ವಿಕ ಸುದ್ದಿಲೋಕ ಮಂಗಳೂರು
ಡೆಂಗೆ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೈ ರಿಸ್ಕ್ ಪ್ರದೇಶದಲ್ಲಿ ಯುದ್ದೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಹೇಳಿದರು.
ಪಾಲಿಕೆ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 300 ಮಂದಿಯ 88 ತಂಡಗಳನ್ನು ರಚಿಸಲಾಗಿದೆ. ಪಾಲಿಕೆಯ ಟೌನ್ ಪ್ಲಾನಿಂಗ್ ವಿಭಾಗದಿಂದ ನಿರ್ಮಾಣ ಹಂತದ ಕಟ್ಟಡಗಳ ಪರಿಶೀಲನೆ ನಡೆಸಿ ಸೋಮವಾರ 85 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಮಂಗಳವಾರವೂ ದಂಡ ಪ್ರಕ್ರಿಯೆ ಮುಂದುವರಿದಿದೆ. ಸಿವಿಲ್ ಎಂಜಿನಿಯರಿಂಗ್ ವಿಂಗ್ನಿಂದ ತೋಡು ಸ್ವಚ್ಛತೆ, ನಿರ್ಮಾಣ ಸಾಮಗ್ರಿ ಮೇಲೆ ನಿಗಾ ವಹಿಸಲಾಗಿದೆ. ಮನೆಯೊಳಗೆ ಫಾಗಿಂಗ್ ಹಾಗೂ ತೋಡುಗಳಿಗೆ ಮದ್ದು ಸಿಂಪರಣೆ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
ಕಳೆದ ಒಂದು ತಿಂಗಳಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗೆ ವೈರಸ್ ಬಹಳಷ್ಟು ಪ್ರಮಾಣದಲ್ಲಿ ಹರಡಿದೆ. ಜನರಲ್ಲಿ ಭಯದ ವಾತಾವರಣ ನೆಲೆಸಿದೆ. ಜಿಲ್ಲಾಧಿಕಾರಿಯವರು ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಆದರೆ ಜಿಲ್ಲಾಡಳಿತ, ಪಾಲಿಕೆ ಅಥವಾ ಆರೋಗ್ಯ ಇಲಾಖೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರಲ್ಲಿ ಅರಿವು ಮೂಡಬೇಕು. ಜನರ ಸಹಭಾಗಿತ್ವವಿಲ್ಲದೆ ಡೆಂಗೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪಾಲಿಕೆ ಕಂದಾಯ ಉಪ ಆಯುಕ್ತೆ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪರಿಸರ ಎಂಜಿನಿಯರ್ ಮಧು ಮುಂತಾದವರು ಉಪಸ್ಥಿತರಿದ್ದರು.
ಡೆಂಗೆ ಬಗ್ಗೆ ಭಯವೂ ಬೇಡ, ನಿರ್ಲಕ್ಷ್ಯ
ಬೇಡ: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಮಂಗಳೂರು : ಡೆಂಗೆ ಬಗ್ಗೆ ಭಯ ಬೇಡ, ಹಾಗೆಂತ ನಿರ್ಲಕ್ಷ್ಯವೂ ಸಲ್ಲದು. ಆರೋಗ್ಯವಂತರಿಗೆ ಡೆಂಗೆ ಸೋಂಕು ತಗುಲಿದರೆ 2-3 ದಿನಗಳಲ್ಲಿ ಉಪಶಮನವಾಗುತ್ತದೆ. ಈ ಅವಧಿಯಲ್ಲಿ ಸೋಂಕುಪೀಡಿತರ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ವ್ಯತ್ಯಯ ಕಂಡು ಬಾರದಿದ್ದರೆ ಹೆದರುವ ಅಗತ್ಯವಿಲ್ಲ ಎಂದು ಡೆಂಗೆ ಹಾಗೂ ಮಲೇರಿಯಾ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗೆಪೀಡಿತರ ಹಿಮೋಗ್ಲೋಬಿನ್ ಪ್ರಮಾಣದ ಕುರಿತು ನಿಗಾ ವಹಿಸುವುದು ಬಹಳ ಮುಖ್ಯ. 3-4 ದಿನ ಜ್ವರ ಮುಂದುವರಿದರೆ, ದೇಹದಲ್ಲಿ ಕೆಂಪು ಬಣ್ಣದ ದಡಿಗೆ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ವಾಂತಿ, ಹೊಟ್ಟೆ ನೋವು, ತಲೆ ಸುತ್ತುವಿಕೆ ಕಂಡು ಬಂದರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆ ಎಂದರು.
ಹೆಚ್ಚಿನವರಲ್ಲಿ ಕಂಡು ಬರುವ ಡೆಂಗೆ ಸೌಮ್ಯ ಸ್ವರೂಪದ್ದು. ಒಂದು ಲಕ್ಷ ಮಂದಿಗೆ ಡೆಂಗೆ ಸೋಂಕು ತಗುಲಿದರೂ ಹೆಚ್ಚು ಕಡಿಮೆ 26 ಮಂದಿ ಸಾವನ್ನಪ್ಪಬಹುದು. ಹಾಗೆಂತ ಡೆಂಗೆಯ ಬಗ್ಗೆ ನಿರ್ಲಕ್ಷ್ಯವೂ ಬೇಡ. ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಇತರ ರೋಗಿಗಳು, ಗರ್ಭೀಣಿಯರು, ಮಕ್ಕಳು, ವೃದ್ಧರು ಡೆಂಗೆ ಬಗ್ಗೆ ಎಚ್ಚರವಹಿಸಬೇಕು ಎಂದರು.
ಜನರು ಜಾಗ್ರತರಾಗದಿದ್ದರೆ ಡೆಂಗೆ ನಿಯಂತ್ರಣ ಅಸಾಧ್ಯ. ನಿಂತ ನೀರನ್ನು ತೆರವುಗೊಳಿಸಬೇಕು. ಎಲ್ಲ ನಾಗರಿಕರು ವಾರದಲ್ಲಿ ಒಂದು ದಿನ ಗೊತ್ತು ಮಾಡಿ ತಮ್ಮ ಮನೆಯಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಬೇಕು. ಇದರಿಂದ ನಗರದಲ್ಲಿ 15 ದಿನಗಳಲ್ಲಿ ಸೊಳ್ಳೆಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ. ಸೊಳ್ಳೆಯಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಲು ದೇಹದ ವಾಸನೆ ಬದಲಾಯಿಸುವ ವಾಸನೆಯನ್ನು ಬಳಸಬೇಕು ಎಂದು ಅವರು ನುಡಿದರು.
ಡೆಂಗೆ ನಿಯಂತ್ರಣ ಕುರಿತಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೈ ರಿಸ್ಕ್ ಪ್ರದೇಶದಲ್ಲಿ ಯುದ್ದೋಪಾದಿಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಮಹಮ್ಮದ್ ನಜೀರ್ ಹೇಳಿದರು.
ಪಾಲಿಕೆ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 300 ಮಂದಿಯ 88 ತಂಡಗಳನ್ನು ರಚಿಸಲಾಗಿದೆ. ಪಾಲಿಕೆಯ ಟೌನ್ ಪ್ಲಾನಿಂಗ್ ವಿಭಾಗದಿಂದ ನಿರ್ಮಾಣ ಹಂತದ ಕಟ್ಟಡಗಳ ಪರಿಶೀಲನೆ ನಡೆಸಿ ಸೋಮವಾರ 85 ಸಾವಿರ ರೂ. ದಂಡ ಸಂಗ್ರಹಿಸಲಾಗಿದೆ. ಮಂಗಳವಾರವೂ ದಂಡ ಪ್ರಕ್ರಿಯೆ ಮುಂದುವರಿದಿದೆ. ಸಿವಿಲ್ ಎಂಜಿನಿಯರಿಂಗ್ ವಿಂಗ್ನಿಂದ ತೋಡು ಸ್ವಚ್ಛತೆ, ನಿರ್ಮಾಣ ಸಾಮಗ್ರಿ ಮೇಲೆ ನಿಗಾ ವಹಿಸಲಾಗಿದೆ. ಮನೆಯೊಳಗೆ ಫಾಗಿಂಗ್ ಹಾಗೂ ತೋಡುಗಳಿಗೆ ಮದ್ದು ಸಿಂಪರಣೆ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.
ಕಳೆದ ಒಂದು ತಿಂಗಳಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗೆ ವೈರಸ್ ಬಹಳಷ್ಟು ಪ್ರಮಾಣದಲ್ಲಿ ಹರಡಿದೆ. ಜನರಲ್ಲಿ ಭಯದ ವಾತಾವರಣ ನೆಲೆಸಿದೆ. ಜಿಲ್ಲಾಧಿಕಾರಿಯವರು ಹಲವು ಸುತ್ತಿನ ಸಭೆ ನಡೆಸಿದ್ದಾರೆ. ಆದರೆ ಜಿಲ್ಲಾಡಳಿತ, ಪಾಲಿಕೆ ಅಥವಾ ಆರೋಗ್ಯ ಇಲಾಖೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಜನರಲ್ಲಿ ಅರಿವು ಮೂಡಬೇಕು. ಜನರ ಸಹಭಾಗಿತ್ವವಿಲ್ಲದೆ ಡೆಂಗೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಪಾಲಿಕೆ ಕಂದಾಯ ಉಪ ಆಯುಕ್ತೆ ಗಾಯತ್ರಿ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪರಿಸರ ಎಂಜಿನಿಯರ್ ಮಧು ಮುಂತಾದವರು ಉಪಸ್ಥಿತರಿದ್ದರು.
ಡೆಂಗೆ ಬಗ್ಗೆ ಭಯವೂ ಬೇಡ, ನಿರ್ಲಕ್ಷ್ಯ
ಬೇಡ: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ಮಂಗಳೂರು : ಡೆಂಗೆ ಬಗ್ಗೆ ಭಯ ಬೇಡ, ಹಾಗೆಂತ ನಿರ್ಲಕ್ಷ್ಯವೂ ಸಲ್ಲದು. ಆರೋಗ್ಯವಂತರಿಗೆ ಡೆಂಗೆ ಸೋಂಕು ತಗುಲಿದರೆ 2-3 ದಿನಗಳಲ್ಲಿ ಉಪಶಮನವಾಗುತ್ತದೆ. ಈ ಅವಧಿಯಲ್ಲಿ ಸೋಂಕುಪೀಡಿತರ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ವ್ಯತ್ಯಯ ಕಂಡು ಬಾರದಿದ್ದರೆ ಹೆದರುವ ಅಗತ್ಯವಿಲ್ಲ ಎಂದು ಡೆಂಗೆ ಹಾಗೂ ಮಲೇರಿಯಾ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಹೇಳಿದರು.
ಪಾಲಿಕೆ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೆಂಗೆಪೀಡಿತರ ಹಿಮೋಗ್ಲೋಬಿನ್ ಪ್ರಮಾಣದ ಕುರಿತು ನಿಗಾ ವಹಿಸುವುದು ಬಹಳ ಮುಖ್ಯ. 3-4 ದಿನ ಜ್ವರ ಮುಂದುವರಿದರೆ, ದೇಹದಲ್ಲಿ ಕೆಂಪು ಬಣ್ಣದ ದಡಿಗೆ ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ವಾಂತಿ, ಹೊಟ್ಟೆ ನೋವು, ತಲೆ ಸುತ್ತುವಿಕೆ ಕಂಡು ಬಂದರೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದೆ ಎಂದರು.
ಹೆಚ್ಚಿನವರಲ್ಲಿ ಕಂಡು ಬರುವ ಡೆಂಗೆ ಸೌಮ್ಯ ಸ್ವರೂಪದ್ದು. ಒಂದು ಲಕ್ಷ ಮಂದಿಗೆ ಡೆಂಗೆ ಸೋಂಕು ತಗುಲಿದರೂ ಹೆಚ್ಚು ಕಡಿಮೆ 26 ಮಂದಿ ಸಾವನ್ನಪ್ಪಬಹುದು. ಹಾಗೆಂತ ಡೆಂಗೆಯ ಬಗ್ಗೆ ನಿರ್ಲಕ್ಷ್ಯವೂ ಬೇಡ. ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಇತರ ರೋಗಿಗಳು, ಗರ್ಭೀಣಿಯರು, ಮಕ್ಕಳು, ವೃದ್ಧರು ಡೆಂಗೆ ಬಗ್ಗೆ ಎಚ್ಚರವಹಿಸಬೇಕು ಎಂದರು.
ಜನರು ಜಾಗ್ರತರಾಗದಿದ್ದರೆ ಡೆಂಗೆ ನಿಯಂತ್ರಣ ಅಸಾಧ್ಯ. ನಿಂತ ನೀರನ್ನು ತೆರವುಗೊಳಿಸಬೇಕು. ಎಲ್ಲ ನಾಗರಿಕರು ವಾರದಲ್ಲಿ ಒಂದು ದಿನ ಗೊತ್ತು ಮಾಡಿ ತಮ್ಮ ಮನೆಯಲ್ಲಿ ನಿಂತಿರುವ ನೀರನ್ನು ತೆರವುಗೊಳಿಸಬೇಕು. ಇದರಿಂದ ನಗರದಲ್ಲಿ 15 ದಿನಗಳಲ್ಲಿ ಸೊಳ್ಳೆಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ. ಸೊಳ್ಳೆಯಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಲು ದೇಹದ ವಾಸನೆ ಬದಲಾಯಿಸುವ ವಾಸನೆಯನ್ನು ಬಳಸಬೇಕು ಎಂದು ಅವರು ನುಡಿದರು.