ಆ್ಯಪ್ನಗರ

ದಕ್ಷಿಣ ಕನ್ನಡದಲ್ಲಿ ಇಂದು ರಾತ್ರಿಯಿಂದ ಲಾಕ್‌ಡೌನ್‌ ಜಾರಿ, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದ ಹಿನ್ನೆಲೆ ಒಂದು ವಾರಗಳ ಕಾಲ ಲಾಕ್‌ಡೌನ್‌ ಜಾರಿಯಲ್ಲಿರಲಿದೆ. ಹಾಗಾದರೆ ಈ ಒಂದು ವಾರಗಳಲ್ಲಿ ಏನೆನಿರುತ್ತೆ? ಯಾವ ಸೌಲಭ್ಯಗಳು ಸಿಗಲಿದೆ? ಇಲ್ಲಿದೆ ಈ ಬಗ್ಗೆ ಡಿಟೇಲ್ಡ್ ರಿಪೋರ್ಟ್‌.

Vijaya Karnataka Web 15 Jul 2020, 8:31 am
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2 ವಾರಗಳಿಂದೀಚೆಗೆ ಕೋವಿಡ್‌ ಪ್ರಕರಣ ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಹತೋಟಿಗೆ ತರುವ ನಿಟ್ಟಿನಲ್ಲಿ ಜು.15ರ ರಾತ್ರಿ 8ಗಂಟೆಯಿಂದ ಜು.23ರ ಬೆಳಗ್ಗೆ 5ಗಂಟೆಯವರೆಗೆ 7 ದಿನಗಳ ಕಾಲ ಲಾಕ್‌ಡೌನ್‌ ಜಾರಿಗೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ. ಹೀಗಾಗಿ ಈ ಲಾಕ್‌ಡೌನ್‌ನಲ್ಲಿ ಏನಿರುತ್ತೆ? ಏನಿರಲ್ಲ ಇಲ್ಲಿದೆ ಈ ಬಗ್ಗೆ ಮಾಹಿತಿ.
Vijaya Karnataka Web complete lockdown in dakshina kannada from july 15th night
ದಕ್ಷಿಣ ಕನ್ನಡದಲ್ಲಿ ಇಂದು ರಾತ್ರಿಯಿಂದ ಲಾಕ್‌ಡೌನ್‌ ಜಾರಿ, ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ!



ಶಾಲಾ-ಕಾಲೇಜು ಬಂದ್‌!

ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡಿರುವುದನ್ನು ಹೊರತುಪಡಿಸಿ ಟ್ಯಾಕ್ಸಿಗಳು ಮತ್ತು ಕ್ಯಾಬ್‌ ಚಾಲನೆ ನಿಷೇಧಿಸಲಾಗಿದೆ. ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ ಕೋಚಿಂಗ್‌ ಮೊದಲಾದ ಸಂಸ್ಥೆಗಳು ಮುಚ್ಚಿರುತ್ತವೆ. ಆನ್‌ಲೈನ್‌ ದೂರಶಿಕ್ಷಣ ಕಲಿಕೆಗೆ ಅವಕಾಶ ಮುಂದುವರಿಸಿ ಪ್ರೋತ್ಸಾಹಿಸುವುದು. ಆದರೆ ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್‌ 19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡಲಾಗಿದೆ.
ಆರೋಗ್ಯ, ಪೊಲೀಸ್‌, ಸರಕಾರಿ ಸೇವಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದ ಮತ್ತು ಕ್ವಾರಂಟೈನ್‌ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ಆತಿಥ್ಯ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳನ್ನು ಆಹಾರ ತಯಾರಿಕೆಗೆ, ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಲಾಗಿದೆ.

ಅಡಿಕೆ ಮಾರುಕಟ್ಟೆ ಅಸ್ಥಿರತೆಗೆ ಕಳ್ಳ ಮಾರ್ಗ: ವಿದೇಶದಿಂದ ಅಕ್ರಮ ಸಾಗಾಟ ಮೂಲಕ ಬೆಲೆ ನಿಯಂತ್ರಣ ಯತ್ನ

ಮದ್ಯ ಸಿಗಲ್ಲ, ದೇವಾಲಯ ಎಂಟ್ರಿ ರದ್ದು!

ಶಾಪಿಂಗ್‌ ಮಾಲ್‌ಗಳು, ಸಿನೆಮಾ ಮಂದಿರಗಳ, ಜಿಮ್ನಾಷಿಯಂಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು,ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್‌ಗಳು ಹಾಗೂ ಅಡಿಟೋರಿಯಂಗಳು, ಸಭಾ ಭವನಗಳು, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಸಭೆಗಳು ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.

ಬೆಂಗಳೂರು: ಮದುವೆಗೆ ಒಪ್ಪದ ಯುವತಿಯ ಕೊಲೆ ಮಾಡಿದ ರೌಡಿ!

​​ಈ ಸೇವೆಗಳು ಲಭ್ಯ!

ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್‌ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅಗತ್ಯ ಸೇವೆಗಳಿಗೆ ವಿನಾಯಿತಿ. ನಿರ್ವಹಣಾ ಸೇವೆಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಅಗತ್ಯ ಸೇವೆಗಳನ್ನು ನಿರ್ವಹಿಸುವುದು ಹಾಗೂ ಸಾಧ್ಯವಾದಷ್ಟು ಮನೆಯಿಂದಲೇ ನಿರ್ವಹಿಸುವುದು. ಇ ಕಾಮರ್ಸ್‌ ಮೂಲಕ ಆಹಾರ, ಔಷಧಿಗಳು, ವೈದ್ಯಕೀಯ ಸಲಕರಣೆಗಳಂತೆ ಅಗತ್ಯ ವಸ್ತುಗಳ ಸರಬರಾಜು, ವಿದ್ಯುತ್‌ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತುಸೇವೆಗಳು, ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋುಣ ಮಾರುಕಟ್ಟೆ ಸೇವೆಗಳು, ಶೀತಲೀಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು, ಇ ಕಾಮರ್ಸ್‌ ಮೂಲಕ ಸರಕು ಸರಬರಾಜಿಗೆ ವಿನಾಯಿತಿ ಇರಲಿದೆ. ಉಳಿದ ಸಂಸ್ಥೆಗಳು ಅಗತ್ಯವಿರುವಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿತಿಳಿಸಿದೆ. ಇದೇ ವೇಳೆ ವಿದ್ಯುತ್‌, ನೀರು, ನೈರ್ಮಲ್ಯ ಮೊದಲಾದ ಅಗತ್ಯ ಸೇವೆಗಳ ಕಚೇರಿಗಳು ನಿರ್ವಹಿಸಲಿವೆ. ನ್ಯಾಯಾಲಯ ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ಉಚ್ಚ ನ್ಯಾಯಾಲಯ ಹೊರಡಿಸಿರುವ ಮಾರ್ಗಸೂಚಿಯ ಅನ್ವಯ ಕಾರ್ಯ ನಿರ್ವಹಿಸಲಿವೆ.

ಅಮೆರಿಕ ಕಂಪನಿ ಜತೆಗಿನ ರಕ್ಷಣಾ ಒಪ್ಪಂದ ರದ್ದುಪಡಿಸಿದ ಚೀನಾ, ಮುಂದುವರಿದ ಶೀತಲ ಸಮರ!


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ