ಆ್ಯಪ್ನಗರ

ಮಂಗಳೂರು: ಆಳ ಸಮುದ್ರದಲ್ಲಿ ಬೋಟ್ ದುರಂತಕ್ಕೀಡಾಗಿ 6 ಮಂದಿ ಮೀನುಗಾರರು ನಾಪತ್ತೆ, 19 ಮಂದಿಯ ರಕ್ಷಣೆ!

ಆಳಸಮುದ್ರ ಮೀನುಗಾರಿಕೆಗೆ ಪ್ರಶಾಂತ್ ಕುಳಾಯಿ ಮಾಲೀಕತ್ವದ ಶ್ರೀ ರಕ್ಷಾ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ಪಣಂಬೂರ್‌ನ ದಕ್ಕೆಗೆ ಮರಳುತ್ತಿರುವ ಸುಮಾರು 10 ನಾಟಿಕಲ್ ದೂರದಲ್ಲಿ ಬೋಟ್‌ಗೆ ಏನೋ ಡಿಕ್ಕಿ ಹೊಡೆದಂತಾಗಿ ನೋಡು ನೋಡುತ್ತಿದ್ದಂತೆಯೇ ಬೋಟ್‌ ಮುಗುಚಿ ಬಿದ್ದಿದೆ.

Vijaya Karnataka 1 Dec 2020, 10:58 am
ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್‌ವೊಂದು ದುರಂತಕ್ಕೀಡಾಗಿ ಮಗುಚಿ ಬಿದ್ದ ಪರಿಣಾಮ 6ಮಂದಿ ಸಮುದ್ರದಲ್ಲಿ ನಾಪತ್ತೆಯಾಗಿದ್ದು, 19ಮಂದಿಯನ್ನು ರಕ್ಷಣೆ ಮಾಡಲಾಗಿದೆ. ನಾಪತ್ತೆಯಾದವರು ಕಸಬಾ ಬೆಂಗರೆ ಸುತ್ತಮುತ್ತಲ ನಿವಾಸಿಗಳೆಂದು ತಿಳಿದು ಬಂದಿದೆ.
Vijaya Karnataka Web mangaluru boat tragedy


ಸೋಮವಾರ ಬೆಳಗ್ಗೆ ಅರಬ್ಬಿ ಸಮುದ್ರದಲ್ಲಿನ ಆಳಸಮುದ್ರದ ಮೀನುಗಾರಿಕೆಗೆ ಪ್ರಶಾಂತ್ ಕುಳಾಯಿ ಮಾಲೀಕತ್ವದ ಶ್ರೀ ರಕ್ಷಾ ಬೋಟ್ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ನಡೆಸಿ ರಾತ್ರಿ ವೇಳೆ ಪಣಂಬೂರ್‌ನ ದಕ್ಕೆಗೆ ಮರಳುತ್ತಿರುವ ಸುಮಾರು 10 ನಾಟಿಕಲ್ ದೂರದಲ್ಲಿ ಬೋಟ್‌ಗೆ ಏನೋ ಡಿಕ್ಕಿ ಹೊಡೆದಂತಾಗಿದೆ, ನೋಡ ನೋಡುತ್ತಿದ್ದಂತೆ ಗಾಳಿಯ ವೇಗಕ್ಕೆ ಬೋಟ್ ಮಗುಚಿ ಬಿದ್ದಿದೆ.

ಈ ಅವಘಡಕ್ಕೆ ಬೋಟ್‌ನಲ್ಲಿದ್ದ 6 ಮಂದಿ ನಾಪತ್ತೆಯಾಗಿದ್ದಾರೆ. ಬೋಟ್‌ನ ಚಾಲಕ ಸೇರಿದಂತೆ 19ಮಂದಿ ಡಿಂಗಿ (ಚಿಕ್ಕ ದೋಣಿ)ಯಲ್ಲಿ ರಕ್ಷಣೆ ಪಡೆದು ಉಳಿದ ಬೋಟ್‌ನವರ ಬಳಿ ಸಹಾಯಯಾಚಿಸುತ್ತಿದ್ದರು. ಇದನ್ನು ದೂರದಲ್ಲಿದ್ದ ಬೋಟ್‌ನವರು ಗಮನಿಸಿ ಕೂಡಲೇ ಘಟನಾ ಸ್ಥಳಕ್ಕೆ ತೆರಳಿ 19ಮಂದಿಯನ್ನು ರಕ್ಷಣೆ ಮಾಡಿ, ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ನಾಪತ್ತೆಯಾದ 6 ಮಂದಿಗೆ ಕರಾವಳಿ ರಕ್ಷಣಾ ಪಡೆ ಶೋಧ ಕಾರ್ಯ ನಡೆಸುತ್ತಿದೆ. ಪಣಂಬೂರು ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಮಂಗಳೂರಿನಲ್ಲಿ ಉಗ್ರ ಬರಹ: ಆರೋಪಿಗಳ ಸುಳಿವಿಲ್ಲ, ಪೊಲೀಸರಿಗೆ ಬಿಸಿತುಪ್ಪವಾದ ಪ್ರಕರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ