರ ನಡೆದ ಜನಸೇವಕ ಸಮಾವೇಶ ಮತ್ತು ನೂತನ ಸಚಿವ ಅಂಗಾರರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಾಂಗ್ರೆಸ್‌ನಲ್ಲೂ ಉತ್ತಮ ನಾಯಕರಿದ್ದರು. ಇವತ್ತು ಆ ಪಕ್ಷ ಹೀನಾಯ ಸ್ಥಿತಿಗೆ ತಲುಪಲು ಅಶಿಸ್ತೇ ಕಾರಣ. ಬಿಜೆಪಿಯನ್ನು ಪಾರ್ಟಿ ವಿದ್ ಡಿಫರೆನ್ಸ್ ಎನ್ನಲಾಗುತ್ತಿದೆ. ಈ ಶಿಸ್ತನ್ನು ನಾವೆಲ್ಲ ಉಳಿಸಿಕೊಳ್ಳಬೇಕು. ಪಕ್ಷದ ಬಗ್ಗೆ ಎಲ್ಲಿ ಮಾತನಾಡಬೇಕೋ ಅಲ್ಲೇ ಮಾತನಾಡಬೇಕು. ಎಲ್ಲೋ ಹೊಟೇಲ್‌ನಲ್ಲಿ ಕುಳಿತು ಮಾತನಾಡುವುದಲ್ಲ. ಇಲ್ಲದಿದ್ದರೆ ಕಾಂಗ್ರೆಸ್ ಸ್ಥಿತಿ ನಮಗೂ ಬರಬಹುದು ಎಂದರು.

ನಾವು ಮಾತ್ರ ನಿರಂತರ ದೇಶ ಆಳುತ್ತೇವೆ ಎಂಬ ಭ್ರಮೆ ಮತ್ತು ಅಹಂಕಾರದಲ್ಲಿದ್ದ ಕಾಂಗ್ರೆಸ್‌ನ ಅಡ್ರೆಸ್ ಹುಡುಕುವ ಸ್ಥಿತಿ ಬಂದಿದೆ. ಪ್ರತಿಪಕ್ಷವೇ ಇಲ್ಲದೆ ಕೇವಲ ಬಿಜೆಪಿಯೊಂದೇ ಆವರಿಸುವ ದಿನ ಬರಬೇಕು. ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ರಾಜ್ಯದ ಶೇ. 63 ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿದೆ. ಅಧಿಕಾರದ ಅಮಲಿನಲ್ಲಿ ಮೆರೆಯುತ್ತಿದ್ದವರ ಅಂತಿಮ ದಿನಗಳು ಬಂದಿವೆ. ಕಾಂಗ್ರೆಸ್ ಹೋಳಾದ ಪಕ್ಷವಾಗಿದ್ದು, ಡಿಕೆಶಿ ಬಣ, ಸಿದ್ದು ಬಣ ಎಂದು ಇಬ್ಭಾಗವಾಗಿದೆ. ವಿರೋಧಿಗಳಿಗೆ ನಾವು ಆಹಾರವಾಗಬಾರದು. ನಮ್ಮ ಮಾತು, ಕೆಲಸಗಳಿಂದ ಇತರರಿಗೆ ಮಾದರಿಯಾಗಬೇಕು ಎಂದು ಸಚಿವ ಡಿವಿಎಸ್ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಎಸ್‌ಡಿಪಿಐ ಅಲ್ಲಲ್ಲಿ ಸದ್ದು ಮಾಡುತ್ತಿದೆ. ಇದು ದೇಶ ವಿರೋಧಿಗಳಿಂದ ಕುಮ್ಮಕ್ಕು ಪಡೆದ ಸಂಘಟನೆ. ಒಂದೆರಡು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿದಿದೆ ಎಂಬ ಮಾಹಿತಿ ಇದೆ. ಭವಿಷ್ಯದಲ್ಲಿ ಆ ಪಕ್ಷವನ್ನು ಕಿತ್ತೊಗೆಯುವ ಕೆಲಸವಾಗಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಕರೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ