ಆ್ಯಪ್ನಗರ

ತುಂಬೆ ಗ್ರೂಪ್‌, ಬಿಸಿಎಫ್‌ನಿಂದ ಚಾರ್ಟರ್‌ ವಿಮಾನ, ಮಂಗಳೂರಿಗೆ ಬಂದಿಳಿದ ಕನ್ನಡಿಗರು

ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ತಾಯ್ನಾಡಿಗೆ ಮರಳಲಾಗದೆ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಸಹಸ್ರಾರು ಅನಿವಾಸಿ ಕನ್ನಡಿಗರ ಸಂಕಷ್ಟಕ್ಕೆ ತುಂಬೆ ಸಮೂಹ ಸಂಸ್ಥೆ ಮುಂದೆ ಬಂದಿದ್ದು, ಚಾರ್ಟರ್‌ ವಿಮಾನಗಳ ವ್ಯವಸ್ಥೆ ಮಾಡಿದೆ.

Vijaya Karnataka Web 25 Jul 2020, 2:47 pm
ಮಂಗಳೂರು: ಕೋವಿಡ್‌-19 ಲಾಕ್‌ಡೌನ್‌ನಿಂದಾಗಿ ತಾಯ್ನಾಡಿಗೆ ಮರಳಲಾಗದೆ ಅಸಹಾಯಕ ಸ್ಥಿತಿಯಲ್ಲಿ ಸಿಲುಕಿಕೊಂಡಿರುವ ಸಹಸ್ರಾರು ಅನಿವಾಸಿ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಸಾಧ್ಯವಾದಷ್ಟು ಸಂತ್ರಸ್ತರನ್ನು ತಾಯ್ನಾಡಿಗೆ ಕಳುಹಿಸಲು ಸಹಾಯವಾಗುವ ಸದುದ್ದೇಶದಿಂದ ಪ್ರತಿಷ್ಠಿತ ತುಂಬೆ ಸಮೂಹ ಸಂಸ್ಥೆಗಳ ಮತ್ತು ಬ್ಯಾರೀಸ್‌ ಕಲ್ಚರಲ್‌ ಫೋರಂ(ಬಿಸಿಎಫ್‌) ವತಿಯಿಂದ ದುಬೈಯಿಂದ ಮಂಗಳೂರಿಗೆ ಚಾರ್ಟರ್‌ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.
Vijaya Karnataka Web charter flight


ಪ್ರಥಮ ಹಂತವಾಗಿ ಮಂಗಳವಾರ ಯುಎಇಯ ರಾಸ್‌ ಅಲ್‌ ಖೈಮಾದಿಂದ ಮಂಗಳೂರಿಗೆ ವಿಮಾನ ಆಗಮಿಸಿತು. ನೌಕರಿ ಕಳೆದುಕೊಂಡಿರುವ ಕಾರ್ಮಿಕರು, ವೀಸಾ ಅವಧಿ ಮುಗಿದು ತ್ರಿಶಂಕು ಸ್ಥಿತಿಯಲ್ಲಿದ್ದವರು, ಮಧುಮೇಹ, ಹೃದ್ರೋಗ ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿ, ಮಕ್ಕಳು ಸೇರಿದಂತೆ 185 ಪ್ರಯಾಣಿಕರು ತಾಯ್ನಾಡು ತಲುಪಿದರು.

ರಾಸ್‌ ಅಲ್‌ ಖೈಮಾ ವಿಮಾನ ನಿಲ್ದಾಣದಲ್ಲಿ ತುಂಬೆ ಗ್ರೂಪ್‌ ಮಾಲೀಕ ಡಾ. ತುಂಬೆ ಮೊಹಿಯುದ್ದೀನ್‌, ಬಿಸಿಎಫ್‌ ಅಧ್ಯಕ್ಷ ಡಾ. ಬಿ.ಕೆ. ಯೂಸುಫ್‌ ನೇತೃತ್ವದಲ್ಲಿ, ಬಿಸಿಎಫ್‌ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್‌, ಉಪಾಧ್ಯಕ್ಷ ಎಂ.ಇ. ಮೂಳೂರು, ತುಂಬೆ ಗ್ರೂಪ್‌ನ ಫರ್ಹಾದ್‌ ಉಸ್ತುವಾರಿಯಲ್ಲಿ ಪ್ರಮುಖರು ಉಪಸ್ಥಿತರಿದ್ದು, ಬೀಳ್ಕೊಟ್ಟರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸ್ವಾಗತಿಸಿ, ನಿಗದಿತ ಕ್ವಾರಂಟೈನ್‌ಗಳಿಗೆ ಕಳುಹಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ