ಆ್ಯಪ್ನಗರ

ಎತ್ತಿನಹೊಳೆ: ದಕ್ಷಿಣ.ಕನ್ನಡ ಜಿಲ್ಲೆ ಸಂಪೂರ್ಣ ಬಂದ್

ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ಗುರುವಾರ ಸಂಪೂರ್ಣ ಬಂದ್ ನಡೆದಿದೆ. ಬೆರಳಣಿಕೆಯ ಕೆಲವು ಖಾಸಗಿ ವಾಹನಗಳು ಬಿಟ್ಟರೆ ಯಾವುದೆ ವಾಹನಗಳು ರಸ್ತೆಗೆ ಉಳಿದಿಲ್ಲ.

ವಿಕ ಸುದ್ದಿಲೋಕ 19 May 2016, 4:16 pm
ಗಳೂರು: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ಗುರುವಾರ ಸಂಪೂರ್ಣ ಬಂದ್ ನಡೆದಿದೆ. ಬೆರಳಣಿಕೆಯ ಕೆಲವು ಖಾಸಗಿ ವಾಹನಗಳು ಬಿಟ್ಟರೆ ಯಾವುದೆ ವಾಹನಗಳು ರಸ್ತೆಗೆ ಉಳಿದಿಲ್ಲ.
Vijaya Karnataka Web ettinahole project dakshina kannada band
ಎತ್ತಿನಹೊಳೆ: ದಕ್ಷಿಣ.ಕನ್ನಡ ಜಿಲ್ಲೆ ಸಂಪೂರ್ಣ ಬಂದ್


ಹೋಟೆಲ್ ಗಳು ಸೇರಿದಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. , ಬಸ್ ಸಂಚಾರವಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿವೆ. ಯೋಜನೆ ವಿರೋಧಿಸಿ ನಗರದಲ್ಲಿ ವಿದ್ಯಾ ರ್ಥಿಗಳು ಸೈಕ್ಲಿಂಗ್, ಮೆರವಣಿಗೆ ನಡೆಸಿದರು.

ಪ್ರತಿದಿನ ವ್ಯಾಪಾರರದಿಂದ ಕೂಡಿರುವ ಕೇಂದ್ರ ಮಾರುಕಟ್ಟೆ ಪೂರ್ಣ ಬಂದ್ ನಲ್ಲಿ ಭಾಗವಹಿಸಿದ್ದು, ಯಾವುದೇ ವ್ಯವಹಾರ ನಡೆದಿಲ್ಲ.




ಯೋಜನೆ ವಿರೋಧಿಸಿ ನಗರದಲ್ಲಿ ವಿದ್ಯಾರ್ಥಿಗಳ ಸೈಕ್ಲಿಂಗ್
ಯೋಜನೆ ವಿರೋಧಿಸಿ ದಕ್ಷಿಣ ಕನ್ನಡದಲ್ಲಿ ಬಂದ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ಕೊಟ್ಟಿಗೆಹಾರ ನಿಲ್ದಾಣದಲ್ಲೇ ಬಸ್‌ಗಳು ನಿಲುಗಡೆಗೊಂಡಿವೆ.
ಬೆಳಗಿನ ಜಾವದಿಂದಲೇ ಚಾರ್ಮಾಡಿ ಘಾಟಿಯಿಂದ ಕೆಳಗಿಳಿಯದ ಬಸ್ ಗಳು ಇಲ್ಲೇ ಇವೆ. ಪ್ರತಿನಿತ್ಯ ಧರ್ಮಸ್ಥಳಕ್ಕೆ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುತ್ತವೆ. ಬಂದ್‌ ಕಾರಣ ಬಸ್ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರ ಪರದಾಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ