ಮಂಗಳೂರು: ಹಳೆಯಂಗಡಿ ಇಂದಿರಾ ನಗರದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನೊಂದಿಗೆ ಪ್ರತಿಷ್ಠಿತ ಕಾಗ್ನಿಜೆಂಟ್ ಕಂಪನಿ ಒಪ್ಪಂದ ಮಾಡಿಕೊಂಡಿದೆ.
ಅದರ ಪ್ರಕಾರ ವಿಪುಲ ಉದ್ಯೋಗ ಅವಕಾಶ ಕಲ್ಪಿಸಿಕೊಡಲಿದೆ. 2019ರಲ್ಲಿ ಕಾಲೇಜಿನಲ್ಲಿ ಯಾವುದೇ ವಿಷಯ ಬಾಕಿ ಉಳಿಸದೆ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿದೆ. ಮಾತ್ರವಲ್ಲ 2020-21ನೇ ಶೈಕ್ಷಣಿಕ ವರ್ಷದಲ್ಲಿ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಮೊದಲ ವರ್ಷ ಪತ್ರ ಲೇಖನ, ಜೀವನ ಕೌಶಲ್ಯ ಹಾಗೂ ಇತರ ವಿಷಯಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಲಿದ್ದಾರೆ. ಎರಡನೇ ವರ್ಷ ಬರವಣಿಗೆಯ ಕೌಶಲ್ಯ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯ, ಮೂರನೇ ವರ್ಷ ಉದ್ಯೋಗ ಸಂದರ್ಶನ ಎದುರಿಸುವ ಕಲೆಯನ್ನು ಕಲಿಸಿಕೊಡಲಿದೆ. ಇದರಲ್ಲಿ ಪರಿಣತರಾಗಿ ಎಲ್ಲವಿಷಯಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಿದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
ಈ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಕೇವಲ ಎರಡು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ದೊರಕಿದ್ದು, ಅದರಲ್ಲಿಹಳೆಯಂಗಡಿ ಕಾಲೇಜು ಕೂಡ ಒಂದು. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪದವಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿಹಳೆಯಂಗಡಿ ಸರಕಾರಿ ಕಾಲೇಜಿಗೆ ಪ್ರವೇಶ ಪಡೆದು ಉದ್ಯೋಗ ಪಡೆದುಕೊಳ್ಳಲು ಇದು ಪೂರಕವಾಗಲಿದೆ.
ಅದರ ಪ್ರಕಾರ ವಿಪುಲ ಉದ್ಯೋಗ ಅವಕಾಶ ಕಲ್ಪಿಸಿಕೊಡಲಿದೆ. 2019ರಲ್ಲಿ ಕಾಲೇಜಿನಲ್ಲಿ ಯಾವುದೇ ವಿಷಯ ಬಾಕಿ ಉಳಿಸದೆ ಪದವಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಲಿದೆ. ಮಾತ್ರವಲ್ಲ 2020-21ನೇ ಶೈಕ್ಷಣಿಕ ವರ್ಷದಲ್ಲಿ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಮೊದಲ ವರ್ಷ ಪತ್ರ ಲೇಖನ, ಜೀವನ ಕೌಶಲ್ಯ ಹಾಗೂ ಇತರ ವಿಷಯಗಳಲ್ಲಿ ಕೌಶಲಾಭಿವೃದ್ಧಿ ತರಬೇತಿ ನೀಡಲಿದ್ದಾರೆ. ಎರಡನೇ ವರ್ಷ ಬರವಣಿಗೆಯ ಕೌಶಲ್ಯ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯ, ಮೂರನೇ ವರ್ಷ ಉದ್ಯೋಗ ಸಂದರ್ಶನ ಎದುರಿಸುವ ಕಲೆಯನ್ನು ಕಲಿಸಿಕೊಡಲಿದೆ. ಇದರಲ್ಲಿ ಪರಿಣತರಾಗಿ ಎಲ್ಲವಿಷಯಗಳಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಿದೆ. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ.
ಈ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಕೇವಲ ಎರಡು ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ದೊರಕಿದ್ದು, ಅದರಲ್ಲಿಹಳೆಯಂಗಡಿ ಕಾಲೇಜು ಕೂಡ ಒಂದು. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಪದವಿ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿಹಳೆಯಂಗಡಿ ಸರಕಾರಿ ಕಾಲೇಜಿಗೆ ಪ್ರವೇಶ ಪಡೆದು ಉದ್ಯೋಗ ಪಡೆದುಕೊಳ್ಳಲು ಇದು ಪೂರಕವಾಗಲಿದೆ.