ಆ್ಯಪ್ನಗರ

ಜು.22ರಂದು ಬೋಲಾವ ವಿಠಲ ಸಂತವಾಣಿ

ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ಉತ್ಕೃಷ್ಟ ಮಟ್ಟದ ಸಂತವಾಣಿ 'ಬೋಲಾವ ವಿಠಲ' ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಜು.22ರಂದು ಸಂಜೆ 5.30ರಿಂದ ಆಯೋಜಿಸಿದೆ.

Vijaya Karnataka 20 Jun 2019, 3:34 pm
ಮಂಗಳೂರು: ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನವು ಉತ್ಕೃಷ್ಟ ಮಟ್ಟದ ಸಂತವಾಣಿ 'ಬೋಲಾವ ವಿಠಲ' ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಜು.22ರಂದು ಸಂಜೆ 5.30ರಿಂದ ಆಯೋಜಿಸಿದೆ.
Vijaya Karnataka Web bolava vittala santhavaani on july 22
ಜು.22ರಂದು ಬೋಲಾವ ವಿಠಲ ಸಂತವಾಣಿ


ಪ್ರತಿ ವರ್ಷ ಆಷಾಢÜ ಮಾಸದಲ್ಲಿ ಶ್ರೀ ಪಾಂಡುರಂಗನ ನಾಮಸ್ಮರಣೆ ಮಾಡುವ ಉದ್ದೇಶದಿಂದ ದೇಶದ ಪ್ರಮುಖ ನಗರಗಳಲ್ಲಿ ಮುಂಬಯಿಯ ಪ್ರತಿಷ್ಠಿತ ಸಂಗೀತ ಆಯೋಜಕ ಸಂಸ್ಥೆ ಪಂಚಮ್‌ ನಿಶಾದ್‌ 'ಬೋಲಾವ ವಿಠಲ' ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ.

ಪುಣೆ, ಮುಂಬಯಿ, ನಾಸಿಕ್‌, ಚೆನ್ನೈ, ಹೈದರಾಬಾದ್‌, ಹೊಸದಿಲ್ಲಿ, ಗೋವಾ, ಕೊಲ್ಕೊತ್ತಾ, ಬೆಂಗಳೂರು ಹೀಗೆ ದೇಶದ ನಾನಾ ಪ್ರಮುಖ ನಗರಗಳಲ್ಲಿ ಈ ಕಾರ‍್ಯಕ್ರಮವನ್ನು ಕಳೆದ ಹಲವು ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದೆ.

ಇದೀಗ ದ್ವಿತೀಯ ಬಾರಿಗೆ ಪಂಚಮ್‌ ನಿಶಾದ್‌ 'ಬೋಲಾವ ವಿಠಲ' ಸಂಗೀತ ಕಾರ‍್ಯಕ್ರಮವನ್ನು ಮಂಗಳೂರಿನ ಜನತೆಗೆ ಪ್ರಸ್ತುತ ಪಡಿಸುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಪುಣೆಯ ಪಂಡಿತ್‌ ರಘುನಂದನ್‌ ಪಣ್ಶೀಕರ್‌, ಚೆನ್ನೈನ ವಿದುಷಿ ಬಾಂಬೆ ಜಯಶ್ರೀ, ಹುಬ್ಬಳ್ಳಿಯ ಪಂಡಿತ್‌ ಜಯತೀರ್ಥ ಮೇವುಂಡಿ ಭಾಗವಹಿಸಲಿದ್ದಾರೆ.

ಮೂವರು ಶ್ರೇಷ್ಠ ಹಾಡುಗಾರರು ಸುಮಾರು ಮೂರು ಗಂಟೆ ಕಾಲ ಸಂಗೀತ ರಸಧಾರೆ ಹರಿಸಲಿದ್ದಾರೆ. ಈ ವಿಶೇಷ 'ಸಂತವಾಣಿ' ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಉಚಿತ ಪ್ರವೇಶಾವಕಾಶ (ಪ್ರವೇಶ ಪತ್ರದ ಮೂಲಕ ಮಾತ್ರ) ಇದೆ. ಜು.15ರಿಂದ ಪ್ರವೇಶಪತ್ರವನ್ನು ಆಸಕ್ತರು ಮಂಗಳೂರಿನ ಕೊಡಿಯಾಲ್‌ಬೈಲ್‌ ಭಗವತಿ ದೇವಸ್ಥಾನ ಹತ್ತಿರದ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನಲ್ಲಿ ಹೆಸರು ನೋಂದಾಯಿಸಿ ಪಡೆದುಕೊಳ್ಳಬಹುದು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ನರೇಂದ್ರ ಎಲ್‌. ನಾಯಕ್‌ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ