ಆ್ಯಪ್ನಗರ

ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣ ಬಳಕೆಯಿಂದ ಕೃಷಿಕರಿಗೆ ಲಾಭ: ಡಾ. ವೀರೇಂದ್ರ ಹೆಗ್ಗಡೆ

ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿದ ಭತ್ತದ ಕಟಾವು ಕಾರ್ಯವನ್ನು ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ ಗ್ರಾಮೀಣ ವಿಕಾಸ ಆಗಿರುವುದರಿಂದ ಜನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದೆ. ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣ ಬಳಕೆಯಿಂದ ಕೃಷಿಕರಿಗೆ ಲಾಭದಾಯಕವಿದೆ ಎಂದರು.

Vijaya Karnataka Web 29 Oct 2020, 2:36 pm
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ , ಕೃಷಿ ವಿಭಾಗ ಕೇಂದ್ರ ಕಚೇರಿ ಧರ್ಮಸ್ಥಳ ವತಿಯಿಂದ ಕ್ಷೇತ್ರದ ಗದ್ದೆಗಳಲ್ಲಿ ಯಾಂತ್ರೀಕೃತ ಹಾಗೂ ಸಾಂಪ್ರದಾಯಿಕ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿದ ಭತ್ತದ ಕಟಾವು ಕಾರ್ಯವನ್ನು ಬುಧವಾರ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
Vijaya Karnataka Web Veerendra Heggade


ಬಳಿಕ ಮಾತನಾಡಿದ ಡಾ. ಡಿ.ವೀರೇಂದ್ರ ಹೆಗ್ಗಡೆ, ಗ್ರಾಮೀಣ ವಿಕಾಸ ಆಗಿರುವುದರಿಂದ ಜನ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗಿದೆ. ಕೃಷಿ ಕ್ಷೇತ್ರದಲ್ಲೂ ಯಂತ್ರೋಪಕರಣ ಬಳಕೆಯಿಂದ ಕೃಷಿಕರಿಗೆ ಲಾಭದಾಯಕವಿದೆ. ಬಂಡವಾಳ ಹೂಡಿಕೆ ಕಡಿಮೆ ಮಾಡಿ, ಹೆಚ್ಚು ಆದಾಯ ಗಳಿಸಿ, ಯಂತ್ರೊಪಕರಣ ಬಳಕೆಯಿಂದ ಕೃಷಿ ಆಕರ್ಷಣೆಯಾಗಲೀ ಎಂಬುದೇ ನನ್ನ ಆಶಯವಾಗಿದೆ ಎಂದರು.

ಪಿಲಿಕುಳ ಉದ್ಯಾನವನಕ್ಕೆ ಹೊಸ ಮೆರುಗು ತಂದಿದ್ದ 21 ವರ್ಷದ ಕಿಂಗ್‌ ವಿಕ್ರಮ್ ಇನ್ನಿಲ್ಲ..!

ಧರ್ಮಸ್ಥಳದ ವತಿಯಿಂದ ಬಂಡವಾಳ ಹಾಕಿ ದೊಡ್ಡ ಯಂತ್ರಗಳನ್ನು ಈಗಾಗಲೇ ಖರೀದಿಸಿ ಆಯಾಯ ಕ್ಷೇತ್ರಗಳಲ್ಲಿ ಇಡಲಾಗಿದೆ. ಕೃಷಿಕರು ಯಂತ್ರೋಪಕರಣ ಬಳಕೆ ಮಾಡಬೇಕು. ಅದಲ್ಲದೆ ಯಂತ್ರಗಳ ಮೂಲಕವೇ ಹುಲ್ಲನ್ನು ಬಂಡಲ್‌ ಮಾಡಿ ದನಕರುಗಳಿಗೆ ಜೋಡಿಸಿಡಬಹುದು. ಅದ್ದರಿಂದ ದೇಶದಲ್ಲಿಇಂತಹ ಪರಿವರ್ತನೆ ಬರಬೇಕು ಎಂಬುವುದು ನಮ್ಮ ಆಪೇಕ್ಷೆಯಾಗಿದೆ ಎಂದರು.
ಮಂಗಳೂರಿನಲ್ಲಿ ಮೀನುಗಾರಿಕಾ ವಿವಿ ಸ್ಥಾಪನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಒಲವು

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್‌.ಎಚ್‌.ಮಂಜುನಾಥ್‌ ಮಾತನಾಡಿ, ಈ ಬಾರಿ ಧರ್ಮಸ್ಥಳದಲ್ಲಿ ಸಂಪೂರ್ಣ ಯಾಂತ್ರೀಕೃತ ಭತ್ತ ಬೇಸಾಯದ ಪ್ರಾತ್ಯಕ್ಷಿಕೆಯನ್ನು ನಡೆಸಿದ್ದೇವೆ. ಸುಮಾರು 17 ಎಕರೆ ಪ್ರದೇಶದ 8.5 ಎಕರೆ ಜಾಗದಲ್ಲಿ ಸಾಂಪ್ರಾದಾಯಿಕ ಪದ್ಧತಿಯಲ್ಲಿ, ಉಳಿದ 8.5 ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ಬೇಸಾಯ ಪ್ರಯೋಗವನ್ನು ಮಾಡಿದ್ದೇವೆ. ಯಾಂತ್ರೀಕೃತ ಪದ್ಧತಿ ಅಳವಡಿಸಿಕೊಂಡು ನಾಟಿ ಮಾಡಿ ಕೊಯ್ಲು ಯಂತ್ರಗಳ ಮೂಲಕ ಗಂಟೆಗೆ ಒಂದು ಎಕರೆಯಷ್ಟು ಪ್ರದೇಶದ ಕೊಯ್ಲನ್ನು ಕಟಾವು ಮಾಡಬಹುದು ಎಂದರು.

ತುಳು ಭಾಷೆಗೆ ಅಧಿಕೃತ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

ಯಾಂತ್ರೀಕೃತ ಪದ್ದತಿಯಿಂದ ಇಳುವರಿ ಹೆಚ್ಚು ಪಡೆದು ಲಾಭ ಹೆಚ್ಚು ಪಡೆಯಬಹುದು. ಸಾಂಪ್ರದಾಯಿಕ ಪದ್ಧತಿಯಲ್ಲಿಖರ್ಚು ಜಾಸ್ತಿ ಇಳುವರಿಯೂ ಕಡಿಮೆ. ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಅಳವಡಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಅದರೆ ಈ ಬಾರಿ ಹೆಚ್ಚು ಮಳೆ ಬಂದಿರುವುದರಿಂದ ರೈತರ ಸ್ಪಂದನೆ ಸ್ವಲ್ಪ ಕಡಿಮೆಯಾಗಿದೆ. ಅದರೆ ಮುಂದಿನ ದಿನಗಳಲ್ಲಿ ರೈತರು ಯಾಂತ್ರೀಕೃತ ಪದ್ಧತಿ ಕುರಿತು ಉತ್ತಮ ರೀತಿಯಲ್ಲಿ ಸ್ಪಂದಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿ.ಹರ್ಷೇಂದ್ರ ಕುಮಾರ್‌, ಯಂತ್ರಶ್ರೀ (ಸಿಎಚ್‌ಎಸ್‌ಸಿ) ಯೋಜನಾಧಿಕಾರಿ ಸುಧೀರ್‌ ಜೈನ್‌, ಪ್ರಬಂಧಕ ಸಚಿನ್‌, ಕೇಂದ್ರ ಕಚೇರಿ ಯೋಜನಾಧಿಕಾರಿ ಸುದರ್ಶನ್‌, ಕೃಷಿ ವಿಭಾಗ ಮೇಲ್ವಿಚಾರಕ ಹರಿಪ್ರಸಾದ್‌, ವಲಯ ಮೇಲ್ವಿಚಾರಕ ಪ್ರಶಾಂತ್‌, ಕ್ಷೇತ್ರದ ತೋಟಗಾರಿಕೆ ಮೇಲ್ವಿಚಾರಕ ರಾಜೇಂದ್ರ ರೈ, ಒಕ್ಕೂಟದ ಅಧ್ಯಕ್ಷೆ ಶಾಂತ ಶೆಟ್ಟಿ, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ