ಆ್ಯಪ್ನಗರ

ಮಂಗಳೂರು: ಸಮುದ್ರದಲ್ಲಿ ಸಿಲುಕಿದ್ದ ಬೆಸ್ತರ ರಕ್ಷಿಸಿದ ಕೋಸ್ಟ್ ಗಾರ್ಡ್‌

ಓಖಿ ಚಂಡುಮಾರುತಕ್ಕೆ ಸಿಲುಕಿದ್ದ ಬೆಸ್ತರು

Vijaya Karnataka Web 6 Dec 2017, 6:19 pm
ಮಂಗಳೂರು: ಕೇರಳದಿಂದ ಮೀನುಗಾರಿಕೆಗೆ ತೆರಳಿ ಓಖಿ ಚಂಡಮಾರುತಕ್ಕೆ ಸಿಲುಕಿ ನಾಲ್ಕು ದಿನಗಳಿಂದ ಅನ್ನ ನೀರು ಇಲ್ಲದೆ ಸಿಲುಕಿಕೊಂಡಿದ್ದ 13 ಮೀನುಗಾರರನ್ನು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ.
Vijaya Karnataka Web coast guard saves kerala fishermen
ಮಂಗಳೂರು: ಸಮುದ್ರದಲ್ಲಿ ಸಿಲುಕಿದ್ದ ಬೆಸ್ತರ ರಕ್ಷಿಸಿದ ಕೋಸ್ಟ್ ಗಾರ್ಡ್‌


ಕೊಚ್ಚಿಯಿಂದ ನ.7 ರಂದು ಬಾರಾಕುಡ ಹೆಸರಿನ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ನ.28ರಂದು ಸಮುದ್ರದಲ್ಲಿ ಓಖಿ ಚಂಡಮಾರುತದ ಪ್ರಭಾವದಿಂದ ಬೋಟು ಅಪಾಯಕ್ಕೆ ಸಿಲುಕಿತ್ತು. ಡಿ.2ರಂದು ಅದರೊಳಗೆ ನೀರು ಒಳಗೆ ನುಗ್ಗಿತ್ತು. ಅವರ ವಯರ್‌ಲೆಸ್‌ ಸಂಪರ್ಕ ಕಡಿತಗೊಂಡಿತ್ತು. ಆಹಾರ, ಬಟ್ಟೆ ನೀರಿನಲ್ಲಿ ಕೊಚ್ಚಿ ಹೋಗಿತ್ತು.

ಕೈಯಲ್ಲೇ ನೀರು ಹೊರಕ್ಕೆ ಹಾಕುವ ಮೂಲಕ ಬೋಟು ಸಮುದ್ರ ಪಾಲಾಗುವುದನ್ನು ತಪ್ಪಿಸಿದ್ದರು.

ಇವರು ಸಿಕ್ಕಿ ಹಾಕಿಕೊಂಡಿರುವ ಮಾಹಿತಿ ಪಡೆದ ಕೇರಳ ಕೋಸ್ಟ್ ಗಾರ್ಡ್‌ನವರು ಮಂಗಳೂರು ಕೋಸ್ಟ್ ಗಾರ್ಡ್‌ಗೆ ಮಾಹಿತಿ ರವಾನಿಸಿದ್ದರು

ಉಡುಪಿ ಜಿಲ್ಲೆಯ ಮಲ್ಪೆಯಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿದ್ದ ಬೋಟ್‌ ಅನ್ನು ಬುಧವಾರ ಬೆಳಗ್ಗೆ 7.15ಕ್ಕೆ ಪತ್ತೆ ಹಚ್ಚಿ ಎಲ್ಲ 13 ಮಂದಿಯನ್ನು ಸುರಕ್ಷಿತ ವಾಗಿ ತೀರಕ್ಕೆ ಕರೆ ತಂದಿದ್ದಾರೆ.

ಅಮಾರ್ಥ್ಯ ಹೆಸರಿನ ಶಿಪ್‌ನಲ್ಲಿ ಕೋಸ್ಟ್ ಗಾರ್ಡ್ ಅಧಿಕಾರಿಗಳು ಖಾಸಗಿ ಬೋಟ್ ಸಹಾಯದಿಂದ ಮುಳುಗುತ್ತಿದ್ದ ಬೋಟ್‌ನ ರಕ್ಷಣೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ