ಆ್ಯಪ್ನಗರ

ಉಳ್ಳಾಲದಲ್ಲಿ ಒಂದೇ ಮನೆಯ ಏಳು ಮಂದಿಗೆ ಕೊರೊನಾ ದೃಢ!

ಕೊರೊನಾ ಕೋವಿಡ್‌ -19 ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರದ ವರದಿಯಂತೆ ಒಂದೇ ಕುಟುಂಬದ ಏಳು ಸದಸ್ಯರು ಸೇರಿದಂತೆ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ, ಒಬ್ಬ ಗೃಹರಕ್ಷಕ ಹಾಗೂ ಉಳ್ಳಾಲ ಪೇಟೆಯ ಸ್ವೀಟ್ಸ್‌ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.

Vijaya Karnataka Web 30 Jun 2020, 6:55 pm
ತೊಕ್ಕೊಟ್ಟು: ಕೊರೊನಾ ಕೋವಿಡ್‌ -19 ಅಟ್ಟಹಾಸ ಮುಂದುವರಿದಿದ್ದು, ಮಂಗಳವಾರದ ವರದಿಯಂತೆ ಒಂದೇ ಕುಟುಂಬದ ಏಳು ಸದಸ್ಯರು ಸೇರಿದಂತೆ ಉಳ್ಳಾಲ ಠಾಣೆಯ ಪೊಲೀಸ್‌ ಸಿಬ್ಬಂದಿ, ಒಬ್ಬ ಗೃಹರಕ್ಷಕ ಹಾಗೂ ಉಳ್ಳಾಲ ಪೇಟೆಯ ಸ್ವೀಟ್ಸ್‌ ಅಂಗಡಿಯ ಮಾಲೀಕನಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ.
Vijaya Karnataka Web Coronavirus 6


ಉಳ್ಳಾಲದಲ್ಲಿ ದಾಖಲಾದ ಮೊದಲ ಪ್ರಕರಣದಲ್ಲಿ ಸಾವನ್ನಪ್ಪಿದ ಮಹಿಳೆಯ ಕುಟುಂಬದ ಏಳು ಸದಸ್ಯರಿಗೆ ಕೊರೊನಾ ತಗುಲಿದೆ. ಅಲ್ಲದೆ ಕ್ವಾರಂಟೈನ್‌ನಲ್ಲಿದ್ದ ಪೊಲೀಸ್‌, ಹೋಂ ಗಾರ್ಡ್‌ ಹಾಗೂ ಸ್ವೀಟ್ಸ್‌ ಅಂಗಡಿ ಮಾಲೀಕನಿಗೂ ಕೊರೊನಾ ತಗುಲಿದೆ.

ಈಗಾಗಲೇ ಕೋವಿಡ್‌-19ನಿಂದ ಎರಡು ಸಾವು ಸಂಭವಿಸಿದ್ದು, ಸೋಂಕು ಸಮುದಾಯಕ್ಕೆ ಹರಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಯು.ಟಿ. ಖಾದರ್‌ ಸಲಹೆಯಂತೆ ನಗರಸಭೆ ಕಚೇರಿ ಬಳಿಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಗರಸಭೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಮಂಗಳವಾರ ರಾರ‍ಯಂಡಮ್‌ ಟೆಸ್ಟ್‌ ನಡೆಯಿತು.

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಆರ್‌. ಅಶೋಕ್‌ ಸ್ಪಷ್ಟನೆ!

ಸ್ಥಳೀಯ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನಾಗರಿಕರು ರಾರ‍ಯಂಡಮ್‌ ಟೆಸ್ಟ್‌ನ್ನು ಸದುಪಯೋಗ ಪಡೆದುಕೊಂಡರಾದರೂ ಜನರು ಇನ್ನೂ ಭಯದ ವಾತಾವರಣದಿಂದ ಹೊರಗೆ ಬಂದಿಲ್ಲ. ಉಳ್ಳಾಲ ಮತ್ತು ಪೆರ್ಮನ್ನೂರು ಗ್ರಾಮ ವ್ಯಾಪ್ತಿಯ ನಾಗರಿಕರಿಗೆ ಟೆಸ್ಟ್‌ ಮಾಡಲು ಸೂಚನೆ ನೀಡಲಾಗಿತ್ತು. ಸಂಜೆ ತನಕ ಪರೀಕ್ಷಾ ಕಾರ್ಯ ನಡೆಯಿತು.

ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ವಿಸ್ತರಣೆ: ದೀಪಾವಳಿವರಗೆ ಉಚಿತ ಪಡಿತರ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ