ಆ್ಯಪ್ನಗರ

ನೈಸರ್ಗಿಕ ಅನಿಲದಿಂದ ರಸಗೊಬ್ಬರ!ಎಂಸಿಎಫ್‌ಗೆ ಗೇಲ್‌ ಪೈಪ್‌ಲೈನ್‌ನಿಂದ ಗ್ಯಾಸ್‌ ಪೂರೈಕೆ

ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ಉತ್ಪಾದಿಸುತ್ತಿದ್ದ ಮಂಗಳೂರು ರಸಗೊಬ್ಬ ಕಾರ್ಖಾನೆಯಲ್ಲಿ ಡಿಸೆಂಬರ್‌ ತಿಂಗಳಿನಿಂದ ನೈಸರ್ಗಿಕ ಅನಿಲ ಬಳಕೆ ಮಾಡಲಾಗುತ್ತದೆ. ಎಂಸಿಎಫ್‌ನ ಅನಿಲ ಆಧಾರಿತ ಯಂತ್ರಗಳನ್ನು ಪ್ರಾಯೋಗಿಕವಾಗಿ ಚಲಾಯಿಸಿ ಪರಿಶೀಲಿಸಲಾಯಿತು.

Vijaya Karnataka Web 24 Nov 2020, 10:14 pm
ಮಂಗಳೂರು: ನ್ಯಾಫ್ತಾ ಬಳಸಿ ಯೂರಿಯಾ ಮತ್ತಿತರ ರಸಗೊಬ್ಬರ ಉತ್ಪಾದಿಸುತ್ತಿದ್ದ ಮಂಗಳೂರು ರಸಗೊಬ್ಬ ಕಾರ್ಖಾನೆಯಲ್ಲಿ ಡಿಸೆಂಬರ್‌ ತಿಂಗಳಿನಿಂದ ನೈಸರ್ಗಿಕ ಅನಿಲ ಬಳಕೆ ಮಾಡಲಾಗುತ್ತದೆ.
Vijaya Karnataka Web fertilizer
representative image


ಬಹುನಿರೀಕ್ಷಿತ ಗೇಲ್‌ ಇಂಡಿಯಾ ಲಿಮಿಟೆಡ್‌ನಿಂದ ಕೊಚ್ಚಿಯಿಂದ ಪೈಪ್‌ಲೈನ್‌ನಲ್ಲಿ ಎಂಸಿಎಫ್‌ ಸಂಸ್ಥೆಗೆ ನೈಸರ್ಗಿಕ ಅನಿಲ ಪೂರೈಕೆ ಸೋಮವಾರ ತಲುಪಿದ್ದು, ಸಾಂಕೇತಿಕವಾಗಿ ನೈಸರ್ಗಿಕ ಅನಿಲ ಪಡೆದುಕೊಳ್ಳಲಾಗಿದೆ. ಎಂಸಿಎಫ್‌ನ ಅನಿಲ ಆಧಾರಿತ ಯಂತ್ರಗಳನ್ನು ಪ್ರಾಯೋಗಿಕವಾಗಿ ಚಲಾಯಿಸಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಗೇಲ್‌ ಮತ್ತು ಎಂಸಿಎಫ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇಷ್ಟರ ತನಕ ನ್ಯಾಫ್ತಾ ಬಳಸಿ ಯೂರಿಯಾ ಉತ್ಪಾದನೆ ಮಾಡಲಾಗುತ್ತಿತ್ತು. ಅಧಿಕ ವೆಚ್ಚ ಮತ್ತು ಪರಿಸರಕ್ಕೆ ಮಾರಕ ಹಿನ್ನೆಲೆಯಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನೇ ಕಡ್ಡಾಯ ಮಾಡಲಾಗಿತ್ತು. ಆರು ವರ್ಷಗಳ ಹಿಂದೆ ಕೇಂದ್ರ ಸರಕಾರವು ದೇಶಾದ್ಯಂತ ನ್ಯಾಫ್ತಾ ಬಳಕೆಗೆ ಕಡಿವಾಣ ಹಾಕಿದ್ದರಿಂದ ಎಂಸಿಎಫ್‌ನಲ್ಲಿ ಯೂರಿಯಾ ಮತ್ತಿತರ ರಸಗೊಬ್ಬರ ಉತ್ಪಾದನೆ ಸ್ಥಗಿತಗೊಂಡಿತ್ತು.

ರಸಗೊಬ್ಬರ ಸಹಾಯಧನಕ್ಕೆ ₹65,000 ಕೋಟಿ ಘೋಷಿಸಿದ ಕೇಂದ್ರ!

ನಂತರ ನೈಸರ್ಗಿಕ ಅನಿಲ ಲಭ್ಯವಾಗುವ ತನಕ ನಾಫ್ತಾದಲ್ಲಿ ಕಾರ್ಯಾಚರಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದನ್ನು ಸ್ಮರಿಸಬಹುದು. ಮೂರು ವರ್ಷ ಮೊದಲೇ ಎಂಸಿಎಫ್‌ಗೆ ಅನಿಲ ಪೂರೈಕೆ ಆಗಬೇಕಿತ್ತು. ಆದರೆ, ಪೈಪ್‌ಲೈನ್‌ ಹಾಕುವಾಗಿನ ವಿಳಂಬದಿಂದ ಸಾಧ್ಯವಾಗಿರಲಿಲ್ಲ. ಎಂಸಿಎಫ್‌ನಲ್ಲಿ ಅನಿಲ ಸ್ವೀಕಾರ, ಶೇಖರಣೆ ಮತ್ತು ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ. ಇದೀಗ ಅನಿಲ ಪೂರೈಕೆ ಆರಂಭಗೊಂಡಿದ್ದು, ಮುಂದಿನ ತಿಂಗಳಿನಿಂದ ಅಧಿಕೃತವಾಗಿ ನೈಸರ್ಗಿಕ ಅನಿಲದಿಂದ ರಸಗೊಬ್ಬರ ಉತ್ಪಾದನೆಯಾಗಲಿದೆ.

ರೈತರ ಹೆಸರಿನಲ್ಲಿ ನಕಲಿ ಬಿಲ್: ಜಾಲ ಬೇಧಿಸಿದ ಕೃಷಿ ಇಲಾಖೆ

ಎಂಆರ್‌ಪಿಎಲ್‌ಗೂ ಗ್ಯಾಸ್‌: ಎಂಆರ್‌ಪಿಎಲ್‌ಗೂ ಗೇಲ್‌ ಕಂಪನಿ ನೈಸರ್ಗಿಕ ಅನಿಲ ಸರಬರಾಜು ಮಾಡಲಿದೆ. ಎಂಆರ್‌ಪಿಎಲ್‌ನಲ್ಲಿ ಪ್ರತಿದಿನ 2500 ಟನ್‌ ಎಲ್‌ಪಿಜಿ ಉತ್ಪಾದನೆಯಾಗಿ, ರಾಜ್ಯದ ವಿವಿಧೆಡೆಗೆ ಸರಬರಾಜು ಮಾಡಲಾಗುತ್ತಿದೆ. ಇಲ್ಲಿಯ ಸ್ಥಾವರದ ಬಳಕೆಗಾಗಿ ಕಚ್ಚಾ ತೈಲದಿಂದ ಅನಿಲ ಉತ್ಪಾದನೆ ಮಾಡಿ, ಬಳಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ನೈಸರ್ಗಿಕ ಅನಿಲವನ್ನು ನೇರವಾಗಿ ಬಳಕೆ ಮಾಡಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ