ಆ್ಯಪ್ನಗರ

ಮೂಡುಬಿದಿರೆ: ಬಸ್ಸು ಲಾರಿ ಡಿಕ್ಕಿ, 33 ಮಂದಿಗೆ ಗಾಯ

ಮೂಡುಬಿದಿರೆ: ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ತೋಡಾರು ಮಸೀದಿ ಬಳಿ ಮಂಗಳವಾರ ಬೆಳಗ್ಗೆ ಖಾಸಗಿ ಬಸ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಸುಮಾರು 33 ಮಂದಿ ಗಾಯಗೊಂಡಿದ್ದಾರೆ.

Vijaya Karnataka 24 Jul 2019, 5:00 am
ಮೂಡುಬಿದಿರೆ: ಮಂಗಳೂರು ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ತೋಡಾರು ಮಸೀದಿ ಬಳಿ ಮಂಗಳವಾರ ಬೆಳಗ್ಗೆ ಖಾಸಗಿ ಬಸ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಸುಮಾರು 33 ಮಂದಿ ಗಾಯಗೊಂಡಿದ್ದಾರೆ.
Vijaya Karnataka Web bus lorry accident
ಮೂಡುಬಿದಿರೆ: ಬಸ್ಸು ಲಾರಿ ಡಿಕ್ಕಿ, 33 ಮಂದಿಗೆ ಗಾಯ


ಈ ಪೈಕಿ ಲಾರಿ ಚಾಲಕ ಆದ್ರಾ ಸಾಹೇಬ್‌(48)ಅವರಿಗೆ ಗಂಭೀರವಾಗಿ ಗಾಯವಾಗಿದ್ದು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ ಅಬ್ದುಲ್‌ ಗಫೂರ್‌, ಪ್ರಯಾಣಿಕರಾದ ಕುಶಲ, ಸೀತಾ, ಸಿಸಿಲಿಯಾ, ಮುಸ್ತಫಾ, ಪ್ರಮೀಳಾ ಪಿಂಟೋ ಸಹಿತ 8 ಮಂದಿಗೆ ತೀವ್ರ ಗಾಯಗಳಾಗಿದ್ದು ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಪಸ್ವಲ್ಪ ಗಾಯಗೊಂಡಿರುವ ಸುಮಾರು 25 ಮಂದಿ ಮೂಡುಬಿದಿರೆ ಆಳ್ವಾಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಸ್ಸು ಪೆರಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದರೆ ಲಾರಿಮಂಗಳೂರುನಿಂದ ಅಜೆಕಾರ್‌ಗೆ ಸಿಮೆಂಟ್‌ ಹೇರಿಕೊಂಡು ಬರುತ್ತಿತ್ತು. ಲಾರಿ ಮತ್ತು ಬಸ್ಸು ಜಖಂಗೊಂಡಿದೆ. ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು. ಮೂಡುಬಿದಿರೆ ಪೋಲಿಸರು ಮಹಜರು ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ