ಆ್ಯಪ್ನಗರ

ಪರೀಕ್ಷೆ ಎಡವಟ್ಟು: ಮಂಗಳೂರು ವಿಶ್ವವಿದ್ಯಾಲಯದಿಂದ ನೋಟಿಸ್‌ ಜಾರಿ

ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ವಿಭಾಗದ ಸಮಸ್ಯೆಯಿಂದಾಗಿ ವಿವಿ ವ್ಯಾಪ್ತಿಯ 5 ಕಾಲೇಜುಗಳ ವಿದ್ಯಾರ್ಥಿಗಳು ಸೆ.29ರಂದು ಮತ್ತೆ ಕನ್ನಡ ಕಂಪ್ಯೂಟರ್‌ ಪರೀಕ್ಷೆ ಬರೆಯಬೇಕಾಗಿ ಬಂದಿದೆ.

Vijaya Karnataka Web 28 Sep 2020, 9:38 pm
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ವಿಭಾಗದ ಸಮಸ್ಯೆಯಿಂದಾಗಿ ವಿವಿ ವ್ಯಾಪ್ತಿಯ 5 ಕಾಲೇಜುಗಳ ವಿದ್ಯಾರ್ಥಿಗಳು ಸೆ.29ರಂದು ಮತ್ತೆ ಕನ್ನಡ ಕಂಪ್ಯೂಟರ್‌ ಪರೀಕ್ಷೆ ಬರೆಯಬೇಕಾಗಿ ಬಂದಿದೆ. ಇದೇ ವೇಳೆ ನಿಗದಿತ ದಿನದಂದು ಪರೀಕ್ಷೆ ನಡೆಸದೆ ಕರ್ತವ್ಯಲೋಪ ಎಸಗಿದ ವಿಭಾಗ ಮುಖ್ಯಸ್ಥರಿಗೆ ವಿವಿ ಆಡಳಿತ ನೋಟಿಸ್‌ ಜಾರಿ ಮಾಡಿದೆ.
Vijaya Karnataka Web exam
Representative image


ಸೆ.25ರಂದು ನಿಗದಿಯಾದ ಕನ್ನಡ ಕಂಪ್ಯೂಟರ್‌ ಪರೀಕ್ಷೆ ಮಂಗಳೂರು ವಿವಿ ಆವರಣದೊಳಗಿನ ಕನ್ನಡ ವಿಭಾಗ ಹೊರತುಪಡಿಸಿ ಬೇರೆ ನಾಲ್ಕು ಕಾಲೇಜುಗಳಲ್ಲಿ ನಡೆದಿತ್ತು. ವಿವಿ ಕನ್ನಡ ವಿಭಾಗದಲ್ಲಿಪರೀಕ್ಷೆ ನಡೆದಿರಲಿಲ್ಲ. ಇದಕ್ಕೆ ವಿಭಾಗ ಮುಖ್ಯಸ್ಥರು, ಪ್ರಶ್ನೆ ಪತ್ರಿಕೆ ಬಂದಿಲ್ಲ ಎಂದು ಸಬೂಬು ಹೇಳಿದ್ದರು. ಇದೀಗ ಮತ್ತೆ ಸೆ.29ರಂದು ವಿವಿ ಕನ್ನಡ ವಿಭಾಗ ಸೇರಿದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಕಂಪ್ಯೂಟರ್‌ ಮರು ಪರೀಕ್ಷೆ ನಡೆಯಲಿದೆ.

ಆದರೆ ವಿಭಾಗ ಮುಖ್ಯಸ್ಥರ ಆರೋಪವನ್ನು ನಿರಾಕರಿಸಿರುವ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್‌.ಧರ್ಮ, ಕೋವಿಡ್‌ ಹಿನ್ನೆಲೆಯಲ್ಲಿ ಅಂಚೆ ಬದಲು ಇ ಮೇಲ್‌ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಸೂಚನೆ, ತಿಳಿವಳಿಕೆಗಳನ್ನು ನೀಡಲಾಗಿದೆ.

ಇಳಿಕೆಯ ಹಾದಿ ಮುಂದುವರಿಸಿದ ಚಿನ್ನ-ಬೆಳ್ಳಿ ದರ: ವರ್ಷದ ಗರಿಷ್ಠ ಬೆಲೆಗಿಂತ ₹7000 ಕುಸಿತ!

ಅದೇ ರೀತಿ ವಿವಿ ಕನ್ನಡ ವಿಭಾಗಕ್ಕೂ ಮಾಹಿತಿ ಕಳುಹಿಸಲಾಗಿತ್ತು. ಅಲ್ಲದೆ ನಿಯಮಾವಳಿಯಂತೆ ಪ್ರಶ್ನೆ ಪತ್ರಿಕೆಯನ್ನೂ ಮುಂಚಿತವಾಗಿಯೇ ತಲುಪಿಸಲಾಗಿತ್ತು. ಆದರೆ ವಿಭಾಗ ಮುಖ್ಯಸ್ಥರು ನಿಗದಿತ ದಿನದಂದು ಪರೀಕ್ಷೆ ನಡೆಸಿಲ್ಲ. ಅವರು ಪ್ರಶ್ನೆ ಪತ್ರಿಕೆ ಸ್ವೀಕರಿಸಿದ್ದಕ್ಕೆ ನಮ್ಮಲ್ಲಿ ದಾಖಲೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಂಭೀರ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ವಿಭಾಗ ಮುಖ್ಯಸ್ಥರಿಗೆ ನೋಟಿಸ್‌ ನೀಡಲಾಗಿದೆ. ಎರಡು ದಿನದಲ್ಲಿ ಉತ್ತರಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್‌.ಧರ್ಮ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ