ಆ್ಯಪ್ನಗರ

ಕೊರೊನಾ ಎಫೆಕ್ಟ್‌: ಮತ್ತೆ ಮುಚ್ಚಿದ ಮಂಗಳೂರಿನ ಸೆಂಟ್ರಲ್‌ ಮಾರುಕಟ್ಟೆ, ಡಿಸಿ ಆದೇಶಕ್ಕೆ ವ್ಯಾಪಾರಸ್ಥರ ಆಕ್ರೋಶ!

ಸೆಂಟ್ರಲ್‌ ಮಾರುಕಟ್ಟೆಯನ್ನು ಮತ್ತೆ ಮುಚ್ಚುವಂತೆ ಜಿಲ್ಲಾಧಿಕಾರಿ ನೀಡಿರುವ ಆದೇಶಕ್ಕೆ ವ್ಯಾಪಾರಸ್ಥರಿಂದ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿದೆ. ವ್ಯಾಪಾರ ನೀಡಲು ಅವಕಾಶ ನೀಡದಿದ್ದರೆ ಆತ್ಮಹತ್ಯೆಯೇ ತಮ್ಮ ಮುಂದಿನ ದಾರಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವ್ಯಾಪಾಸ್ಥರು ಅಳಲು ತೋಡಿಕೊಂಡರು.

Vijaya Karnataka Web 20 Aug 2020, 7:33 am
ಮಂಗಳೂರು: ಕೊರೊನಾ ಹರಡುವ ಕಾರಣದಿಂದಾಗಿ ನಗರದ ಸೆಂಟ್ರಲ್‌ ಮಾರುಕಟ್ಟೆಯನ್ನು ಮತ್ತೆ ಮುಚ್ಚುವಂತೆ ಜಿಲ್ಲಾಧಿಕಾರಿ ನೀಡಿರುವ ಆದೇಶಕ್ಕೆ ವ್ಯಾಪಾರಸ್ಥರಿಂದ ತೀವ್ರ ವಿರೋಧ, ಆಕ್ರೋಶ ವ್ಯಕ್ತವಾಗಿದೆ. ವ್ಯಾಪಾರ ನೀಡಲು ಅವಕಾಶ ನೀಡದಿದ್ದರೆ ಆತ್ಮಹತ್ಯೆಯೇ ತಮ್ಮ ಮುಂದಿನ ದಾರಿಯಾಗಿದ್ದು, ಇದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ವ್ಯಾಪಾಸ್ಥರು ಅಳಲು ತೋಡಿಕೊಂಡರು.
Vijaya Karnataka Web jpg - 2020-08-20T072826.777


ಈ ಹಿಂದಿನ ಸ್ಥಳಾಂತರ ಆದೇಶದ ವಿರುದ್ಧ ಕೋರ್ಟ್‌ ಅನುಮತಿ ಪಡೆದು, ಆ.13ರಿಂದ ಮತ್ತೆ ಸೆಂಟ್ರಲ್‌ ಮಾರುಕಟ್ಟೆಯಲ್ಲಿ ವ್ಯಾಪಾರ ಆರಂಭಿಸಲಾಗಿತ್ತು. ಮಂಗಳವಾರ ರಾತ್ರಿ ಮುಚ್ಚಲು ಆದೇಶ ನೀಡಲಾಗಿತ್ತು. ಬುಧವಾರ ಮಾರುಕಟ್ಟೆ ತೆರೆಯಲು ಅಧಿಕಾರಿಗಳು ತಡೆದರು. ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ನೋಟಿಸ್‌ ನೀಡಲಾರಂಭಿಸಿದರು. ಇದನ್ನು ಲೆಕ್ಕಿಸದೆ, ವ್ಯಾಪಾರಸ್ಥರು ತಮ್ಮ ವ್ಯಾಪಾರ ಮುಂದುವರಿಸಿದರು.

ಸೆಂಟ್ರಲ್‌ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕೋಶಾಧಿಕಾರಿ ಮುಹಮ್ಮದ್‌ ಅಬ್ಬಾಸ್‌ ಮಾತನಾಡಿ, 'ಲಾಕ್‌ಡೌನ್‌ ಸಂದರ್ಭ ವ್ಯಾಪಾರವನ್ನು ಎಪಿಎಂಸಿಗೆ ಸ್ಥಳಾಂತರಿಸಿದ ಬಳಿಕ ಸಂಸದರಾಗಲಿ, ಶಾಸಕರಾಗಲಿ, ಮೇಯರ್‌ ಆಗಲಿ ನಮ್ಮ ಸಂಕಷ್ಟಗಳನ್ನು ಕೇಳಿಲ್ಲ. ನಮ್ಮನ್ನು ಎತ್ತಂಗಡಿ ಮಾಡುವ ಪ್ರಯತ್ನ ಬೇಡ. ಇದರಿಂದ ನಮ್ಮ ಪ್ರಾಣಕ್ಕೇನಾದರೂ ಅಪಾಯವಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಿಎಂ ಕಾರ್ಯಾಲಯದಿಂದ ಕರ್ತವ್ಯಲೋಪ: ಎಂಎಲ್‌ಸಿ ಹರೀಶ್‌ ಕುಮಾರ್‌ ಆರೋಪ

ಚಹಾ ವ್ಯಾಪಾರಿ ರಾಜು, ಹೂವಿನ ವ್ಯಾಪಾರಿ ವಸಂತಿ, ತರಕಾರಿ ವ್ಯಾಪಾರಿಗಳಾದ ಅಮ್ಮಿ ಮಾರಿಪಳ್ಳ, ಅಬ್ದುಲ್‌ ಹಮೀದ್‌ ಮಾರಿಪಳ್ಳ ಮತ್ತಿತರರು ಜಿಲ್ಲಾಡಳಿತದ ಕ್ರಮ ವಿರೋಧಿಸಿ, ಗಣೇಶ ಚತುರ್ಥಿ ಹಬ್ಬದ ವ್ಯಾಪಾರಕ್ಕೆ ಅವಕಾಶ ನೀಡದಿದ್ದರೆ, ಕ್ಲಾಕ್‌ ಟವರ್‌, ಪುರಭವನದ ಎದುರು ರಸ್ತೆಯಲ್ಲೇ ವ್ಯಾಪಾರ ಮಾಡುತ್ತೇವೆ. ಅದಕ್ಕೂ ಅಡ್ಡಿಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾದೀತು ಎಂದು ಅಳಲು ತೋಡಿಕೊಂಡರು.

ಐವನ್‌ ಆಗ್ರಹ!
ಸೆಂಟ್ರಲ್‌ ಮಾರ್ಕೆಟ್‌ನ ತರಕಾರಿ ಹಣ್ಣು-ಹಂಪಲು ವ್ಯಾಪಾರಕ್ಕೆ ಬದಲಿ ವ್ಯವಸ್ಥೆ ಮಾಡದೆ, ಕೊರೊನಾ ಕಾರಣ ನೀಡಿ, ಬೈಕಂಪಾಡಿ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಆದೇಶ ಹಿಂತೆಗೆದುಕೊಳ್ಳಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ ಒತ್ತಾಯ ಮಾಡಿದ್ದಾರೆ.

ಸ್ಥಳೀಯ ಶಾಸಕರು ವ್ಯಾಪಾರ ಎಂದರೆ ಕೇವಲ ವ್ಯಾಪಾರಸ್ಥರಿಗೆ ಮಾತ್ರ ಎಂದು ತಿಳಿದು, ಗ್ರಾಹಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಯಾವುದೇ ಕ್ರಮಬದ್ಧ ಯೋಜನೆ ಇಲ್ಲದೆ ಸಾರ್ವಜನಿಕ ಸೊತ್ತನ್ನು ಪೋಲು ಮಾಡುತ್ತಿರುವುದು, ಆಡಳಿತದ ಅನುಭವದ ಕೊರತೆಯಿಂದ ಜನರು ಸಂಕಷ್ಟಕ್ಕೀಡಾಗಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ