ಮಂಗಳೂರು: ಕೊರೊನಾ ವೈರಸ್ ತಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯ ಸಹಕಾರಿ ಸಂಘ ಸಂಸ್ಥೆಗಳ ವತಿಯಿಂದ ಒಟ್ಟಾಗಿ 47.15 ಕೋಟಿ ರೂ. ದೇಣಿಗೆ ನೀಡಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ದೇಣಿಗೆಯನ್ನು ಸಹಕಾರಿ ಸಚಿವರ ಮೂಲಕ ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದಿಂದ ಮಂಗಳವಾರ 50 ಲಕ್ಷ ರೂ., ಶಿರಸಿ ಎಪಿಎಂಸಿಯಿಂದ 50 ಲಕ್ಷ, ಕ್ಯಾಂಪ್ಕೊ ಸಂಸ್ಥೆಯಿಂದ 25 ಲಕ್ಷ ರೂ., ಎಟಿಎಸ್ ಇಂಡಿಯಾ ಪ್ರೈ. ಲಿ. ವತಿಯಿಂದ 20 ಲಕ್ಷ, ಶಿರಸಿಯ ತೋಟಗಾರ್ಸ್ ಸಂಸ್ಥೆಯಿಂದ 10 ಲಕ್ಷ ಸೇರಿದಂತೆ ವಿವಿಧ ಸಹಕಾರಿ ಸಂಘ ಸಂಸ್ಥೆಗಳು ದೇಣಿಗೆ ನೀಡಿದ್ದು, ಪುತ್ತೂರಿನ ಕೋ-ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ 75 ಸಾವಿರ ರೂ. ದೇಣಿಗೆ ನೀಡಲಾಗಿದೆ.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಉಪಸ್ಥಿತರಿದ್ದರು.
ಮಲೇಷ್ಯಾ ಕನ್ನಡಿಗರ ಸಂಕಷ್ಟ ಕೇಳುವರಿಲ್ಲ: ವಾಪಸ್ ಕರೆಸಿಕೊಳ್ಳಲು ಅಂಗಲಾಚಿದ ವಿದ್ಯಾರ್ಥಿ
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದಿಂದ ಮಂಗಳವಾರ 50 ಲಕ್ಷ ರೂ., ಶಿರಸಿ ಎಪಿಎಂಸಿಯಿಂದ 50 ಲಕ್ಷ, ಕ್ಯಾಂಪ್ಕೊ ಸಂಸ್ಥೆಯಿಂದ 25 ಲಕ್ಷ ರೂ., ಎಟಿಎಸ್ ಇಂಡಿಯಾ ಪ್ರೈ. ಲಿ. ವತಿಯಿಂದ 20 ಲಕ್ಷ, ಶಿರಸಿಯ ತೋಟಗಾರ್ಸ್ ಸಂಸ್ಥೆಯಿಂದ 10 ಲಕ್ಷ ಸೇರಿದಂತೆ ವಿವಿಧ ಸಹಕಾರಿ ಸಂಘ ಸಂಸ್ಥೆಗಳು ದೇಣಿಗೆ ನೀಡಿದ್ದು, ಪುತ್ತೂರಿನ ಕೋ-ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ 75 ಸಾವಿರ ರೂ. ದೇಣಿಗೆ ನೀಡಲಾಗಿದೆ.
ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಪುತ್ತೂರು ಶಾಸಕ ಸಂಜೀವ ಮಠಂದೂರು, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಉಪಸ್ಥಿತರಿದ್ದರು.
ಮಲೇಷ್ಯಾ ಕನ್ನಡಿಗರ ಸಂಕಷ್ಟ ಕೇಳುವರಿಲ್ಲ: ವಾಪಸ್ ಕರೆಸಿಕೊಳ್ಳಲು ಅಂಗಲಾಚಿದ ವಿದ್ಯಾರ್ಥಿ