ಆ್ಯಪ್ನಗರ

ಜಿಲ್ಲಾ ಮಟ್ಟದ ಯುವಜನ ಮೇಳ ಸಮಾರೋಪ

ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ, ದ.ಕ ಜಿಲ್ಲಾ ಯುವ ಜನ ಒಕ್ಕೂಟ ಆಶ್ರಯದಲ್ಲಿ ತಣ್ಣೀರುಬಾವಿ ಯುವಕ ಯುವತಿ ಮಂಡಲ ಚಿತ್ರಾಪುರ ಕು.ಶಿವಾನಿ ಕಲಾವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನಮೇಳ 2018-19 ರ ಸಮಾರೋಪ ಜರುಗಿತು.ಯುವಕರ ಹಾಗೂ ಯುವತಿಯರ ವಿಭಾಗದಲ್ಲಿ ಮಂಗಳೂರು ತಾಲೂಕು ಸಮಗ್ರ ಪ್ರಶಸ್ತಿ ಪಡೆಯಿತು.

Vijaya Karnataka 18 Dec 2018, 4:25 pm
ಸುರತ್ಕಲ್‌ : ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ, ಮಂಗಳೂರು ಮಹಾನಗರ ಪಾಲಿಕೆ, ದ.ಕ ಜಿಲ್ಲಾ ಯುವ ಜನ ಒಕ್ಕೂಟ ಆಶ್ರಯದಲ್ಲಿ ತಣ್ಣೀರುಬಾವಿ ಯುವಕ ಯುವತಿ ಮಂಡಲ ಚಿತ್ರಾಪುರ ಕು.ಶಿವಾನಿ ಕಲಾವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನಮೇಳ 2018-19 ರ ಸಮಾರೋಪ ಜರುಗಿತು.ಯುವಕರ ಹಾಗೂ ಯುವತಿಯರ ವಿಭಾಗದಲ್ಲಿ ಮಂಗಳೂರು ತಾಲೂಕು ಸಮಗ್ರ ಪ್ರಶಸ್ತಿ ಪಡೆಯಿತು.
Vijaya Karnataka Web MNR-17SUR-YUVAJANA


ಯುವಕರ ವಿಭಾಗದಲ್ಲಿ ಭಾವಗೀತೆಯಲ್ಲಿ ಶ್ರೀರಾಮ ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಪ್ರಥಮ ಸ್ಥಾನ ಗಳಿಸಿತು. ಯುವಕ ಮಂಡಲ ಕೃಷ್ಣಾಪುರ ದ್ವಿತೀಯ ಸ್ಥಾನ ಗಳಿಸಿತು.

ಭಜನೆಯಲ್ಲಿ ಸಸಿಹಿತ್ಲು ಯುವಕ ಮಂಡಲ ಪ್ರಥಮ, ವಿದ್ಯಾರ್ಥಿ ಸಂಘ ಯುವಕ ಮಂಡಲ ಬೈಕಂಪಾಡಿ ದ್ವಿತೀಯ ಸ್ಥಾನ ಪಡೆಯಿತು. ಕೋಲಾಟದಲ್ಲಿ ವಿದ್ಯಾರ್ಥಿ ಸಂಘ ಯುವಕ ಮಂಡಲ ಬೈಕಂಪಾಡಿ ಪ್ರಥಮ, ಸಸಿಹಿತ್ಲು ಯುವಕ ಮಂಡಲ ದ್ವಿತೀಯ ಸ್ಥಾನ ಪಡೆಯಿತು. ಜಾನಪದ ನೃತ್ಯ ವಿಭಾಗದಲ್ಲಿ ಸಸಿಹಿತ್ಲು ಯುವಕ ಮಂಡಲ ಪ್ರಥಮ ಸ್ಥಾನ ಪಡೆಯಿತು. ಯುವಕ ಮಂಡಲ ಕೃಷ್ಣಾಪುರ ದ್ವಿತೀಯ ಸ್ಥಾನಿಯಾಯಿತು.

ಯುವತಿಯರ ವಿಭಾಗದಲ್ಲಿ ಭಾವಗೀತೆಯಲ್ಲಿ ಸ್ಮಿತಾ ಶೌರ್ಯ ಯುವತಿ ಮಂಡಲ ಪೈಲಾರ್‌ ಸುಳ್ಯ ಪ್ರಥಮ, ಗುರುಪ್ರಿಯಾ ನಾಯಕ್‌, ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಪುರುಷರ ಕಟ್ಟೆ ಪುತ್ತೂರು ದ್ವಿತೀಯ ಸ್ಥಾನ ಪಡೆಯಿತು.

ಭಜನೆಯಲ್ಲಿ ಶ್ರುತಿ ಯುವತಿ ಮಂಡಲ ದೇವಚಳ್ಳ ಸುಳ್ಯ ಪ್ರಥಮ, ನವಚೇತನ ಯುವತಿ ಮಂಡಲ ದ್ವಿತೀಯ ಸ್ಥಾನ ಪಡೆಯಿತು. ಕೋಲಾಟದಲ್ಲಿ ತಣ್ಣೀರುಬಾವಿ ಯುವತಿ ಮಂಡಲ ಮಂಗಳೂರು ಪ್ರಥಮ, ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು ಪುತ್ತೂರು ದ್ವಿತೀಯ ಸ್ಥಾನ ಪಡೆಯಿತು. ತುಳು ಜಾಣಪದ ಕುಣಿತದಲ್ಲಿ ನವಚೇತನ ಯುವತಿ ಮಂಡಲ ಚೆಂಡುಕಳ ಅಳಿಕೆ ಪ್ರಥಮ ಸ್ಥಾನ ಪಡೆಯಿತು. ತಣ್ಣೀರುಬಾವಿ ಯುವತಿ ಮಂಡಲ ಮಂಗಳೂರು ದ್ವಿತೀಯ ಸ್ಥಾನ ಪಡೆಯಿತು. ವೈಯುಕ್ತಿಕ ಯುವಕ ಯುವತಿಯರ ವಿಭಾಗದಲ್ಲಿ ಹಲವು ಸ್ಪರ್ಧೆ ಜರುಗಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ