ಆ್ಯಪ್ನಗರ

30ರಂದು ಸಿಜಿಕೆ ಪ್ರಶಸ್ತಿ ಪ್ರಧಾನ

ಕರ್ನಾಟಕ ಬೀದಿನಾಟಕ ಅಕಾಡೆಮಿ ನೀಡುವ ದಕ್ಷಿಣ ಕನ್ನಡ ಜಿಲ್ಲೆಯ ಸಿಜಿಕೆ ರಂಗ ಪ್ರಶಸ್ತಿ ಪ್ರಧಾನ ಸಮಾರಂಭ ಜು.30ರಂದು ಪಾದುವ ಕಾಲೇಜಿನ ಸಭಾಂಗಣದಲ್ಲಿ ಸಂಜೆ 6.15ಕ್ಕೆ ನಡೆಯಲಿದೆ.

Vijaya Karnataka 28 Jul 2019, 3:37 pm
ಮಂಗಳೂರು: ಕರ್ನಾಟಕ ಬೀದಿನಾಟಕ ಅಕಾಡೆಮಿ ನೀಡುವ ದಕ್ಷಿಣ ಕನ್ನಡ ಜಿಲ್ಲೆಯ ಸಿಜಿಕೆ ರಂಗ ಪ್ರಶಸ್ತಿ ಪ್ರಧಾನ ಸಮಾರಂಭ ಜು.30ರಂದು ಪಾದುವ ಕಾಲೇಜಿನ ಸಭಾಂಗಣದಲ್ಲಿ ಸಂಜೆ 6.15ಕ್ಕೆ ನಡೆಯಲಿದೆ.
Vijaya Karnataka Web cgk award presentation on 30th
30ರಂದು ಸಿಜಿಕೆ ಪ್ರಶಸ್ತಿ ಪ್ರಧಾನ


ದಕ್ಷಿಣ ಕನ್ನಡದ ಪ್ರಸಕ್ತ ವರ್ಷದ ಪ್ರಶಸ್ತಿಗೆ ರಂಗಕರ್ಮಿ ಮೋಹನಚಂದ್ರ ಯು. ಅವರನ್ನು ಆಯ್ಕೆ ಮಾಡಲಾಗಿದೆ. ರಂಗಕರ್ಮಿ ಶಶಿಧರ್‌ ಅಡಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಪತ್ರಕರ್ತ ಮನೋಹರ್‌ ಪ್ರಸಾದ್‌ ,ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷ ತೆ ವಹಿಸಲಿದ್ದು, ರಂಗನಟ ಚಂದ್ರಹಾಸ್‌ ಉಳ್ಳಾಲ್‌ ಭಾಗವಹಿಸಲಿದ್ದಾರೆ.

ಪಾದುವ ಶಿಕ್ಷ ಣ ಸಂಸ್ಥೆಯ ಸಂಚಾಲಕ ವಂದನೀಯ ವಿನ್ಸೆಂಟ್‌ ಮೊಂತೇರೊ ಹಾಗೂ ಪ್ರಿನ್ಸಿಪಾಲ್‌ ವಂದನೀಯ ಆಲ್ವಿನ್‌ ಸೆರಾವೊ ಉಪಸ್ಥಿತರಿರುವರು. ಕಾರ್ಯಕ್ರಮದ ಮೊದಲು ಪಾದುವ ಕಾಲೇಜಿನಲ್ಲಿ ನಡೆಯುತ್ತಿರುವ ನೂರು ದಿನಗಳ ರಂಗ ಶಿಬಿರದ ಶಿಬಿರಾರ್ಥಿಗಳಿಂದ ಬೀದಿ ನಾಟಕದ ಪ್ರದರ್ಶನ ಜರುಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಪಾದುವ ರಂಗ ಅಧ್ಯಯನ ಕೇಂದ್ರ, ಅರೆಹೊಳೆ ಪ್ರತಿಷ್ಠಾನ, ಹಾಗೂ ಅಸ್ತಿತ್ವ ಮಂಗಳೂರು ಆಯೋಜಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ