ಫೈನಾನ್ಶಿಯರ್ನ ಬೆದರಿಸಿ 2.5 ಲಕ್ಷ ನಗದು ದೋಚಿ ತಂಡ ಪರಾರಿ
ಮಾರಕಾಯುಧ ಹಿಡಿದುಕೊಂಡು ಜೀವ ಬೆದರಿಕೆ ಹಾಕಿದ ದರೋಡೆಕೋರರು, ಫೈನಾನ್ಶಿಯರ್ ಒಬ್ಬರಿಂದ ಲಕ್ಷಾಂತರ ರೂ. ನಗದು ದೋಚಿ ಪರಾರಿಯಾದ ಘಟನೆ ಮಳಲಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
Vijaya Karnataka 17 Jul 2019, 3:41 pm
ಮಂಗಳೂರು: ಮಾರಕಾಯುಧ ಹಿಡಿದುಕೊಂಡು ಜೀವ ಬೆದರಿಕೆ ಹಾಕಿದ ದರೋಡೆಕೋರರು, ಫೈನಾನ್ಶಿಯರ್ ಒಬ್ಬರಿಂದ ಲಕ್ಷಾಂತರ ರೂ. ನಗದು ದೋಚಿ ಪರಾರಿಯಾದ ಘಟನೆ ಮಳಲಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಮಳಲಿ ನಿವಾಸಿ ಸೆಂಥಿಲ್ಕುಮಾರ್ ದರೋಡೆಗೊಳಗಾದ ವ್ಯಕ್ತಿ. ನಾಲ್ವರು ಅಪರಿಚಿತ ದುಷ್ಕರ್ಮಿಗಳು ನಗದು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವಿವರ: ಸೆಂಥಿಲ್ಕುಮಾರ್ ಸೇರಿದಂತೆ ಹಲವು ಮಂದಿ ಸೇರಿ ಬಜಪೆ ಬಳಿ ಫೈನಾನ್ಸ್ವೊಂದನ್ನು ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ 2.30ರ ವೇಳೆಗೆ ಬಜಪೆ ವ್ಯಾಪ್ತಿಯಲ್ಲಿ ಹಣ ಸಂಗ್ರಹಿಸಿ ಮಳಲಿ ಸಮೀಪದ ಕಾಲೊನಿಯೊಂದರ ಸಮೀಪದಲ್ಲಿ ತೆರಳುತ್ತಿದ್ದರು. ಸೆಂಥಿಲ್ಕುಮಾರ್ ಅವರನ್ನು ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಹಿಂಬಾಲಿಸಿದೆ. ಕೆಲಹೊತ್ತಿನಲ್ಲೇ ಸೆಂಥಿಲ್ಗಿಂತ ಮುಂದೆ ತೆರಳಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ವಾಪಸಾದ ದುಷ್ಕರ್ಮಿಗಳು, ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿ, 2 ಲಕ್ಷ ರೂ. ನಗದು ಇದ್ದ ಪೆಟ್ಟಿಗೆಯನ್ನು ಒಡೆದಿದ್ದಾರೆ. ಜತೆಗೆ ಸೆಂಥಿಲ್ ಬಳಿಯಿದ್ದ 5 ಸಾವಿರ ರೂ. ನಗದು ಸೇರಿದಂತೆ ಒಟ್ಟು 2.05 ಲಕ್ಷ ರೂ.ದರೋಡೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮಳಲಿ ನಿವಾಸಿ ಸೆಂಥಿಲ್ಕುಮಾರ್ ದರೋಡೆಗೊಳಗಾದ ವ್ಯಕ್ತಿ. ನಾಲ್ವರು ಅಪರಿಚಿತ ದುಷ್ಕರ್ಮಿಗಳು ನಗದು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ವಿವರ: ಸೆಂಥಿಲ್ಕುಮಾರ್ ಸೇರಿದಂತೆ ಹಲವು ಮಂದಿ ಸೇರಿ ಬಜಪೆ ಬಳಿ ಫೈನಾನ್ಸ್ವೊಂದನ್ನು ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ 2.30ರ ವೇಳೆಗೆ ಬಜಪೆ ವ್ಯಾಪ್ತಿಯಲ್ಲಿ ಹಣ ಸಂಗ್ರಹಿಸಿ ಮಳಲಿ ಸಮೀಪದ ಕಾಲೊನಿಯೊಂದರ ಸಮೀಪದಲ್ಲಿ ತೆರಳುತ್ತಿದ್ದರು. ಸೆಂಥಿಲ್ಕುಮಾರ್ ಅವರನ್ನು ಎರಡು ಬೈಕ್ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಹಿಂಬಾಲಿಸಿದೆ. ಕೆಲಹೊತ್ತಿನಲ್ಲೇ ಸೆಂಥಿಲ್ಗಿಂತ ಮುಂದೆ ತೆರಳಿ, ಮತ್ತೆ ವಿರುದ್ಧ ದಿಕ್ಕಿನಲ್ಲಿ ವಾಪಸಾದ ದುಷ್ಕರ್ಮಿಗಳು, ಮಚ್ಚು ಹಿಡಿದು ಜೀವ ಬೆದರಿಕೆ ಹಾಕಿ, 2 ಲಕ್ಷ ರೂ. ನಗದು ಇದ್ದ ಪೆಟ್ಟಿಗೆಯನ್ನು ಒಡೆದಿದ್ದಾರೆ. ಜತೆಗೆ ಸೆಂಥಿಲ್ ಬಳಿಯಿದ್ದ 5 ಸಾವಿರ ರೂ. ನಗದು ಸೇರಿದಂತೆ ಒಟ್ಟು 2.05 ಲಕ್ಷ ರೂ.ದರೋಡೆ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.