ಆ್ಯಪ್ನಗರ

3.54 ನಿಮಿಷ ನಿರರ್ಗಳ ಶಂಖನಾದ ಕೇಳಿದ್ದೀರಾ?

3.54 ನಿಮಿಷ ನಿರಂತರವಾಗಿ ಶಂಖನಾದ ಮಾಡಿದ ಸೂರ್ಯನಾರಾಯಣ ಭಟ್‌..

Vijaya Karnataka Web 29 Nov 2018, 9:07 pm
ಸುಳ್ಯ: ಒಂದೇ ಉಸಿರಲ್ಲಿ ಹಾಡುವುದು ಒಂದು ಸವಾಲೇ ಸರಿ. ಸರಿಯಾದ ಸಮಯದಲ್ಲಿ ಗಾಳಿಯನ್ನು ಒಳ ತೆಗೆದುಕೊಂಡು ಪದ್ಯದ ರಾಗ, ತಾಳಕ್ಕೆ ಧಕ್ಕೆಯಾಗದಂತೆ ಹಾಡುವುದು ಒಂದು ಕಲೆಯೇ! ಆದರೆ ಅಪರೂಪದ ಕಲೆಗಾರಿಕೆಗೆ ವೈದಿಕ ವರ್ಗ ಸಾಕ್ಷಿಯಾಗಿದೆ.

ಸುಳ್ಯಪದವು ಸಮೀಪದ ದೇವರಗುಂಡಿ ಸೂರ್ಯನಾರಾಯಣ ಭಟ್ ಅವರು ತ್ರಿಕಾಲ ಪೂಜೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸತತ 3 ನಿಮಿಷ 54 ಸೆಕೆಂಡುಗಳ ಕಾಲ ಶಂಖನಾದ ಮಾಡಿದ್ದಾರೆ. ಈ ವೀಡಿಯೋ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗಳಲ್ಲಿ ವೈರಲ್‌ ಆಗಿದ್ದು, ಜನ ಮೆಚ್ಚುಗೆ ಗಳಿಸಿದೆ.


ಸೂರ್ಯನಾರಾಯಣ ಭಟ್‌ ಅವರ ಒಂದೇ ಉಸಿರಿನ ಶಂಖನಾದ ಫೇಸ್‌ಬುಕ್‌ನಲ್ಲಿ 800ಕ್ಕೂ ಅಧಿಕ ಶೇರ್‌ ಆದರೆ 62 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಗಿಳಿಯಾಲು ಮಹಾಬಲೇಶ್ವರ ಭಟ್‌ ಈ ಶಂಖನಾದದ ವೀಡಿಯೋವನ್ನು ಪೋಸ್ಟ್‌ ಮಾಡಿದ್ದರು.

https://m.facebook.com/story.php?story_fbid=720316574991416&id=100010392409200

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ