'ಬೇಡದ ಪುಸ್ತಕ ತಂದಿಡಿ, ಬೇಕಾದ ಪುಸ್ತಕ ಕೊಂಡೊಯ್ಯಿರಿ': ಪುಸ್ತಕ ಪ್ರಿಯರಿಗೆ ಎಂಆರ್ಪಿಎಲ್ನಲ್ಲೊಂದು ವಿನೂತನ ಯೋಜನೆ
ಸಾಮಾನ್ಯವಾಗಿ ಮನೆಯ ಲೈಬ್ರೆರಿಯಲ್ಲಿ, ಕವಾಟಿನಲ್ಲಿರುವ ಪುಸ್ತಕಗಳಲ್ಲಿ ಹಲವು ಪುಸ್ತಕಗಳು ಉಪಯೋಗಕ್ಕೆ ಬರುವುದಿಲ್ಲ. ಒಂದೆರಡು ಬಾರಿ ಓದಿದರೆ ಹೆಚ್ಚು. ಮತ್ತೆ ಆ ಪುಸ್ತಕವನ್ನು ತೆರೆದು ಕೂಡಾ ನೋಡುವವರು ಇರುವುದಿಲ್ಲ. ಅಂತಹ ಮಂದಿಗಾಗಿ ಎಂಆರ್ಪಿಎಲ್ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಹಾಕಿಕೊಂಡ ಯೋಜನೆ ಹೆಚ್ಚು ಉಪಯುಕ್ತವೆನಿಸಿದೆ.
Vijaya Karnataka Web 19 Jun 2019, 5:23 pm
ಆರ್.ಸಿ. ಭಟ್ ಮಂಗಳೂರು
ನಿಮಗೆ ಬೇಡವಾದ ಪುಸ್ತಕವನ್ನು ತಂದಿಡಿ, ಬೇಕಾದ ಪುಸ್ತಕವನ್ನು ಮನೆಗೊಯ್ಯಿರಿ. ಇಂತಹ ವಿನೂತನ ಯೋಜನೆಯೊಂದನ್ನು ಸಾರ್ವಜನಿಕ ರಂಗದ ಉದ್ದಿಮೆ ಎಂಆರ್ಪಿಎಲ್ನ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಅನುಷ್ಠಾನಕ್ಕೆ ತಂದಿದ್ದು, ಪುಸ್ತಕ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಸಾಮಾನ್ಯವಾಗಿ ಮನೆಯ ಲೈಬ್ರೆರಿಯಲ್ಲಿ, ಕವಾಟಿನಲ್ಲಿರುವ ಪುಸ್ತಕಗಳಲ್ಲಿ ಹಲವು ಪುಸ್ತಕಗಳು ಉಪಯೋಗಕ್ಕೆ ಬರುವುದಿಲ್ಲ. ಒಂದೆರಡು ಬಾರಿ ಓದಿದರೆ ಹೆಚ್ಚು. ಮತ್ತೆ ಆ ಪುಸ್ತಕವನ್ನು ತೆರೆದು ಕೂಡಾ ನೋಡುವವರು ಇರುವುದಿಲ್ಲ. ಅಂತಹ ಮಂದಿಗಾಗಿ ಎಂಆರ್ಪಿಎಲ್ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಹಾಕಿಕೊಂಡ ಯೋಜನೆ ಹೆಚ್ಚು ಉಪಯುಕ್ತವೆನಿಸಿದೆ.
ಬೇಡದ ಪುಸ್ತಕವನ್ನು ತಂದು ಇಡುವ ಸಂದರ್ಭ ಇನ್ನಾರೋ ತಂದಿಟ್ಟಿದ್ದ ಪುಸ್ತಕಗಳ ಬಗ್ಗೆ ಕಣ್ಣಾಡಿಸಿ ತಮಗೆ ಬೇಕಾದ ಪುಸ್ತಕವನ್ನು ಆರಿಸಿ ಮನೆಗೆ ಒಯ್ಯಬಹುದು. ಕಥೆ, ಕಾದಂಬರಿ, ಕವನ ಸಂಕಲನ, ಲಘುಬರಹ, ಮ್ಯಾಗಝಿನ್, ಪ್ರವಾಸ ಕಥನ ಹೀಗೆ ಯಾವುದೇ ಪುಸ್ತಕ ನಿಮಗೆ ಬೇಡವಾದರೆ ಅದನ್ನು ಎಂಆರ್ಪಿಎಲ್ ಬುಕ್ ನೆಸ್ಟ್ನಲ್ಲಿ ತಂದಿಡಬಹುದು. ಈ ಯೋಜನೆಯ ಸದುಪಯೋಗವನ್ನು ಯಾರು ಬೇಕಾದರೂ ಪಡೆಯಬಹುದಾಗಿದ್ದು, ಇದು ಸಂಪೂರ್ಣ ಉಚಿತವಾಗಿರುತ್ತದೆ.
ಹತ್ತು ದಿನಗಳ ಹಿಂದಷ್ಟೇ ಆರಂಭವಾದ ಈ ಯೋಜನೆಗೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದಕ್ಕಾಗಿ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ನೂರಕ್ಕೂ ಅಧಿಕ ಮಂದಿ ಬುಕ್ ನೆಸ್ಟ್ಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.
ಶಾಲಾ, ಕಾಲೇಜುಗಳಿಗೂ ವಿಸ್ತರಣೆ: ಎಂಆರ್ಪಿಎಲ್ ಮುಖ್ಯ ವಿಚಕ್ಷಣಾಧಿಕಾರಿ ರಾಜೀವ್ ಕುಶ್ವಾ ನೇತೃತ್ವದಲ್ಲಿ ಎಂಆರ್ಪಿಎಲ್ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಅಧ್ಯಕ್ಷ ಗೋಪಿರಾಂ ಉಸ್ತುವಾರಿಯಲ್ಲಿ ಆರಂಭವಾದ ಈ ಯೋಜನೆ ಸದ್ಯ ಎಂಆರ್ಪಿಎಲ್ ಕ್ಲಬ್ನಲ್ಲಿ ಮಾತ್ರ ನಡೆಯುತ್ತಿದೆ. ಮುಂದೆ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನು ಕ್ಲಬ್ ಹೊಂದಿದೆ.
ನಿಮಗೆ ಬೇಡವಾದ ಪುಸ್ತಕವನ್ನು ತಂದಿಡಿ, ಬೇಕಾದ ಪುಸ್ತಕವನ್ನು ಮನೆಗೊಯ್ಯಿರಿ. ಇಂತಹ ವಿನೂತನ ಯೋಜನೆಯೊಂದನ್ನು ಸಾರ್ವಜನಿಕ ರಂಗದ ಉದ್ದಿಮೆ ಎಂಆರ್ಪಿಎಲ್ನ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಅನುಷ್ಠಾನಕ್ಕೆ ತಂದಿದ್ದು, ಪುಸ್ತಕ ಪ್ರಿಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಸಾಮಾನ್ಯವಾಗಿ ಮನೆಯ ಲೈಬ್ರೆರಿಯಲ್ಲಿ, ಕವಾಟಿನಲ್ಲಿರುವ ಪುಸ್ತಕಗಳಲ್ಲಿ ಹಲವು ಪುಸ್ತಕಗಳು ಉಪಯೋಗಕ್ಕೆ ಬರುವುದಿಲ್ಲ. ಒಂದೆರಡು ಬಾರಿ ಓದಿದರೆ ಹೆಚ್ಚು. ಮತ್ತೆ ಆ ಪುಸ್ತಕವನ್ನು ತೆರೆದು ಕೂಡಾ ನೋಡುವವರು ಇರುವುದಿಲ್ಲ. ಅಂತಹ ಮಂದಿಗಾಗಿ ಎಂಆರ್ಪಿಎಲ್ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಹಾಕಿಕೊಂಡ ಯೋಜನೆ ಹೆಚ್ಚು ಉಪಯುಕ್ತವೆನಿಸಿದೆ.
ಬೇಡದ ಪುಸ್ತಕವನ್ನು ತಂದು ಇಡುವ ಸಂದರ್ಭ ಇನ್ನಾರೋ ತಂದಿಟ್ಟಿದ್ದ ಪುಸ್ತಕಗಳ ಬಗ್ಗೆ ಕಣ್ಣಾಡಿಸಿ ತಮಗೆ ಬೇಕಾದ ಪುಸ್ತಕವನ್ನು ಆರಿಸಿ ಮನೆಗೆ ಒಯ್ಯಬಹುದು. ಕಥೆ, ಕಾದಂಬರಿ, ಕವನ ಸಂಕಲನ, ಲಘುಬರಹ, ಮ್ಯಾಗಝಿನ್, ಪ್ರವಾಸ ಕಥನ ಹೀಗೆ ಯಾವುದೇ ಪುಸ್ತಕ ನಿಮಗೆ ಬೇಡವಾದರೆ ಅದನ್ನು ಎಂಆರ್ಪಿಎಲ್ ಬುಕ್ ನೆಸ್ಟ್ನಲ್ಲಿ ತಂದಿಡಬಹುದು. ಈ ಯೋಜನೆಯ ಸದುಪಯೋಗವನ್ನು ಯಾರು ಬೇಕಾದರೂ ಪಡೆಯಬಹುದಾಗಿದ್ದು, ಇದು ಸಂಪೂರ್ಣ ಉಚಿತವಾಗಿರುತ್ತದೆ.
ವಿಶೇಷವಾಗಿ ಸಂಸ್ಥೆಯ ಸಿಎಸ್ಆರ್ ಕಾರ್ಯಕ್ರಮದ ಭಾಗವಾಗಿ ಪ್ರತಿ ಶಾಲಾ, ಕಾಲೇಜುಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಪ್ರತಿ ಊರಿನ ಪುಸ್ತಕ ಪ್ರಿಯರಿಗೂ ಈ ಪುಸ್ತಕ ಗೂಡಿನ ಪ್ರಯೋಜನ ದೊರೆಯುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ಈ ಯೋಜನೆಯಿಂದ ಹೆಚ್ಚು ಹೆಚ್ಚು ಮಂದಿ ಪ್ರಯೋಜನ ಪಡೆಯುವಂತಾಗಬೇಕು. ಅದಕ್ಕಾಗಿ ಇದನ್ನು ಶಾಲಾ, ಕಾಲೇಜುಗಳ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಹತ್ತು ದಿನಗಳ ಹಿಂದಷ್ಟೇ ಆರಂಭವಾದ ಈ ಯೋಜನೆಗೆ ಸಾರ್ವಜನಿಕ ವಲಯದಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದಕ್ಕಾಗಿ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ನೂರಕ್ಕೂ ಅಧಿಕ ಮಂದಿ ಬುಕ್ ನೆಸ್ಟ್ಗೆ ಭೇಟಿ ನೀಡಿ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದಾರೆ.
ಶಾಲಾ, ಕಾಲೇಜುಗಳಿಗೂ ವಿಸ್ತರಣೆ: ಎಂಆರ್ಪಿಎಲ್ ಮುಖ್ಯ ವಿಚಕ್ಷಣಾಧಿಕಾರಿ ರಾಜೀವ್ ಕುಶ್ವಾ ನೇತೃತ್ವದಲ್ಲಿ ಎಂಆರ್ಪಿಎಲ್ ಎಂಪ್ಲಾಯಿಸ್ ರಿಕ್ರಿಯೇಶನ್ ಸೆಂಟರ್ ಅಧ್ಯಕ್ಷ ಗೋಪಿರಾಂ ಉಸ್ತುವಾರಿಯಲ್ಲಿ ಆರಂಭವಾದ ಈ ಯೋಜನೆ ಸದ್ಯ ಎಂಆರ್ಪಿಎಲ್ ಕ್ಲಬ್ನಲ್ಲಿ ಮಾತ್ರ ನಡೆಯುತ್ತಿದೆ. ಮುಂದೆ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನು ಕ್ಲಬ್ ಹೊಂದಿದೆ.