ಆ್ಯಪ್ನಗರ

ಚಿತ್ರ ನಿರ್ದೇಶಕನ ಸಾವಿನ ಬಗ್ಗೆ ಸಂಶಯ: ಪೊಲೀಸರಿಗೆ ದೂರು

ಮೂಡುಬಿದಿರೆ : ಚಿತ್ರ ನಿರ್ದೇಶಕರಾಗಿದ್ದ ಮಹಮ್ಮದ್‌ ಹ್ಯಾರಿಸ್‌ ಕೆಲವು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ತಂದೆ ಮೂಡುಬಿದಿರೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

Vijaya Karnataka 10 Aug 2019, 5:00 am
ಮೂಡುಬಿದಿರೆ : ಚಿತ್ರ ನಿರ್ದೇಶಕರಾಗಿದ್ದ ಮಹಮ್ಮದ್‌ ಹ್ಯಾರಿಸ್‌ ಕೆಲವು ತಿಂಗಳ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಅವರ ತಂದೆ ಮೂಡುಬಿದಿರೆ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.
Vijaya Karnataka Web film diractor death doubt
ಚಿತ್ರ ನಿರ್ದೇಶಕನ ಸಾವಿನ ಬಗ್ಗೆ ಸಂಶಯ: ಪೊಲೀಸರಿಗೆ ದೂರು


ಹಾರಿಸ್‌ ಅವರು ಮಾರ್ಚ್‌ 21ರಂದು ಶಿರ್ತಾಡಿ ಪರಿಸರದಲ್ಲಿ ಚಿತ್ರೀಕರಣ ಮುಗಿಸಿ ಮನೆಗೆ ವಾಪಸ್ಸು ಬಂದಿದ್ದರು. ರಾತ್ರಿ ಸುಮಾರು 12 ಗಂಟೆಯ ವೇಳೆ ಶಿರ್ತಾಡಿಯ ಲಾಡ್ಜ್‌ನಲ್ಲಿದ್ದ ಚಿತ್ರ ತಂಡದವರು ಲಾಡ್ಜ್‌ಗೆ ಬರುವಂತೆ ಕರೆಮಾಡಿದ್ದರು. ಈ ಹಿನ್ನೆಲೆಯಲ್ಲಿ ತನ್ನ ಒಮ್ನಿ ಕಾರಿನಲ್ಲಿ ಶಿರ್ತಾಡಿ ಕಡೆಗೆ ತೆರಳುವ ವೇಳೆ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು ಅವರು ಮೃತಪಟ್ಟಿದ್ದರು. ಮಹಮ್ಮದ್‌ ಹ್ಯಾರಿಸ್‌ಗೆ ಬೇರೆ ಚಿತ್ರ ನಿರ್ದೇಶಕರಿಂದ ಮತ್ತು ಚಿತ್ರ ನಿರ್ಮಾಪಕರಿಂದ ಬೆದರಿಕೆ ಇರುವ ಬಗ್ಗೆ ತನ್ನಲ್ಲಿ ತಿಳಿಸಿದ್ದ. ಈ ಕುರಿತು ಚಿತ್ರ ತಂಡದ ಕೆಲವರ ಬಗ್ಗೆ ಸಂಶಯ ವ್ಯಕ್ತಪಡಿಸಿ, ಅವರ ಹೆಸರು ಸಹಿತ ದೂರಿನಲ್ಲಿ ತಿಳಿಸಿದ್ದು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ