ಆ್ಯಪ್ನಗರ

ನ್ಯಾಯಾಂಗ ನಿರಂತರ ಕಲಿಕಾ ಕೇಂದ್ರ

ನ್ಯಾಯಾಂಗವು ನಿರಂತರ ಕಲಿಕಾ ಕೇಂದ್ರವಾಗಿದ್ದು, ಹೊಸ ಹೊಸ ಪ್ರಕರಣಗಳು ಬರುತ್ತಲೇ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತ ಹೋಗುತ್ತಾರೆ ಎಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್‌ ಪಿರೇರಾ ಹೇಳಿದರು.

Vijaya Karnataka Web 28 May 2019, 5:00 am
ಪುತ್ತೂರು: ನ್ಯಾಯಾಂಗವು ನಿರಂತರ ಕಲಿಕಾ ಕೇಂದ್ರವಾಗಿದ್ದು, ಹೊಸ ಹೊಸ ಪ್ರಕರಣಗಳು ಬರುತ್ತಲೇ ನ್ಯಾಯವಾದಿಗಳು ಮತ್ತು ನ್ಯಾಯಾಧೀಶರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತ ಹೋಗುತ್ತಾರೆ ಎಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್‌ ಪಿರೇರಾ ಹೇಳಿದರು.
Vijaya Karnataka Web continues lerning process in court
ನ್ಯಾಯಾಂಗ ನಿರಂತರ ಕಲಿಕಾ ಕೇಂದ್ರ


ಪುತ್ತೂರಿಗೆ ನೂತನವಾಗಿ ಮಂಜೂರಾದ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನಾ ಸಭಾ ಕಾರ್ಯಕ್ರಮ ಮತ್ತು ನೂತನ ನ್ಯಾಯಾಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಸೋಮವಾರ ಮಾತನಾಡಿದರು.

'ನ್ಯಾಯದಾನ ಎಂಬುದು ಒಂದು ಪರಮ ಪವಿತ್ರ ಕಾರ್ಯ. ವಕೀಲರು ಮತ್ತು ನ್ಯಾಯಾಧೀಶರೂ ಸೇರಿದಂತೆ ಇಡೀ ನ್ಯಾಯಾಂಗ ವ್ಯವಸ್ಥೆ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಅತ್ಯುತ್ತಮ ಮತ್ತು ತ್ವರಿತ ನ್ಯಾಯದಾನ ಮಾಡಲು ಸಾಧ್ಯವಿದೆ. ಕಕ್ಷಿದಾರರ ಹತ್ತಾರು ಸಮಸ್ಯೆಗಳಿಗೆ ಉತ್ತರಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಹೀಗಾಗಿಯೇ ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಮೇಲೆ ಅಪಾರ ಗೌರವವಿದೆ. ನಮ್ಮ ಮೇಲಿರುವ ದೊಡ್ಡ ಮಟ್ಟದ ಹೊಣೆಗಾರಿಕೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ' ಎಂದವರು ನುಡಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಪುತ್ತೂರಿನ ಎಸಿಜೆಎಂ ಆಗಿರುವ ಮಂಜುನಾಥ್‌ ಮಾತನಾಡಿ,ಪುತ್ತೂರಿನಲ್ಲಿ ಕಳೆದ ಎರಡು ವರ್ಷಗಳಿಂದ ನಾನು ಕೆಲಸ ಮಾಡುತ್ತಾ ಬಂದಿದ್ದೇನೆ. ನ್ಯಾಯಾಂಗದ ಘನತೆಗೆ ತಕ್ಕುದಲ್ಲದ ಯಾವುದೇ ಘಟನೆ ಇಲ್ಲಿ ನಡೆದಿಲ್ಲ. ಇಲ್ಲಿನ ಜನ ನ್ಯಾಯಾಂಗಕ್ಕೆ ಗೌರವ ನೀಡುತ್ತಾರೆ ಎಂಬುದನ್ನು ಮನಗಂಡಿದ್ದೇನೆ. ನ್ಯಾಯ ವಿತರಣೆ ತ್ವರಿತವಾಗಿ ನಡೆಯುವಲ್ಲಿ ಈಗ ಆರಂಭಗೊಂಡಿರುವ ಹೊಸ ನ್ಯಾಯಾಲಯ ಸಹಕಾರಿಯಾಗಲಿದೆ ಎಂದರು.

ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಪುತ್ತೂರು ಆಗಿರುವ ಲತಾದೇವಿ ಜಿ.ಎ.,ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಆಗಿರುವ ಪ್ರಕಾಶ್‌ ಪಿ.ಎಂ., ಒಂದನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಆಗಿರುವ ಕಿಶನ್‌ ಬಿ.ಮಡಲಗಿ, 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಅಗಿರುವ ವೆಂಕಟೇಶ್‌ ಎನ್‌.,ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್‌ ರೈ ಪಡ್ಡಂಬೈಲ್‌, ಪ್ರಧಾನ ಕಾರ್ಯದರ್ಶಿ ಎನ್‌.ಎಸ್‌. ಮಂಜುನಾಥ್‌, ಕೋಶಾಧಿಕಾರಿ ದಿವ್ಯರಾಜ್‌ ಹೆಗ್ಡೆ, ಜತೆ ಕಾರ್ಯದರ್ಶಿ ಮಮತಾ ಸುವರ್ಣ ಉಪಸ್ಥಿತರಿದ್ದರು.

ಸನ್ಮಾನ: ಪುತ್ತೂರಿಗೆ ನೂತನವಾಗಿ ಆಗಮಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರುಡಾಲ್ಫ್‌ ಪಿರೇರಾ ಹಾಗೂ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ವೆಂಕಟೇಶ್‌ ಎನ್‌. ಅವರನ್ನು ಈ ಸಂದರ್ಭ ಪುತ್ತೂರು ವಕೀಲರ ಸಂಘದ ವತಿಯಿಂದ ಅಭಿನಂದಿಸಲಾಯಿತು.

ಪ್ರೀತಿಲಕ್ಷ್ಮೀ ಪ್ರಾರ್ಥಿಸಿದರು. ಸಮಾರಂಭದ ಅಧ್ಯಕ್ಷ ತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಕಾರ್ಯಕ್ರಮ ನಿರ್ವಹಿಸಿದರು.

ಪುತ್ತೂರಿನಲ್ಲೀಗ ಆರು ನ್ಯಾಯಾಲಯ: ಹೊಸದಾಗಿ ಪುತ್ತೂರಿಗೆ ಮಂಜೂರಾದ 2ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯವನ್ನೂ ಸೇರಿಸಿದರೆ ಒಟ್ಟು ಆರು ನ್ಯಾಯಾಲಯಗಳು ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸಿದಂತಾಗಿದೆ. ಹೊಸ ನ್ಯಾಯಾಲಯವು ಪುತ್ತೂರು ಮಿನಿ ವಿಧಾನಸೌಧದ ಬಳಿ ಇರುವ ಮಧ್ಯಸ್ಥಿಕಾ ಕೇಂದ್ರದ ಕಟ್ಟಡದಲ್ಲಿ ಕಾರ‍್ಯ ನಿರ್ವಹಣೆ ಆರಂಭಿಸಿದೆ. ಜಾಗದ ಸಮಸ್ಯೆಯಿಂದಾಗಿ ಈ ನ್ಯಾಯಾಲಯವನ್ನು ಹಳೆ ಕೋರ್ಟ್‌ ಸಂಕೀರ್ಣದಲ್ಲಿ ವ್ಯವಸ್ಥೆಗೊಳಿಸಲು ಸಾಧ್ಯವಾಗಿಲ್ಲ. ಪುತ್ತೂರು ನಗರದ ಹೊರವಲಯದ ಆನೆಮಜಲಿನಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಆರಂಭಗೊಂಡ ಮೇಲೆ ಎಲ್ಲ ಕೋರ್ಟ್‌ಗಳು ಒಂದೇ ಸೂರಿನಡಿಗೆ ಬರಲಿವೆ.

ಪುತ್ತೂರಿನಲ್ಲಿ 1860ರಲ್ಲಿ ನ್ಯಾಯಾಲಯ ಆರಂಭಗೊಂಡಿದ್ದು, ಈಗಿನ ಅರಣ್ಯ ಇಲಾಖೆ ಕಚೇರಿ ಇರುವ ಜಾಗದಲ್ಲಿ ಮುನ್ಸಿಫ್‌ ಕೋರ್ಟ್‌ ಕಾರ್ಯಾರಂಭಿಸಿತ್ತು.169 ವರ್ಷಗಳ ಇತಿಹಾಸ ಪುತ್ತೂರು ನ್ಯಾಯಾಲಯಕ್ಕಿದೆ. ಈಗಿನ ನ್ಯಾಯಾಲಯ ಕಟ್ಟಡ ಕೂಡ ಹಳೆಯದಾಗಿದ್ದು, 1890ರಲ್ಲಿ ನಿರ್ಮಾಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ