ವಿಜಯ್ ಕೋಟ್ಯಾನ್
ಮಂಗಳೂರು: ರಾಜ್ಯದಲ್ಲಿಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಕಳೆದ ಹಲವು ವರ್ಷಗಳಿಂದ ಕಠಿಣ ನೀತಿ ಸಂಹಿತೆ ಮೂಲಕ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಮೂಗುದಾರ ಹಾಕುತ್ತಿರುವ ಕಾರಣ ಈ ಬಾರಿ ಚುನಾವಣೆ ಘೋಷಣೆಗೂ ಮುನ್ನವೇ ಎಲ್ಲ ಪಕ್ಷಗಳೂ ಬಹುತೇಕ ಪ್ರಚಾರ ಅಂತ್ಯಗೊಳಿಸುವ ಯೋಜನೆ ರೂಪಿಸಿವೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪ್ರಚಾರ ಕಾರ್ಯಕ್ರಮ ಒಂದು ಹೆಜ್ಜೆ ಮುಂದಿದ್ದು, ನಾನಾ ರೀತಿಯಲ್ಲಿಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳೂ ಪ್ರಚಾರದ ಬೆನ್ನು ಬಿದ್ದಿವೆ.
ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್
ರಾಜ್ಯದಲ್ಲಿ 150 ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿ ಡಿ.2ರಿಂದಲೇ ರಾಜ್ಯಾದ್ಯಂತ ಬೂತ್ ಅಭಿಯಾನ ಆರಂಭಿಸಿದೆ. ಬೂತ್ ಮಟ್ಟದಲ್ಲೇ ಕಮಿಟಿ ಸಭೆ ನಡೆಸಿ ಚುನಾವಣೆಗೆ ತಯಾರಿ ನಡೆಸಿದೆ. ಪೇಜ್ ಪ್ರಮುಖ್ ನೇಮಕಗೊಳಿಸಿ ಒಬ್ಬ 25 ಮತದಾರರನ್ನು ಸಂಪರ್ಕ ಮಾಡಬೇಕು. ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಮತದಾರರನ್ನು ಅದಕ್ಕೆ ಸೇರ್ಪಡೆಗೊಳಿಸಿ ಸರಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಬೇಕು. ಒಂದು ಬೂತ್ನಲ್ಲಿ ಕನಿಷ್ಠ 25 ಮನೆಗಳಿಗೆ ಪಕ್ಷದ ಧ್ವಜ ಅಳವಡಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದ್ದು, ಈ ಅಭಿಯಾನ ಯಶಸ್ಸು ಕಂಡಿದೆ.
ಇದಾದ ರಾಜ್ಯಾದ್ಯಂತ ಜ.21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಿದೆ. ಈ ಅವಧಿಯಲ್ಲಿ ಮನೆ ಮನೆ ಸಂಪರ್ಕ, ಸ್ಟಿಕ್ಕರ್ ಅಳವಡಿಕೆ, ಗೋಡೆ ಬರಹಗಳ ರಚನೆ, ಮಿಸ್ಡ್ಕಾಲ್ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಪ್ರತಿ ಜಿಲ್ಲೆಯಿಂದ 1 ಲಕ್ಷ ಹೊಸ ಸದಸ್ಯತ್ವ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
ಕಾಂಗ್ರೆಸ್ ಪ್ರಜಾಧ್ವನಿ
ಬಿಜೆಪಿ ಪ್ರಚಾರ ವೇಗಕ್ಕೆ ಪ್ರತಿತಂತ್ರ ಮಾಡಿರುವ ಕಾಂಗ್ರೆಸ್ ಈಗಾಗಲೇ ಬೂತ್ ಕಮಿಟಿ ರಚಿಸಿ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್) ನೇಮಕ ಮಾಡಿದೆ. ಬಳಿಕ ಬೂತ್, ಗ್ರಾಮ, ವಲಯ, ಬ್ಲಾಕ್ ಸಮಿತಿ ರಚಿಸಲಾಗಿದೆ. ಇದಾದ ನಂತರ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ.
ಕರಾವಳಿ, ಮಲೆನಾಡಿನ ಆರು ಜಿಲ್ಲೆಗಳಿಗೆ ಫೆ.5ರಿಂದ ಪ್ರತ್ಯೇಕ ‘ಕರಾವಳಿ- ಮಲೆನಾಡು ಪ್ರಜಾಧ್ವನಿ ಯಾತ್ರೆ’ ನಡೆಯಲಿದೆ. ಇದಕ್ಕೆ ರಾಜ್ಯ ನಾಯಕರು ಆಗಮಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬೂತ್ ವ್ಯಾಪ್ತಿಯಲ್ಲಿ ಸಭೆ ನಡೆಸಿ ತಯಾರಿ. ಇದರ ಸಮಾರೋಪದ ಬಳಿಕ ಎರಡು ಹಂತದಲ್ಲಿ ವಿಧಾನಸಭೆ ವ್ಯಾಪ್ತಿಗೊಂದು ಬೃಹತ್ ಸಾರ್ವಜನಿಕ ಸಭೆ ನಡೆಸಿ ಒಂದು ಸಭೆಗೆ ಡಿ ಕೆ ಶಿವಕುಮಾರ್, ಇನ್ನೊಂದು ಸಭೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಮಾರ್ಚ್ 20ರೊಳಗೆ ಮುಗಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್.
ಜೆಡಿಎಸ್ ‘ಪಂಚರತ್ನ ಯಾತ್ರೆ’
ಪ್ರತಿ ಚುನಾವಣೆಯಲ್ಲಿತನ್ನ ಅಸ್ತಿತ್ವ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಬಾರಿ ಪಂಚರತ್ನ ಯಾತ್ರೆ ಮೂಲಕ ಪ್ರಚಾರ ಅಭಿಯಾನ ಆರಂಭಿಸಿದೆ. ಈ ವೇಳೆ ಜನಸಂಪರ್ಕ ಸಭೆ, ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವೂ ನಡೆಯುತ್ತಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳ ಮುಖಂಡರ ಆರೋಪ- ಪ್ರತ್ಯಾರೋಪ ತಾರಕಕ್ಕೇರಿದೆ. ಭ್ರಷ್ಟಾಚಾರವನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿಸಿದರೆ, ಬಿಜೆಪಿ ಅದಕ್ಕೆ ಸಬೂಬು ನೀಡುತ್ತಿದೆ. ಜೆಡಿಎಸ್ ಎರಡೂ ಪಕ್ಷಗಳ ವೈಫಲ್ಯ ಬೊಟ್ಟು ಮಾಡಿ ತೋರಿಸಿ ‘ಕಿಂಗ್ ಮೇಕರ್’ ಮೂಲಕ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿದೆ.
ಕ್ಷೇತ್ರವಾರು ಪ್ರಣಾಳಿಕೆ ಗಿಮಿಕ್
ಮತದಾರರನ್ನು ಸೆಳೆಯಲು ಈಗಲೇ ಎಲ್ಲ ಪಕ್ಷಗಳು ಒಂದೊಂದು ರೀತಿಯ ಕಸರತ್ತು ನಡೆಸುತ್ತಿದ್ದರೆ, ಕಾಂಗ್ರೆಸ್ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಕ್ಷೇತ್ರವಾರು ಪ್ರಣಾಳಿಕೆ ಘೋಷಿಸುತ್ತಿದೆ.
ವಿಜಯ ಸಂಕಲ್ಪ ಅಭಿಯಾನದಲ್ಲಿ ಮನೆ ಮನೆ ಭೇಟಿ ಮಾಡಿ ಕೇಂದ್ರ, ರಾಜ್ಯ ಸರಕಾರ, ಶಾಸಕರ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ನಮ್ಮ ಒಂದು ಹಂತದ ಪ್ರಚಾರ ಕಾರ್ಯ ಮುಗಿದಂತಾಗಿದೆ.
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಹೈಕಮಾಂಡ್ ಸೂಚನೆಯಂತೆ ಪ್ರಚಾರ ಆರಂಭವಾಗಿದೆ. ಪ್ರಜಾಧ್ವನಿ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಕರಾವಳಿ, ಮಲೆನಾಡು ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ರಾಜ್ಯ, ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಮಾರ್ಚ್ ತಿಂಗಳಾಂತ್ಯದೊಳಗೆ ಪ್ರಚಾರ ಸಭೆ ನಡೆಯಲಿದೆ.
-ಬಿ.ಕೆ. ಹರಿಪ್ರಸಾದ್ ಪ್ರಧಾನ ಕಾರ್ಯದರ್ಶಿ, ಎಐಸಿಸಿ
ಮಂಗಳೂರು: ರಾಜ್ಯದಲ್ಲಿಇನ್ನೆರಡು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಕಳೆದ ಹಲವು ವರ್ಷಗಳಿಂದ ಕಠಿಣ ನೀತಿ ಸಂಹಿತೆ ಮೂಲಕ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಮೂಗುದಾರ ಹಾಕುತ್ತಿರುವ ಕಾರಣ ಈ ಬಾರಿ ಚುನಾವಣೆ ಘೋಷಣೆಗೂ ಮುನ್ನವೇ ಎಲ್ಲ ಪಕ್ಷಗಳೂ ಬಹುತೇಕ ಪ್ರಚಾರ ಅಂತ್ಯಗೊಳಿಸುವ ಯೋಜನೆ ರೂಪಿಸಿವೆ.
ಬಿಜೆಪಿಯಿಂದ ಮಾಸ್ಟರ್ ಪ್ಲ್ಯಾನ್
ರಾಜ್ಯದಲ್ಲಿ 150 ಟಾರ್ಗೆಟ್ ಇಟ್ಟುಕೊಂಡಿರುವ ಬಿಜೆಪಿ ಡಿ.2ರಿಂದಲೇ ರಾಜ್ಯಾದ್ಯಂತ ಬೂತ್ ಅಭಿಯಾನ ಆರಂಭಿಸಿದೆ. ಬೂತ್ ಮಟ್ಟದಲ್ಲೇ ಕಮಿಟಿ ಸಭೆ ನಡೆಸಿ ಚುನಾವಣೆಗೆ ತಯಾರಿ ನಡೆಸಿದೆ. ಪೇಜ್ ಪ್ರಮುಖ್ ನೇಮಕಗೊಳಿಸಿ ಒಬ್ಬ 25 ಮತದಾರರನ್ನು ಸಂಪರ್ಕ ಮಾಡಬೇಕು. ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಮತದಾರರನ್ನು ಅದಕ್ಕೆ ಸೇರ್ಪಡೆಗೊಳಿಸಿ ಸರಕಾರದ ಯೋಜನೆಗಳು, ಅಭಿವೃದ್ಧಿ ಕಾರ್ಯಗಳನ್ನು ಮನವರಿಕೆ ಮಾಡಬೇಕು. ಒಂದು ಬೂತ್ನಲ್ಲಿ ಕನಿಷ್ಠ 25 ಮನೆಗಳಿಗೆ ಪಕ್ಷದ ಧ್ವಜ ಅಳವಡಿಕೆ ಮಾಡಬೇಕು ಎಂದು ಸೂಚನೆ ನೀಡಲಾಗಿದ್ದು, ಈ ಅಭಿಯಾನ ಯಶಸ್ಸು ಕಂಡಿದೆ.
ಇದಾದ ರಾಜ್ಯಾದ್ಯಂತ ಜ.21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಸಿದೆ. ಈ ಅವಧಿಯಲ್ಲಿ ಮನೆ ಮನೆ ಸಂಪರ್ಕ, ಸ್ಟಿಕ್ಕರ್ ಅಳವಡಿಕೆ, ಗೋಡೆ ಬರಹಗಳ ರಚನೆ, ಮಿಸ್ಡ್ಕಾಲ್ ಸದಸ್ಯತ್ವ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಪ್ರತಿ ಜಿಲ್ಲೆಯಿಂದ 1 ಲಕ್ಷ ಹೊಸ ಸದಸ್ಯತ್ವ ಸೇರ್ಪಡೆ ಮಾಡುವ ಗುರಿ ಹೊಂದಲಾಗಿದೆ.
ಕಾಂಗ್ರೆಸ್ ಪ್ರಜಾಧ್ವನಿ
ಬಿಜೆಪಿ ಪ್ರಚಾರ ವೇಗಕ್ಕೆ ಪ್ರತಿತಂತ್ರ ಮಾಡಿರುವ ಕಾಂಗ್ರೆಸ್ ಈಗಾಗಲೇ ಬೂತ್ ಕಮಿಟಿ ರಚಿಸಿ ಬಿಎಲ್ಎ (ಬೂತ್ ಲೆವೆಲ್ ಏಜೆಂಟ್) ನೇಮಕ ಮಾಡಿದೆ. ಬಳಿಕ ಬೂತ್, ಗ್ರಾಮ, ವಲಯ, ಬ್ಲಾಕ್ ಸಮಿತಿ ರಚಿಸಲಾಗಿದೆ. ಇದಾದ ನಂತರ ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ನಡೆಸುತ್ತಿದೆ.
ಕರಾವಳಿ, ಮಲೆನಾಡಿನ ಆರು ಜಿಲ್ಲೆಗಳಿಗೆ ಫೆ.5ರಿಂದ ಪ್ರತ್ಯೇಕ ‘ಕರಾವಳಿ- ಮಲೆನಾಡು ಪ್ರಜಾಧ್ವನಿ ಯಾತ್ರೆ’ ನಡೆಯಲಿದೆ. ಇದಕ್ಕೆ ರಾಜ್ಯ ನಾಯಕರು ಆಗಮಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಬೂತ್ ವ್ಯಾಪ್ತಿಯಲ್ಲಿ ಸಭೆ ನಡೆಸಿ ತಯಾರಿ. ಇದರ ಸಮಾರೋಪದ ಬಳಿಕ ಎರಡು ಹಂತದಲ್ಲಿ ವಿಧಾನಸಭೆ ವ್ಯಾಪ್ತಿಗೊಂದು ಬೃಹತ್ ಸಾರ್ವಜನಿಕ ಸಭೆ ನಡೆಸಿ ಒಂದು ಸಭೆಗೆ ಡಿ ಕೆ ಶಿವಕುಮಾರ್, ಇನ್ನೊಂದು ಸಭೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಮಾರ್ಚ್ 20ರೊಳಗೆ ಮುಗಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್.
ಜೆಡಿಎಸ್ ‘ಪಂಚರತ್ನ ಯಾತ್ರೆ’
ಪ್ರತಿ ಚುನಾವಣೆಯಲ್ಲಿತನ್ನ ಅಸ್ತಿತ್ವ ಪ್ರದರ್ಶಿಸುತ್ತಿರುವ ಜೆಡಿಎಸ್ ಈ ಬಾರಿ ಪಂಚರತ್ನ ಯಾತ್ರೆ ಮೂಲಕ ಪ್ರಚಾರ ಅಭಿಯಾನ ಆರಂಭಿಸಿದೆ. ಈ ವೇಳೆ ಜನಸಂಪರ್ಕ ಸಭೆ, ಎಚ್ ಡಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವೂ ನಡೆಯುತ್ತಿದೆ.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಈ ಮೂರು ಪಕ್ಷಗಳ ಮುಖಂಡರ ಆರೋಪ- ಪ್ರತ್ಯಾರೋಪ ತಾರಕಕ್ಕೇರಿದೆ. ಭ್ರಷ್ಟಾಚಾರವನ್ನೇ ಕಾಂಗ್ರೆಸ್ ಪ್ರಮುಖ ಅಸ್ತ್ರವನ್ನಾಗಿಸಿದರೆ, ಬಿಜೆಪಿ ಅದಕ್ಕೆ ಸಬೂಬು ನೀಡುತ್ತಿದೆ. ಜೆಡಿಎಸ್ ಎರಡೂ ಪಕ್ಷಗಳ ವೈಫಲ್ಯ ಬೊಟ್ಟು ಮಾಡಿ ತೋರಿಸಿ ‘ಕಿಂಗ್ ಮೇಕರ್’ ಮೂಲಕ ಅಧಿಕಾರ ಪಡೆಯುವ ಹುಮ್ಮಸ್ಸಿನಲ್ಲಿದೆ.
ಕ್ಷೇತ್ರವಾರು ಪ್ರಣಾಳಿಕೆ ಗಿಮಿಕ್
ಮತದಾರರನ್ನು ಸೆಳೆಯಲು ಈಗಲೇ ಎಲ್ಲ ಪಕ್ಷಗಳು ಒಂದೊಂದು ರೀತಿಯ ಕಸರತ್ತು ನಡೆಸುತ್ತಿದ್ದರೆ, ಕಾಂಗ್ರೆಸ್ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಕ್ಷೇತ್ರವಾರು ಪ್ರಣಾಳಿಕೆ ಘೋಷಿಸುತ್ತಿದೆ.
ವಿಜಯ ಸಂಕಲ್ಪ ಅಭಿಯಾನದಲ್ಲಿ ಮನೆ ಮನೆ ಭೇಟಿ ಮಾಡಿ ಕೇಂದ್ರ, ರಾಜ್ಯ ಸರಕಾರ, ಶಾಸಕರ ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತಿದ್ದೇವೆ. ಈ ಮೂಲಕ ನಮ್ಮ ಒಂದು ಹಂತದ ಪ್ರಚಾರ ಕಾರ್ಯ ಮುಗಿದಂತಾಗಿದೆ.
-ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
ಹೈಕಮಾಂಡ್ ಸೂಚನೆಯಂತೆ ಪ್ರಚಾರ ಆರಂಭವಾಗಿದೆ. ಪ್ರಜಾಧ್ವನಿ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಕರಾವಳಿ, ಮಲೆನಾಡು ಜಿಲ್ಲೆಯಲ್ಲಿ ಮತ್ತೊಂದು ಸುತ್ತಿನ ಪ್ರಜಾಧ್ವನಿ ಯಾತ್ರೆ ನಡೆಯಲಿದ್ದು ರಾಜ್ಯ, ರಾಷ್ಟ್ರಮಟ್ಟದ ನಾಯಕರು ಭಾಗವಹಿಸಲಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರದಲ್ಲೂ ಮಾರ್ಚ್ ತಿಂಗಳಾಂತ್ಯದೊಳಗೆ ಪ್ರಚಾರ ಸಭೆ ನಡೆಯಲಿದೆ.
-ಬಿ.ಕೆ. ಹರಿಪ್ರಸಾದ್ ಪ್ರಧಾನ ಕಾರ್ಯದರ್ಶಿ, ಎಐಸಿಸಿ