ಆ್ಯಪ್ನಗರ

ಕಾರ್ಕಳ: ಬಾಡಿಗೆದಾರರನ್ನು ಹೊರದಬ್ಬಿದ ಮನೆ ಮಾಲೀಕ!

ಲಾಕ್‌ಡೌನ್‌ ಮುಗಿಯುವವರೆಗೆ ಬಾಡಿಗೆ ಮನೆಯಲ್ಲಿರುವವರಲ್ಲಿ ಬಾಡಿಗೆ ಕೇಳುವಂತಿಲ್ಲ ಹಾಗೂ ಆ ನೆಪದಲ್ಲಿ ಮನೆ ಖಾಲಿ ಮಾಡಿಸುವಂತಿಲ್ಲ ಎಂದು ಸರ್ಕಾರ ಆದೇಶ ಇದ್ದರೂ, ಕಾರ್ಕಳ ವೆಂಕಟರಮಣ ದೇವಸ್ಥಾನ ಪರಿ​ಸ​ರ​ದಲ್ಲಿ ಮಾಲೀ​ಕ​ರೊ​ಬ್ಬ​ರು ಬಾಡಿಗೆದಾರರನ್ನು ಮನೆಯಿಂದ ಹೊರದಬ್ಬಿದ್ದಾರೆ.

Vijaya Karnataka Web 5 Apr 2020, 6:35 am
ಕಾರ್ಕಳ: ಲಾಕ್‌ಡೌನ್‌ ಅವಧಿಯಲ್ಲಿ ಮನೆ ಬಾಡಿಗೆ ಕೇಳುವಂತಿಲ್ಲ,ಬಾಡಿಗೆ ಕಟ್ಟುವಲ್ಲಿ ವಿಫಲರಾದರೆ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ ಎಂಬ ಸರಕಾರಿ ಆದೇಶವನ್ನು ಮೀರಿ, ಬಾಡಿಗೆದಾರರನ್ನು ಮನೆಯಿಂದ ಹೊರದಬ್ಬಿದ ಘಟನೆಯೊಂದು ವೆಂಕಟರಮಣ ದೇವಳದ ಕೆರೆಯ ಸಮೀಪ ನಡೆದಿದೆ.
Vijaya Karnataka Web rent house


ದೇವಳದ ಕೆರೆ ಹಿಂಭಾಗದಲ್ಲಿರುವ ಬಾಡಿಗೆ ಮನೆಯ ಮಾಲೀಕರೊಬ್ಬರು ಗಂಗಾವತಿ ಮೂಲದ ಬಾಡಿಗೆದಾರ ಕಾರ್ಮಿಕರನ್ನು ಬಾಡಿಗೆ ಮನೆ ಬಿಟ್ಟು ಹೋಗುವಂತೆ ಸೂಚಿಸಿದ್ದಾರೆ.

ಪತಿ ಮನೆಯಲ್ಲಿ ಇಲ್ಲದ ಸಮಯ ನೋಡಿ ಮನೆ ಮಾಲೀಕ ಮಹಿಳೆಯನ್ನು ಹೊರಹಾಕಲು ಯತ್ನಿಸಿದ್ದು, ಮಹಿಳೆ ಭಯದಿಂದ ಗಂಟುಮೂಟೆ ಸಹಿತ ಹೊರ ಹೊರಟಿದ್ದಾಳೆ. ಬಳಿಕ ದಾರಿ ಕಾಣದೆ ಮಹಿಳೆ ದೇವಳದ ಆನೆಬಾಗಿಲ ಮುಂದೆ ಅಳುತ್ತಿದ್ದುದನ್ನು ಕಂಡು ದೇವಳದ ಮೊಕ್ತೇಸರ ಉಲ್ಲಾಸ್‌ ಶೆಣೈ ಆ ಮಹಿಳೆಗೆ ಊಟ ನೀಡಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ವಿಚಾರ ತಿಳಿಯುತ್ತಿದ್ದಂತೆ ಗುರುವಾರ ಮುಂಜಾನೆ ಕಸಬಾ ಗ್ರಾಮ ಲೆಕ್ಕಿಗ ಶಿವಪ್ರಸಾದ್‌ ಸ್ಥಳಕ್ಕೆ ಭೇಟಿ ನೀಡಿ ಆಕೆಯನ್ನು ಮತ್ತೆ ಅದೇ ಬಾಡಿಗೆ ಮನೆಗೆ ಸೇರಿಸಿದ್ದಾರೆ. ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ದಬ್ಬದಂತೆ ಸಂಬಂಧಪಟ್ಟವರಿಗೆ ಎಚ್ಚರಿಕೆ ನೀಡಿ, ಮಹಿಳೆಗೆ ಅಕ್ಕಿ, ಬೇಳೆ ವಿತರಿಸಿದ್ದಾರೆ.

ಮಗಳನ್ನು ಊರಿಗೆ ಬಿಡುವ ಸಲುವಾಗಿ ನನ್ನ ಗಂಡ ತೆರಳಿದ್ದು, ಲಾಕ್‌ಡೌನ್‌ನಿಂದಾಗಿ ವಾಪಸಾಗಲು ಸಾಧ್ಯವಾಗಿಲ್ಲ. ದುಡಿಮೆ ಇಲ್ಲದೆ ಜೀವನ ಸಾಗಿಸುವುದು ಕಷ್ಟವಾಗಿದೆ. ಕೈಯಲ್ಲಿ ಹಣವಿಲ್ಲ ಎಂದಾಗ ಮಾಲೀಕ ಮನೆ ಖಾಲಿ ಮಾಡುವಂತೆ ಸೂಚಿಸಿದ್ದಾರೆ ಎಂದು ಬಾಡಿಗೆದಾರ ಮಹಿಳೆ ತನ್ನ ನೋವು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ