ಆ್ಯಪ್ನಗರ

ಈ ಬಾರಿ ಮತದಾರರು ಬಿಜೆಪಿಯನ್ನು ತಿರಸ್ಕರಿಸುತ್ತಾರೆ: ಖಾದರ್‌

ಕಳೆದ 5 ವರ್ಷಗಳ ಎನ್‌ಡಿಎ ನೇತೃತ್ವದ ಸರಕಾರ ಎಲ್ಲ ಹಂತಗಳಲ್ಲೂ ವಿಫಲವಾಗಿದೆ .ಕೇವಲ ಮಾತಿನ ಸರಕಾರವಾಗಿದೆಯೇ ವಿನಹ ಕೃತಿಯ ಸರಕಾರವಾಗಿಲ್ಲ ಎಂದವರು ಹೇಳಿದರು.

Vijaya Karnataka Web 5 Apr 2019, 5:32 pm
ಸುಳ್ಯ: ದೇಶಕ್ಕೆ ಬಿಜೆಪಿಯಷ್ಟು ದ್ರೋಹವೆಸಗಿದ ಪಕ್ಷ ಬೇರೊಂದಿಲ್ಲ. ಹೀಗಾಗಿ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.
Vijaya Karnataka Web khader


ಸುಳ್ಯ ಕಾಂಗ್ರೆಸ್‌ ಚುನಾವಣಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 5 ವರ್ಷಗಳ ಎನ್‌ಡಿಎ ನೇತೃತ್ವದ ಸರಕಾರ ಎಲ್ಲ ಹಂತಗಳಲ್ಲೂ ವಿಫಲವಾಗಿದೆ .ಕೇವಲ ಮಾತಿನ ಸರಕಾರವಾಗಿದೆಯೇ ವಿನಹ ಕೃತಿಯ ಸರಕಾರವಾಗಿಲ್ಲ ಎಂದವರು ಹೇಳಿದರು.

ವಿಫಲ ಸಂಸದ: 10 ವರ್ಷಗಳಿಂದ ಇಲ್ಲಿನ ಸಂಸದರಾಗಿದ್ದ ನಳಿನ್‌ಕುಮಾರ್‌ ಕಟೀಲ್‌ ಒಂದೇ ಒಂದು ದಿನ ಜನಸಾಮಾನ್ಯರ ಪರವಾಗಿ ಮಾತನಾಡಿಲ್ಲ. ತಮಿಳು ಕಾರ್ಮಿಕರಿಗೆ ಅನ್ಯಾಯವಾದಾಗ, ರಬ್ಬರ್‌, ಅಡಿಕೆ, ತೆಂಗುಧಾರಣೆ ಕುಸಿದಾಗ, ಮಂಗಳೂರು ವಿಮಾನ ನಿಲ್ದಾಣವನ್ನು ಖಾಸಗೀಕರಣ ಮಾಡಿದಾಗ, ವಿಜಯ ಬ್ಯಾಂಕ್‌ ವಿಲೀನಗೊಳಿಸಿದಾಗ, ಕಿದು ಸಿಪಿಸಿಆರ್‌ಐನ್ನು ಸ್ಥಳಾಂತರಗೊಳಿಸುವ ನಿರ್ಧಾರ ಮಾಡಿದಾಗ, ಬಿಎಸ್‌ಎನ್‌ಎಲ್‌ ಸಮಸ್ಯೆ ಎದುರಿಸಿದಾಗ ಒಂದೇ ಒಂದು ಬಾರಿ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ಇಂತಹ ವಿಫಲ ಸಂಸದರನ್ನು ಈ ಬಾರಿ ತಿರಸ್ಕರಿಸಿ ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ಅಭ್ಯರ್ಥಿಯಾಗಿರುವ ಮಿಥುನ್‌ ರೈ ಅವರನ್ನು ಚುನಾಯಿಸಬೇಕೆಂದು ಕೇಳಿಕೊಂಡರು.

7ರಂದು ಕುಮಾರಸ್ವಾಮಿ ಸುಳ್ಯಕ್ಕೆ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ - ಜೆಡಿಎಸ್‌ ಸಮ್ಮಿಶ್ರ ಅಭ್ಯರ್ಥಿ ಮಿಥುನ್‌ ರೈ ಅವರ ಪರ ಚುನಾವಣಾ ಪ್ರಚಾರಕ್ಕೆ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿಯವರು ಏ. 7ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಮಾತನಾಡಲಿದ್ದಾರೆ.

ಸುಮಾರು 15,000ದಷ್ಟು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಖಾದರ್‌ ತಿಳಿಸಿದರು.ಅಭ್ಯರ್ಥಿ ಮಿಥುನ್‌ ರೈಯವರು ಎಪ್ರಿಲ್‌ 7ರಂದು ಸುಳ್ಯ ತಾಲೂಕಿನ ನಾನಾ ಕಡೆ ಚುನಾವಣಾ ಪ್ರಚಾರ ಮಾಡಲಿದ್ದಾರೆ. ಏ. 6ರಂದು ರಾತ್ರಿ ಬಳ್ಪಕ್ಕೆ ಆಗಮಿಸುವ ಅವರು ಸಂಸದರ ಆದರ್ಶ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ ಎಂದು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ