ಆ್ಯಪ್ನಗರ

ಶಿರೂರು ಹೊಳೆಯಲ್ಲಿ ಕೊಚ್ಚಿಹೋದ ದೋಣಿಗಳು

ಕಳೆದ ನಾಲ್ಕೈದು ದಿನದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರೂರು ಹೊಳೆಯ ನೀರಿನ ಸೆಳೆತ ತೀವ್ರಗೊಂಡ ಪರಿಣಾಮ ಇಲ್ಲಿನ ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ್ದ 2 ಮೀನುಗಾರಿಕೆ ಬೋಟ್‌ ಹಾಗೂ ಆರು ದೋಣಿಗಳು ಸೋಮವಾರ ತಡರಾತ್ರಿ ನೀರಿನಲ್ಲಿ ಕೊಚ್ಚಿಹೋಗಿ ಕೋಟ್ಯಂತರ ರೂ. ನಷ್ಟವಾಗಿದೆ.

Vijaya Karnataka 15 Aug 2018, 8:47 am
ಬೈಂದೂರು( ದಕ್ಷಿಣ ಕನ್ನಡ ): ಕಳೆದ ನಾಲ್ಕೈದು ದಿನದಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರೂರು ಹೊಳೆಯ ನೀರಿನ ಸೆಳೆತ ತೀವ್ರಗೊಂಡ ಪರಿಣಾಮ ಇಲ್ಲಿನ ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ್ದ 2 ಮೀನುಗಾರಿಕೆ ಬೋಟ್‌ ಹಾಗೂ ಆರು ದೋಣಿಗಳು ಸೋಮವಾರ ತಡರಾತ್ರಿ ನೀರಿನಲ್ಲಿ ಕೊಚ್ಚಿಹೋಗಿ ಕೋಟ್ಯಂತರ ರೂ. ನಷ್ಟವಾಗಿದೆ.
Vijaya Karnataka Web boats


ಭಾರಿ ಮಳೆಯಿಂದಾಗಿ ಶಿರೂರು ಹೊಳೆ ತುಂಬಿ ಹರಿಯುತ್ತಿದ್ದು, ನೀರಿನ ಸೆಳೆತಕ್ಕೆ ನದಿಗೆ ಹೊಂದಿಕೊಂಡಿರುವ ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿ, ಬೋಟ್‌ ಹಾಗೂ ದೋಣಿಗಳ ಹಗ್ಗ ತುಂಡಾದ ಪರಿಣಾಮ ಶಿರೂರು ಪ್ರಶಾಂತ ಪೂಜಾರಿ ಎಂಬವರಿಗೆ ಸೇರಿದ ಹಾಗೂ ಭಟ್ಕಳ ತಾಲೂಕಿನ ಬೆಳ್ಕೆ ಸಿದ್ದನಮನೆ ಮಾದೇಶ ಗೋವಿಂದ ಮೊಗೇರ ಅವರಿಗೆ ಸೇರಿದ ಬೋಟ್‌ ಕೊಚ್ಚಿಕೊಂಡು ಹೋಗಿದ್ದಲ್ಲದೆ, ಉಪ್ಪ್ಪುಂದ ಸಾಗರದೀಪ ಅವರ 3 ಮೀನುಗಾರಿಕೆ ದೋಣಿ ಹಾಗೂ ಉಪ್ಪ್ಪುಂದ ಬಪ್ರಿಹಿಂಡ್‌ ಪ್ರಸಾದ್‌ ಬಿ.ಎಚ್‌.ಕೆ. ಅವರ 3 ದೋಣಿಗಳು ಕೂಡ ಕೊಚ್ಚಿ ಹೋಗಿ ಶಿರೂರು ಕಳುಹಿತ್ಲು ಕಡಲತೀರದಲ್ಲಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಪತ್ತೆಯಾಗಿತ್ತು.

ಹಾನಿಗೀಡಾದ ಎರಡು ಬೋಟ್‌ಗಳಲ್ಲಿ ತಲಾ 35 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಿದರೆ, ಆರು ದೋಣಿಗಳ ಎಂಜಿನ್‌, ಬಲೆ, ಇನ್ನಿತರ ಪರಿಕರ ಸೇರಿದಂತೆ ಒಟ್ಟು ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಮೀನುಗಾರಿಕೆ ಋುತು ಆರಂಭದಲ್ಲಿಯೇ ಆದ ಭಾರಿ ಹಾನಿ ಮೀನುಗಾರರನ್ನು ಆತಂಕಕ್ಕೀಡು ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ