ಆ್ಯಪ್ನಗರ

1.92 ಕೋಟಿ ಮೌಲ್ಯದ ಅಮಾನ್ಯಗೊಳಿಸಿದ ನೋಟು ಪತ್ತೆ: ಮೂವರ ಸೆರೆ

ವಿಚಾರಣೆ ವೇಳೆ ಆರೋಪಿಗಳು ನೋಟನ್ನು ಶಿವಮೊಗ್ಗ, ದಾವಣಗೆರೆ ಕಡೆಯಿಂದ ತರುತ್ತಿರುವುದಾಗಿ ಹೇಳಿದ್ದಾರೆ. ಬ್ಯಾಂಕ್‌ನಲ್ಲಿ ಈ ಹಣ ತೆಗೆದುಕೊಳ್ಳುತ್ತಿಲ್ಲ ಆದರೆ ಬ್ರೋಕರ್‌ಗಳಿಗೆ ಕಮಿಷನ್ ನೀಡಿ ಸಾರ್ವಜನಿಕರಿಗೆ ವಂಚನೆ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದರು

Vijaya Karnataka Web 19 Nov 2021, 1:18 pm
ಮಂಗಳೂರು: ಕೇಂದ್ರ ಸರಕಾರ ಅಮಾನ್ಯಗೊಳಿಸಿದ 1.92 ಕೋಟಿ ರೂ. ಮೌಲ್ಯದ ನೋಟುಗಳನ್ನು ನಗರ ಪೊಲೀಸರು ಪತ್ತೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ್ದಾರೆ.
Vijaya Karnataka Web ಹಳೆಯ ನೋಟುಗಳು
ಹಳೆಯ ನೋಟುಗಳು


ಕಣ್ಣೂರು ಬೋರುಗುಡ್ಡೆ ನಿವಾಸಿ ಜುಬೈರ್ ಹಮ್ಮಬ್ಬ (52), ದೀಪಕ್ ಕುಮಾರ್ (32), ಬಜಪೆಯ ನಾಸೀರ್ (40) ಬಂಧಿತರು.

ಮಂಗಳೂರು ಪೊಲೀಸರ ಕಾರ್ಯಾಚರಣೆ ವೇಳೆ 1 ಸಾವಿರ ಮುಖ ಬೆಲೆಯ 50 ಲಕ್ಷ ರೂ.ಹಾಗೂ 500 ಮುಖ ಬೆಲೆಯ 1 ಕೋಟಿ ರೂ. ಪತ್ತೆಯಾಗಿದೆ.

ಆನ್‌ಲೈನ್ ಸಾಲ ವಂಚನೆ: 1.2 ಲಕ್ಷ ರೂಪಾಯಿ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ವಿಚಾರಣೆ ವೇಳೆ ಆರೋಪಿಗಳು ನೋಟನ್ನು ಶಿವಮೊಗ್ಗ, ದಾವಣಗೆರೆ ಕಡೆಯಿಂದ ತರುತ್ತಿರುವುದಾಗಿ ಹೇಳಿದ್ದಾರೆ. ಬ್ಯಾಂಕ್‌ನಲ್ಲಿ ಈ ಹಣ ತೆಗೆದುಕೊಳ್ಳುತ್ತಿಲ್ಲ ಆದರೆ ಬ್ರೋಕರ್‌ಗಳಿಗೆ ಕಮಿಷನ್ ನೀಡಿ ಸಾರ್ವಜನಿಕರಿಗೆ ವಂಚನೆ ಮಾಡುವ ಉದ್ದೇಶದಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ.
ಸವಾರರೇ ಎಚ್ಚರ! ಬಂಟ್ವಾಳ ತಾಲೂಕಿನ ಹೆದ್ದಾರಿಯಲ್ಲಿವೆ ಹತ್ತಾರು ಅಪಾಯಕಾರಿ ಜಂಕ್ಷನ್‌ಗಳು!
ಐದು ವರ್ಷಗಳ ಹಿಂದೆಯೇ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.

ಆ ನಂತರ ಹೊಸದಾಗಿ 10, 20, 50, 100, 500, 2000 ರೂ. ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು.

ಪೊಲೀಸರ ಕಾರ್ಯಾಚರಣೆ


ಆಂಗ್ಲಭಾಷೆಯಲ್ಲಿ ಬೋರ್ಡ್‌ ಬಳಕೆ: ಕೇಸು

ಕನ್ನಡ ಭಾಷೆಯಲ್ಲಿ ನಾಮಫಲಕವಿಲ್ಲದ ಖಾಸಗಿ ಬಸ್‌ಗಳ ವಿರುದ್ಧ ಗುರುವಾರ ಸಾರಿಗೆ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 22 ಪ್ರಕರಣ ದಾಖಲಿಸಿ, ತಲಾ 2 ಸಾವಿರ ರೂ. ದಂಡ ವಿಧಿಸಿದ್ದಾರೆ.

ಮಂಗಳೂರಿನಿಂದ ತೆರಳುವ ಕೆಲವು ಬಸ್‌ಗಳಲ್ಲಿ ಊರಿನ ಹೆಸರುಗಳನ್ನು ಆಂಗ್ಲಭಾಷೆಯಲ್ಲಿಬರೆಯಲಾಗಿತ್ತು. ಇದರಿಂದ ಪ್ರಯಾಣಿಕರಿಗೆ ಕಷ್ಟವಾಗುತ್ತಿದ್ದು, ಕನ್ನಡ ಭಾಷೆಯಲ್ಲೇ ನಾಮ ಫಲಕ ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗೋಪಾಲಕೃಷ್ಣ ಭಟ್‌ ಅವರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿಕಾರ್ಯಾಚರಣೆ ನಡೆಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿ ರಮೇಶ್‌ ಎಂ. ವರ್ಣೇಕರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ