ಆ್ಯಪ್ನಗರ

ಮಂಗಳೂರು ಉದ್ಯಮಿ ಕೊಲೆ ಪ್ರಕರಣ: ಹಣಕ್ಕಾಗಿ ಮರ್ಡರ್‌, ಇಬ್ಬರ ಬಂಧನ

ಮಂಗಳೂರು ಉದ್ಯಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 25 ಸಾವಿರ ರೂ. ಹಣಕ್ಕಾಗಿ ಕಾವೂರು ಮಲ್ಲಿಲೇಔಟ್‌ ನಿವಾಸಿ ಸುರೇಂದ್ರನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ಪೊಲೀಸ್ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ.

Vijaya Karnataka 10 Nov 2020, 10:04 am
ಮಂಗಳೂರು: ಕಾವೂರು ಮಲ್ಲಿಲೇಔಟ್‌ ನಿವಾಸಿ ಸುರೇಂದ್ರನ್‌ (60) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ನಗರ ಅಪರಾಧ ಪತ್ತೆ ದಳ ಮತ್ತು ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web arrest
ಸಾಂದರ್ಭಿಕ ಚಿತ್ರ


ಕೋಡಿಕಲ್‌ ನಿವಾಸಿ ಸಂತೋಷ್‌ ಸಪಲ್ಯ (43) ಮತ್ತು ಹಾವೇರಿ ನಿವಾಸಿ ಸಿದ್ದು (28) ಬಂಧಿತ ಆರೋಪಿಗಳು.

ಹಣಕ್ಕಾಗಿ ಕೊಲೆ
ಸುರೇಂದ್ರನ್‌ ಅವರು ಸುಮಾರು 2 ವರ್ಷಗಳ ಹಿಂದೆ ಸಂತೋಷ್‌ ಅವರ ಬಳಿ ಟ್ರೆಸ್‌ ಕೆಲಸ ಮಾಡಿಸಿದ್ದರು. ಇದರಲ್ಲಿ 25 ಸಾವಿರ ರೂ. ಹಣ ಕೊಡಲು ಬಾಕಿಯಿದ್ದು, ಅದನ್ನು ಸಂತೋಷ್‌ ಕೇಳುತ್ತಲೇ ಇದ್ದರು. ಆದರೆ ಕೊಡಲು ನಿರಾಕರಿಸಿದ ಕಾರಣಕ್ಕೆ ಅ.3ರಂದು ಸಂತೋಷ್‌ ತನ್ನ ಪರಿಚಯದ ಸಿದ್ದು ಜತೆ ಸುರೇಂದ್ರನ್‌ ಅವರ ಮನೆಗೆ ಬಂದಿದ್ದಾನೆ. ಈ ಸಂದರ್ಭ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಕೋಪಗೊಂಡ ಸಂತೋಷ್‌ ಮತ್ತು ಸಿದ್ದು ಸೇರಿ ಟ್ರೆಸ್‌ ಶೀಟ್‌ ಕಟ್‌ ಮಾಡುವ ಬ್ಲೇಡ್‌ನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ.
ಮಂಗಳೂರಿನಲ್ಲಿ ಕೇರಳ ಉದ್ಯಮಿಯನ್ನು ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಅಪರಾಧ ಪತ್ತೆದಳ ಮತ್ತು ಕಾವೂರು ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿದರು. ಸಂಶಯದ ಮೇರೆಗೆ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣವನ್ನು ಬೇಧಿಸಲು ಯಶಸ್ವಿಯಾದ ಪೊಲೀಸ್‌ ತಂಡಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ