ಮಂಗಳೂರು: 2019ನೇ ಸಾಲಿನ ದೋಗ್ರಪೂಜಾರಿ ಪ್ರಶಸ್ತಿ 'ಶ್ರೀ ಮುಖ್ಯಪ್ರಾಣ ಕಿನ್ನಿಗೋಳಿ' ಅವರಿಗೆ ಲಭಿಸಿದ್ದು, ಜು.17ರಂದು ಸಂಜೆ 4.30ಕ್ಕೆ ಕಂಕನಾಡಿ ಗರಡಿಯ ಸರ್ವಮಂಗಳೆ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿಯ ಕಾರ್ಯಾಧ್ಯಕ್ಷ ಬಿ. ದಾಮೋದರ ನಿಸರ್ಗ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ವಸಂತ ಕುಮಾರ್ ಪೆರ್ಲ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪನ್ಯಾಸಕ ಕರುಣಾಕರ ಬಳ್ಕೂರು ಭಾಗವಹಿಸಲಿದ್ದಾರೆ.
ಯಕ್ಷ ಗಾನ ಸಂಘಟಕ, ಮೇಳಗಳ ವ್ಯವಸ್ಥಾಪಕ ದಿ. ದೋಗ್ರ ಪೂಜಾರಿ ಅವರ ನೆನಪಿಗಾಗಿ ಅಭಿಮಾನಿಗಳ ಆಸೆಯಂತೆ ಸಾಹಿತಿ ಡಾ. ಅಮೃತ ಸೋಮೇಶ್ವರ , ಕುಂಬ್ಳೆ ಸುಂದರ ರಾವ್, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಮಧುಕುಮಾರ್ ನಿಸರ್ಗ ಅವರನ್ನೊಳಗೊಂಡ ಆಯ್ಕೆ ಸಮಿತಿ ದಾಮೋದರ್ ನಿಸರ್ಗ ನಿರ್ದೇಶನದಲ್ಲಿ ಪ್ರಶಸ್ತಿ ನಿರ್ಧಾರ ಮಾಡುತ್ತಿದೆ.
ದಮಯಂತಿ ಪುನ ಸ್ವಯಂವರದ ಬಾಹುಕ, ಗದಾಯುದ್ಧದ ಸಂಜಯ, ಶ್ರೀ ಕೃಷ್ಣ ಚಂದ್ರಾವಳಿಯ ಚಂದಗೋಪ, ಅತ್ತೆ, ಗದಾಯುದ್ಧದ ಬೇಹಿನಚರ, ದೇವಿಮಹಾತ್ಮೆಯೆ ಚಾರಕ, ಸುಗ್ರೀವ ಇತ್ಯಾದಿ ವೇಷಗಳನ್ನು ಮಾಡಿ ಪ್ರಸಿದ್ಧರಾದ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಉತ್ತಮ ಸಾಧನೆ ಮಾಡಿದ ಅನುಭವಿ, ಪ್ರಸಿದ್ಧ ಯಕ್ಷ ಗಾನ ಕಲಾವಿದರು.
ಅವರಿಗೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷ ಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ವಸಂತ ಕುಮಾರ್ ಪೆರ್ಲ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಉಪನ್ಯಾಸಕ ಕರುಣಾಕರ ಬಳ್ಕೂರು ಭಾಗವಹಿಸಲಿದ್ದಾರೆ.
ಯಕ್ಷ ಗಾನ ಸಂಘಟಕ, ಮೇಳಗಳ ವ್ಯವಸ್ಥಾಪಕ ದಿ. ದೋಗ್ರ ಪೂಜಾರಿ ಅವರ ನೆನಪಿಗಾಗಿ ಅಭಿಮಾನಿಗಳ ಆಸೆಯಂತೆ ಸಾಹಿತಿ ಡಾ. ಅಮೃತ ಸೋಮೇಶ್ವರ , ಕುಂಬ್ಳೆ ಸುಂದರ ರಾವ್, ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್, ಮಧುಕುಮಾರ್ ನಿಸರ್ಗ ಅವರನ್ನೊಳಗೊಂಡ ಆಯ್ಕೆ ಸಮಿತಿ ದಾಮೋದರ್ ನಿಸರ್ಗ ನಿರ್ದೇಶನದಲ್ಲಿ ಪ್ರಶಸ್ತಿ ನಿರ್ಧಾರ ಮಾಡುತ್ತಿದೆ.
ದಮಯಂತಿ ಪುನ ಸ್ವಯಂವರದ ಬಾಹುಕ, ಗದಾಯುದ್ಧದ ಸಂಜಯ, ಶ್ರೀ ಕೃಷ್ಣ ಚಂದ್ರಾವಳಿಯ ಚಂದಗೋಪ, ಅತ್ತೆ, ಗದಾಯುದ್ಧದ ಬೇಹಿನಚರ, ದೇವಿಮಹಾತ್ಮೆಯೆ ಚಾರಕ, ಸುಗ್ರೀವ ಇತ್ಯಾದಿ ವೇಷಗಳನ್ನು ಮಾಡಿ ಪ್ರಸಿದ್ಧರಾದ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಉತ್ತಮ ಸಾಧನೆ ಮಾಡಿದ ಅನುಭವಿ, ಪ್ರಸಿದ್ಧ ಯಕ್ಷ ಗಾನ ಕಲಾವಿದರು.
ಅವರಿಗೆ 2014ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷ ಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಸಂದಿದೆ.