ಆ್ಯಪ್ನಗರ

ದಂಪತಿ ನಿಗೂಢ ಸಾವು: ಮನೆಯೊಳಗೆ ಕೊಳೆತ ಶವಗಳ ಪತ್ತೆ

ಮಂಗಳೂರು ತಾಲೂಕಿನ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ದಂಪತಿಗಳ ಕೊಳೆತ ಶವ ಅವರ ಮನೆಯೊಳಗೆ ಪತ್ತೆಯಾಗಿದೆ. ಅಕ್ಕಪಕ್ಕದ ಮನೆಗಳವರ ಜತೆ ಹೆಚ್ಚು ಸಲುಗೆ ಬೆಳೆಸಿಕೊಂಡಿರದ ಸ್ವಾಭಿಮಾನಿ ದಂಪತಿಗಳಾಗಿದ್ದ ಅವರ ಸಾವಿಗೆ ಕಾರಣ ಹಾಗೂ ಮೃತಪಟ್ಟಿದ್ದು ಹೇಗೆ ಎಂಬುದು ತಿಳಿದಿಲ್ಲ.

Vijaya Karnataka Web 19 Jun 2019, 5:51 pm
ತೊಕ್ಕೊಟ್ಟು: ಕೊಳೆತ ಸ್ಥಿತಿಯಲ್ಲಿ ದಂಪತಿಯ ಶವ ಮನೆಯೊಳಗೆ ಪತ್ತೆಯಾದ ಘಟನೆ ಮಂಗಳೂರು ತಾಲೂಕಿನ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ನಡೆದಿದ್ದು ಬುಧವಾರ ಸಂಜೆ ಬೆಳಕಿಗೆ ಬಂದಿದೆ. ದಂಪತಿ ಸಾವಿನ‌ ಕಾರಣ ನಿಗೂಢವಾಗಿದೆ.
Vijaya Karnataka Web Couple death


ಚೆಂಬುಗುಡ್ಡೆ ನಿವಾಸಿಗಳಾದ ಪದ್ಮನಾಭ (78) ಹಾಗೂ ವಿಮಲ (65) ಮೃತ ದುರ್ದೈವಿ ದಂಪತಿ.

ಅಕ್ಕ ಪಕ್ಕದ ಮನೆಗಳಲ್ಲಿ ಹೆಚ್ಚು ಸಲುಗೆ ಬೆಳೆಸಿಕೊಳ್ಳದ ದಂಪತಿ ಸ್ವಾಭಿಮಾನಿಗಳಾಗಿದ್ದರು. ಪತಿ ಹಾಗೂ ಪತ್ನಿ ಇಬ್ಬರು ಮಾತ್ರ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರ ಶವ ಸಂಪೂರ್ಣ ಕೊಳೆತಿದೆ.

ದಂಪತಿಗಳ ನಿಗೂಢ ಸಾವು: ಪೊಲೀಸರ ಭೇಟಿ


ಮೃತರಿಗೆ ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಸೋಮವಾರ ದಂಪತಿಯನ್ನು ನೆರೆ ಮನೆಯವರು ಕಂಡಿದ್ದಾರೆ. ಮಂಗಳವಾರ ವಿದ್ಯುತ್ ಕಡಿತವಾದಾಗ ಚಿಮಿಣಿ ದೀಪ ಉರಿಸಿದ್ದು ಅದು ಕವುಚಿ ಬಿದ್ದು ಮಹಿಳೆಯ ಸೀರೆಗೆ ತಗುಲಿರಬೇಕು. ರಕ್ಷಣೆಗೆ ಧಾವಿಸಿದ ಗಂಡನಿಗೂ ಬೆಂಕಿ ತಗುಲಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ.

ಘಟನೆ ನಡೆದ ಮನೆ ಮುಂದೆ ನೆರೆದ ಸಾರ್ವಜನಿಕರು


ಖಿನ್ನತೆಯಿಂದ ಇಬ್ಬರೂ ವಿಷ ಸೇವಿಸಿ ಬಳಿಕ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾಗಿರಬೇಕು ಎಂದೂ ಹೇಳಲಾಗುತ್ತಿದೆ.

ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ, ಪಿಎಸ್ ಐ ಗುರುವಪ್ಪ ಕಾಂತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿದ್ದ ದಂಪತಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ