ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಕರಾವಳಿಯಲ್ಲಿಲ್ಲ ಬಿಸು ಹಬ್ಬದ ಸಂಭ್ರಮ, ತುಳುವಲ್ಲಿ ಶುಭಕೋರಿದ ಬಿಎಸ್‌ವೈ

ಕೊರೊನಾ ಕಾರಣದಿಂದಾಗಿ ಕರಾವಳಿಯಲ್ಲಿ ಬಿಸು ಹಬ್ಬದ ಸಂಭ್ರಮ ಮನೆಮಾಡಿಲ್ಲ. ಮನೆಯಲ್ಲಿ ಸರಳವಾಗಿ ಕರಾವಳಿಗರು ಬಿಸು ಹಬ್ಬವನ್ನು ಆಚರಿಸಿದರು. ಕರಾವಳಿಗರ ಹೊಸ ವರ್ಷಕ್ಕೆ ಸಿಎಂ ಬಿಎಸ್‌ವೈ ತುಳುಭಾಷೆಯಲ್ಲೇ ಶುಭಕೋರಿದ್ದಾರೆ.

Vijaya Karnataka Web 14 Apr 2020, 4:36 pm
ಬೆಂಗಳೂರು: ಕರಾವಳಿಗರಿಗೆ ಏಪ್ರಿಲ್ 14 ಬಿಸು ಹಬ್ಬದ ಸಂಭ್ರಮ. ಆದರೆ ಈ ಬಾರಿಯ ಬಿಸು ಹಬ್ಬಕ್ಕೆ ಸಂಭ್ರಮಕ್ಕೆ ಕೊರೊನಾ ತಡೆಯಾಗಿದೆ. ಇದರಿಂದ ಹೊರವರ್ಷವನ್ನು ಕರಾವಳಿಗರು ಮನೆಯಲ್ಲೇ ಸರಳವಾಗಿ ಆಚರಿಸಿದರು. ಇದೇ ವೇಳೆ ಕರಾವಳಿಗರ ಬಿಸು ಹಬ್ಬಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತುಳುಭಾಷೆಯಲ್ಲೇ ಶುಭಕೋರಿದ್ದಾರೆ.
Vijaya Karnataka Web bs yeddyurappa


ಟ್ವಿಟ್ಟರ್‌ನಲ್ಲಿ ತುಳು ಭಾಷೆಯಲ್ಲಿ ಬಿಸು ಹಬ್ಬಕ್ಕೆ ಶುಭಕೋರಿದ ಬಿಎಸ್‌ವೈ ಹಳೆಯ ಕಷ್ಟದ ದಿನಗಳು ದೂರವಾಗಿ ಸಂಭ್ರಮದ ದಿನಗಳು ಹತ್ತಿರ ಬರಲಿ ಎಂದಿದ್ದಾರೆ. ಬಿಸುತ ದಿನ ಪೊಸತ್ ಮನಸ್, ಪೊಸತ್ ಕನಸ್ ಪೊಸತ್ ತೆನಸ್ ಮಾತಲಾ ಪೊಸತ್ ಪೊಸತ್ ಆವಡ್. ಪೊಸ ವರ್ಷೊಡು ಪರತ್ ಮಹಾಮಾರಿ ದೂರ ಅದ್ ಸುಖ ಸಂತೋಸ ನೆಲೆಸಡು. ಮಾತೆರೆಗ್ ಬಿಸುತ ಸುಭಾಸುಯೊಲು ಎಂದು ಟ್ವೀಟ್‌ ಮಾಡಿದ್ದಾರೆ.

ಮೈಸೂರಿನ ನಂತರ ಬೆಳಗಾವಿಯಲ್ಲಿ ಕೊರೊನಾ ಆರ್ಭಟ, ಜಿಲ್ಲೆಯಲ್ಲಿ 18ಕ್ಕೇರಿದ ಸೋಂಕಿತರ ಸಂಖ್ಯೆ


ಬಿ.ಎಸ್ ಯಡಿಯೂರಪ್ಪ ತುಳುಭಾಷೆಯಲ್ಲಿ ಬಿಸು ಹಬ್ಬಕ್ಕೆ ಶುಭಾಶಯ ಕೋರಿದ್ದು ತುಳುವರ ಮೆಚ್ಚುಗೆಗೆ ಕಾರಣವಾಗಿದೆ. ತುಳು ಭಾಷೆಯಲ್ಲಿ ಶುಭಕೋರಿದಕ್ಕಾಗಿ ಬಿಎಸ್‌ವೈಗೆ ಮಂಗಳೂರಿಗರು ಧನ್ಯವಾದ ಸಲ್ಲಿಸಿದ್ದಾರೆ.

ಮಂಡ್ಯದಲ್ಲಿ ಕೊರೊನಾ ಭೀತಿ: ಅಧಿಕಾರಿಗಳೊಂದಿಗೆ ನಾರಾಯಣಗೌಡ ಸಭೆ

ಕರಾವಳಿ ಭಾಗದಲ್ಲಿ ಬಿಸು ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ರಾಜ್ಯದ ಬೇರೆ ಕಡೆಗಳಲ್ಲಿ ಯುದಾದಿಯ ಸಂಭ್ರಮ ಹೇಗಿರುತ್ತದೋ ಅಂದೇ ರೀತಿಯಲ್ಲಿ ಕರಾವಳಿಗರು ಬಿಸು ಹಬ್ಬವನ್ನು ಆಚರಿಸುತ್ತಾರೆ. ಈ ಮೂಲಕ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.

ವರ್ಷದ ಪ್ರಾರಂಭದ ಕೃಷಿ ಚಟುವಟಿಕೆಗೆ ದೈವದ ಬಳಿ ಅನುಮತಿ ಕೇಳುವುದೇ ಬಿಸು ಹಬ್ಬ. ದೈವಗಳನ್ನು ನೆನೆದು ಬಾಳೆಎಲೆ ಮೇಲೆ ಅಕ್ಕಿ ಹಾಕಿ, ಅದರ ಮೇಲೆ ತೆಂಗಿನ ಕಾಯಿ ಇಟ್ಟು ಮುಂದೆ ತರಕಾರಿಗಳನ್ನು ಇಟ್ಟು ಬಿಸು ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾ ಕಾರಣದಿಂದ ಕರಾವಳಿಗೆ ಭಾಗದಲ್ಲಿ ಹಬ್ಬದ ಸಂಭ್ರಮ ಮನೆಮಾಡಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ