ಆ್ಯಪ್ನಗರ

ಮಂಗಳೂರು: ಕೌಟುಂಬಿಕ ಕಲಹಕ್ಕೆ ಮೂವರು ಮಕ್ಕಳು ಬಲಿ, ದಂಪತಿಯನ್ನು ರಕ್ಷಿಸಿದ ಸ್ಥಳೀಯರು

ಗುರುವಾರ ಸಂಜೆಯ ಹೊತ್ತು ಶಾಲೆಯಿಂದ ಬಂದ ಮಕ್ಕಳನ್ನು ಯಾರೂ ಇಲ್ಲದ ವೇಳೆ ಹಿತೇಶ್‌ ಶೆಟ್ಟಿಗಾರ್‌ ಹತ್ತಿರದಲ್ಲೇ ಇದ್ದ ಬಾವಿಯ ಹತ್ತಿರ ಕರೆದೊಯ್ದು ಅಲ್ಲಿಂದ ಬಾವಿಗೆ ದೂಡಿದ್ದಾನೆ.

Vijaya Karnataka Web 24 Jun 2022, 10:07 am
ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಹೊಸಕಾವೇರಿ ಎಂಬಲ್ಲಿತಂದೆಯೊಬ್ಬ ಗುರುವಾರ ತನ್ನ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ತಾನೂ ಹಾರಿದ್ದಾನೆ. ಘಟನೆಯಲ್ಲಿ ಮಕ್ಕಳು ಅಸು ನೀಗಿದ್ದು, ಪತಿ, ಪತ್ನಿಯನ್ನು ಸ್ಥಳೀಯರು ರಕ್ಷಿಸಿದ ಘಟನೆ ಗುರುವಾರ ಸಂಜೆ ನಡೆದಿದೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಕಿನ್ನಿಗೋಳಿ ಹೊಸ ಕಾವೇರಿಯ ಹಿತೇಶ್‌ ಶೆಟ್ಟಿಗಾರ್‌ (46) ತನ್ನ ಮೂವರು ಎಳೆ ವಯಸ್ಸಿನ ಮಕ್ಕಳನ್ನು ಬಾವಿಗೆ ತಳ್ಳಿ ದ ಆರೋಪಿ. ರಶ್ಮಿತಾ (8ನೇ ತರಗತಿ), ಉದಯ (6ನೇ ತರಗತಿ ) ಹಾಗೂ ದಕ್ಷಿತ್‌ (ಅಂಗನವಾಡಿ) ಮೃತ ಮಕ್ಕಳು. ಘಟನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಪತಿ ಕೆಲಸಕ್ಕೆ ಹೋಗದೆ ಇರುವುದರ ಬಗ್ಗೆ ಪತಿ-ಪತ್ನಿ ಮಧ್ಯೆ ಆಗಾಗ ವಾಗ್ವಾದವಾಗುತ್ತಿತ್ತು. ಇದರ ಪರಿಣಾಮವಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ನೀಡುತ್ತಿರುವ ಮಾಹಿತಿ.

ship sinking in mangaluru: ಅಪಾಯದಲ್ಲಿ ಪ್ರಿನ್ಸಸ್‌ ಕಾರ್ಗೋ ಹಡಗು: ಸಿರಿಯಾ ಪ್ರಜೆಗಳಿಗೆ ಮಂಗಳೂರಿನಲ್ಲಿ ಆಶ್ರಯ..

ಘಟನೆಯ ವಿವರ

ಗುರುವಾರ ಸಂಜೆಯ ಹೊತ್ತು ಶಾಲೆಯಿಂದ ಬಂದ ಮಕ್ಕಳನ್ನು ಯಾರೂ ಇಲ್ಲದ ವೇಳೆ ಹಿತೇಶ್‌ ಶೆಟ್ಟಿಗಾರ್‌ ಹತ್ತಿರದಲ್ಲೇ ಇದ್ದ ಬಾವಿಯ ಹತ್ತಿರ ಕರೆದೊಯ್ದು ಅಲ್ಲಿಂದ ಬಾವಿಗೆ ದೂಡಿದ್ದಾನೆ. ಸ್ವಲ್ಪ ಸಮಯದ ನಂತರ ಕೆಲಸದಿಂದ ಬಂದ ಪತ್ನಿ ಲಕ್ಷ್ಮಿ ಮಕ್ಕಳು ಇಲ್ಲದಿರುವುದನ್ನು ಕಂಡು ಪತಿಯೊಂದಿಗೆ ಹುಡುಕುತ್ತಾ ಬಾವಿಯ ಹತ್ತಿರ ಬಂದಾಗ ಆತ ಆಕೆಯನ್ನು ಬಾವಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಲು ಬಾವಿಗೆ ಹಾರಿದ್ದಾನೆ.

ಕಾಶಿ ಯಾತ್ರೆಗೆ ತೆರಳುವವರಿಗೆ ‘ಭಾರತ್‌ ಗೌರವ್‌’ ರೈಲು: ರಾಜ್ಯ ಮುಜರಾಯಿ ಇಲಾಖೆಯಿಂದ ನೋಂದಣಿ

ಇದನ್ನು ಕಂಡ ಸ್ಥಳೀಯರು ಇವರಿಬ್ಬರನ್ನು ಹಗ್ಗದ ಸಹಾಯದಿಂದ ಮೇಲೆ ಎಳೆದು ರಕ್ಷಿಸಿದ್ದಾರೆ. ನಂತರ ಮಕ್ಕಳನ್ನು ಮೇಲಕ್ಕೆತ್ತಿ ಆಂಬ್ಯುಲೆನ್ಸ್‌ ಮೂಲಕ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಮೂವರು ಮಕ್ಕಳು ಅಸು ನೀಗಿದ್ದಾರೆ. ಸ್ಥಳಕ್ಕೆ ಮೂಲ್ಕಿ ಪೊಲೀಸ್‌ ಠಾಣಾಕಾರಿ ಹಾಗೂ ಸಿಬ್ಬಂದಿ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ