ಆ್ಯಪ್ನಗರ

ಜಾಗ್ವಾರ್ ಏರಿ ಸಿದ್ದರಾಮಯ್ಯ ಸವಾರಿ

ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶೇಷ ಚಿಕಿತ್ಸೆ ಪಡೆದು ಗುರುವಾರ ಬಿಡುಗಡೆ ಹೊಂದಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನಕ್ಕೆ ಜಾಗ್ವಾರ್ ಕಾರಿನಲ್ಲಿ ತೆರಳಿದ್ದಾರೆ.

Vijaya Karnataka Web 28 Jun 2018, 8:14 pm
ಮಂಗಳೂರು: ಧರ್ಮಸ್ಥಳದ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ವಿಶೇಷ ಚಿಕಿತ್ಸೆ ಪಡೆದು ಗುರುವಾರ ಬಿಡುಗಡೆ ಹೊಂದಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬಾರಿ ಜಾಗ್ವಾರ್ ಕಾರಿನಲ್ಲಿ ತೆರಳಿದ್ದಾರೆ.
Vijaya Karnataka Web Jaguar siddu.


ಮೂಡಬಿದಿರೆಯ ಬಿಲ್ಡರ್‌ ಅಬ್ದುಲ್ ಪುತ್ತಿಗೆ ಖರೀದಿ ಮಾಡಿರುವ ಹೊಚ್ಚ ಹೊಸ ಜಾಗ್ವಾರ್ ಎಫ್ ಪೇಸ್ ಕಪ್ಪು ಬಣ್ಣದ ಕಾರಿನಲ್ಲಿ ಅಬ್ದುಲ್ ಸ್ವತಃ ತಾವೇ ಡ್ರೈವ್ ಮಾಡಿಕೊಂಡು ಮಾಜಿ ಸಿಎಂರನ್ನು ವಿಮಾನ ನಿಲ್ದಾಣಕ್ಕೆ ಕರೆತಂದರು. ಮೂಲ್ಕಿ ಮೂಡಬಿದಿರೆಯ ಮಾಜಿ ಶಾಸಕ ಕೆ. ಅಭಯಚಂದ್ರ ಜೈನ್ ಅವರು ಸಿದ್ದರಾಮಯ್ಯ ಅವರನ್ನು ಧರ್ಮಸ್ಥಳದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಅಬ್ದುಲ್ ಅವರನ್ನು ಕೋರಿಕೊಂಡಿದ್ದರು. ಅದರಂತೆ ಅಬ್ದುಲ್ ಜಾಗ್ವಾರ್ ಕಾರಿನಲ್ಲಿ ಸಿದ್ದರಾಮಯ್ಯರನ್ನು ಕೂರಿಸಿಕೊಂಡು ವಿಮಾನ ನಿಲ್ದಾಣಕ್ಕೆ ಕರೆತಂದಿದ್ದಾರೆ.

ಕಾರು ಇನ್ನಷ್ಟೇ ನೋಂದಣಿಯಾಗಬೇಕಿದ್ದು, 90 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆ ಹೊಂದಿದೆ ಎಂದು ಅಬ್ದುಲ್ ತಿಳಿಸಿದ್ದಾರೆ. ರಾಜ್ಯ ಸಮ್ಮಿ‍ಶ್ರ ಸರಕಾರ ಮತ್ತು ಬಜೆಟ್ ಕುರಿತ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸಿದ್ದರಾಮಯ್ಯ ಅವರ ಶಾಂತಿವನ ವಾಸ ರಾಜ್ಯದಲ್ಲಿ ಸುದ್ದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ