ಆ್ಯಪ್ನಗರ

ಮಂಗಳೂರು: ಲಿಫ್ಟ್‌ನಲ್ಲಿ ಸಿಲುಕಿ ಬಾಲಕ ಸಾವು

ಈತ ಲಿಫ್ಟ್ ಓಪನ್ ಆದಾಗ ಅದರೊಳಗೆ ಹೋಗುವ ಸಂದರ್ಭ ಏಕಾಏಕಿ ಲಿಫ್ಟ್ ಚಾಲನೆ ಆಗಿದೆ. ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

Vijaya Karnataka Web 27 Mar 2019, 5:51 pm
ಮಂಗಳೂರು: ನಗರದ ಚಿಲಿಂಬಿ ಸಮೀಪದ ಭಾರತೀ ಹೈಟ್ಸ್ ವಸತಿ ಸಮುಚ್ಚಯದಲ್ಲಿ ಲಿಫ್ಟ್‌ನಲ್ಲಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ.
Vijaya Karnataka Web ಲಿಫ್ಟ್‌ ದುರಂತ
ಲಿಫ್ಟ್‌ ದುರಂತ


ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ನಿವಾಸಿ, ಇದೇ ಸಮುಚ್ಚಯದಲ್ಲಿ ಸೆಕ್ಯೂರಿಟಿ ಗಾರ್ಡ್‌ನ ಮಗ ಮಂಜುನಾಥ್ ಮೃತಪಟ್ಟ ಬಾಲಕ.

ಈತ ಲಿಫ್ಟ್ ಓಪನ್ ಆದಾಗ ಅದರೊಳಗೆ ಹೋಗುವ ಸಂದರ್ಭ ಏಕಾಏಕಿ ಲಿಫ್ಟ್ ಚಾಲನೆ ಆಗಿದೆ. ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

ಈ ಸಂದರ್ಭ ಬಾಲಕ ಲಿಫ್ಟ್ ಎಡೆಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾನೆ.

ಲಿಫ್ಟ್ ಹೇಗೆ ಚಾಲನೆ ಆಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ