ಅರವಿಂದ ಹೆಬ್ಬಾರ್ ಮುಂಡಾಜೆ
ಮಂಗಳೂರು ( ಬೆಳ್ತಂಗಡಿ): ಬೇಸಿಗೆ ಕಾಲದಲ್ಲಿಉಂಟಾಗುವ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಗಳಿಂದ ಈ ಬಾರಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಕಾಡಿನ ಕಲ್ಲು ಪ್ರದೇಶಗಳ ಮೇಲೆ ಪ್ರಾಣಿಗಳು ಓಡಾಡುವಾಗ ಕಿಡಿಗಳು ಉಂಟಾಗಿ ಅಥವಾ ಇನ್ನಿತರ ಕಾರಣದಿಂದ ಬೆಂಕಿ ಹರಡಿ ಕಾಡ್ಗಿಚ್ಚು ಸೃಷ್ಟಿಯಾಗಿ ಅರಣ್ಯದ ಜತೆಗೆ ವನ್ಯಜೀವಿಗಳು ನಾಶವಾಗುವ ಸಾಧ್ಯತೆ ಇದೆ. ಇಂತಹ ಸ್ಥಳಗಳನ್ನು ಗುರುತಿಸಿ ಅಗತ್ಯ ಜಾಗಗಳಲ್ಲಿಅರಣ್ಯ ಇಲಾಖೆಯಿಂದ ಬೆಂಕಿ ರೇಖೆ ನಿರ್ಮಿಸಲಾಗುತ್ತದೆ.
ಭಂಡಾಜೆ ಫಾಲ್ಸ್ನಿಂದ ರಾಣಿಝರಿ
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಭಂಡಾಜೆ ಫಾಲ್ಸ್ನಿಂದ ಬಲ್ಲಾಳ ರಾಯನದುರ್ಗ ಪ್ರದೇಶ ಸೇರಿದಂತೆ ರಾಣಿಝರಿ ತನಕ ಬೆಂಕಿ ರೇಖೆ ನಿರ್ಮಾಣ ಪೂರ್ಣಗೊಂಡಿದೆ. 12 ಜನ ವನ್ಯಜೀವಿ ವಿಭಾಗದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಸುಮಾರು ಒಂದು ವಾರ ಕಾಲ ಇದನ್ನು ನಡೆಸಿದ್ದಾರೆ. ವಾಸ್ತವ್ಯ ಸ್ಥಳಕ್ಕೂ, ಬೆಂಕಿ ರೇಖೆ ನಿರ್ಮಾಣ ಕಾರ್ಯದ ಸ್ಥಳಕ್ಕೂ ಹೆಚ್ಚಿನ ದೂರವಿರುವ ಕಾರಣ ಕಾಡಿನಲ್ಲೇ ಟೆಂಟ್ ಹಾಕಿ ವಾಸ್ತವ್ಯ ಹೂಡಿ, ಆಹಾರ ಪದಾರ್ಥಗಳನ್ನು ತಯಾರಿಸಿ ಕೆಲಸ ಮಾಡಿದ್ದಾರೆ. ಎಳನೀರು, ದಿಡುಪೆ, ಮಲ್ಲ, ಸವಣಾಲು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆದಿದೆ.
ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ
ವನ್ಯಜೀವಿ ವಿಭಾಗ ಅಲ್ಲದೆ ಅರಣ್ಯ ಇಲಾಖೆಯಿಂದ ತನ್ನ ವ್ಯಾಪ್ತಿಯ ಕಾಡಿನ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯ ರಸ್ತೆಯ ಬದಿ, ಕಾಡುಗಳಲ್ಲಿ ನಡೆಯುವ ಇದು ಮುಂದಿನ ಒಂದೆರಡು ದಿನಗಳಲ್ಲಿಆರಂಭವಾಗಲಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ರಕ್ಷಿತಾರಣ್ಯಗಳು ಸೇರಿದಂತೆ ಅವುಗಳ ಮೂಲಕ ಹಾದು ಹೋಗುವ ಚಾರ್ಮಾಡಿ ಘಾಟಿ, ನಿಡಿಗಲ್ ಮೊದಲಾದ ಕಡೆಯ ರಸ್ತೆ ಬದಿಗಳಲ್ಲಿಇದು ನಡೆಯಲಿದ್ದು ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ. ಈಗಾಗಲೇ ಚಾರ್ಮಾಡಿ ಘಾಟಿ ಭಾಗದಲ್ಲಿ ಚಿಕ್ಕಮಗಳೂರು ವಲಯ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕಾಡ್ಗಿಚ್ಚು ಉಂಟಾಗಿ ಹತ್ತಾರು ಎಕರೆ ಅರಣ್ಯ ನಾಶವಾಗಿತ್ತು. ಇಲಾಖೆಯ ಸಕಾಲಿಕ ಕ್ರಮದಿಂದ ಹೆಚ್ಚಿನ ನಾಶ ಉಂಟಾಗುವುದು ತಪ್ಪಿತ್ತು.
ಕಾಡ್ಗಿಚ್ಚು ಅಥವಾ ಬೆಂಕಿ ಅನಾಹುತಗಳು ಉಂಟಾಗದಂತೆ ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿ ಗುರುತಿಸಿ ಅಗತ್ಯ ಇರುವಷ್ಟು ಅಗಲಕ್ಕೆ ಹುಲ್ಲನ್ನು ಕತ್ತರಿಸಿ ಬಳಿಕ ಆ ಪ್ರದೇಶಗಳಲ್ಲಿ ಬೆಂಕಿ ಹಚ್ಚಿ ನೀರನ್ನು ಹಾಯಿಸಿ ಹಸಿ ಸೊಪ್ಪು ಅಥವಾ ಗೋಣಿ ಚೀಲದಿಂದ ಆರಿಸಲಾಗುತ್ತದೆ. ಈ ಸಮಯ ಹುಲ್ಲುಸುಟ್ಟ ಸ್ಥಳ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಪ್ರದೇಶಗಳಲ್ಲಿ ಬೆಂಕಿ ಒಂದು ಕಡೆಯಿಂದ ಇನ್ನೊಂದು ಪ್ರದೇಶಕ್ಕೆ ಹರಡುವುದಿಲ್ಲ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲಾಖೆ ಸಿಬ್ಬಂದಿ ಜತೆ ಸ್ಥಳೀಯರು ಅಗತ್ಯ ಸಹಕಾರ ನೀಡುತ್ತಿದ್ದು, ನಮ್ಮ ವ್ಯಾಪ್ತಿಯಲ್ಲಿ ಶೇ.80ರಷ್ಟು ಬೆಂಕಿ ರೇಖೆ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಉಳಿದೆಡೆ ಕೆಲಸ ಪ್ರಗತಿಯಲ್ಲಿದ್ದು ಈ ವಾರದ ಕೊನೆಯಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇದೆ.
-ಸ್ವಾತಿ, ಆರ್ಎಫ್ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ
ಮಂಗಳೂರು ( ಬೆಳ್ತಂಗಡಿ): ಬೇಸಿಗೆ ಕಾಲದಲ್ಲಿಉಂಟಾಗುವ ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಗಳಿಂದ ಈ ಬಾರಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ಆರಂಭವಾಗಿದೆ.
ಭಂಡಾಜೆ ಫಾಲ್ಸ್ನಿಂದ ರಾಣಿಝರಿ
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಭಂಡಾಜೆ ಫಾಲ್ಸ್ನಿಂದ ಬಲ್ಲಾಳ ರಾಯನದುರ್ಗ ಪ್ರದೇಶ ಸೇರಿದಂತೆ ರಾಣಿಝರಿ ತನಕ ಬೆಂಕಿ ರೇಖೆ ನಿರ್ಮಾಣ ಪೂರ್ಣಗೊಂಡಿದೆ. 12 ಜನ ವನ್ಯಜೀವಿ ವಿಭಾಗದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಸುಮಾರು ಒಂದು ವಾರ ಕಾಲ ಇದನ್ನು ನಡೆಸಿದ್ದಾರೆ. ವಾಸ್ತವ್ಯ ಸ್ಥಳಕ್ಕೂ, ಬೆಂಕಿ ರೇಖೆ ನಿರ್ಮಾಣ ಕಾರ್ಯದ ಸ್ಥಳಕ್ಕೂ ಹೆಚ್ಚಿನ ದೂರವಿರುವ ಕಾರಣ ಕಾಡಿನಲ್ಲೇ ಟೆಂಟ್ ಹಾಕಿ ವಾಸ್ತವ್ಯ ಹೂಡಿ, ಆಹಾರ ಪದಾರ್ಥಗಳನ್ನು ತಯಾರಿಸಿ ಕೆಲಸ ಮಾಡಿದ್ದಾರೆ. ಎಳನೀರು, ದಿಡುಪೆ, ಮಲ್ಲ, ಸವಣಾಲು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆದಿದೆ.
ಅರಣ್ಯ ಇಲಾಖೆಯಿಂದ ಬೆಂಕಿ ರೇಖೆ
ವನ್ಯಜೀವಿ ವಿಭಾಗ ಅಲ್ಲದೆ ಅರಣ್ಯ ಇಲಾಖೆಯಿಂದ ತನ್ನ ವ್ಯಾಪ್ತಿಯ ಕಾಡಿನ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತದೆ. ಅರಣ್ಯ ಇಲಾಖೆ ವ್ಯಾಪ್ತಿಯ ರಸ್ತೆಯ ಬದಿ, ಕಾಡುಗಳಲ್ಲಿ ನಡೆಯುವ ಇದು ಮುಂದಿನ ಒಂದೆರಡು ದಿನಗಳಲ್ಲಿಆರಂಭವಾಗಲಿದೆ. ಬೆಳ್ತಂಗಡಿ ತಾಲೂಕಿನಲ್ಲಿರುವ ರಕ್ಷಿತಾರಣ್ಯಗಳು ಸೇರಿದಂತೆ ಅವುಗಳ ಮೂಲಕ ಹಾದು ಹೋಗುವ ಚಾರ್ಮಾಡಿ ಘಾಟಿ, ನಿಡಿಗಲ್ ಮೊದಲಾದ ಕಡೆಯ ರಸ್ತೆ ಬದಿಗಳಲ್ಲಿಇದು ನಡೆಯಲಿದ್ದು ತಂಡಗಳನ್ನು ಸನ್ನದ್ಧಗೊಳಿಸಲಾಗಿದೆ. ಈಗಾಗಲೇ ಚಾರ್ಮಾಡಿ ಘಾಟಿ ಭಾಗದಲ್ಲಿ ಚಿಕ್ಕಮಗಳೂರು ವಲಯ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕಾಡ್ಗಿಚ್ಚು ಉಂಟಾಗಿ ಹತ್ತಾರು ಎಕರೆ ಅರಣ್ಯ ನಾಶವಾಗಿತ್ತು. ಇಲಾಖೆಯ ಸಕಾಲಿಕ ಕ್ರಮದಿಂದ ಹೆಚ್ಚಿನ ನಾಶ ಉಂಟಾಗುವುದು ತಪ್ಪಿತ್ತು.
ಕಾಡ್ಗಿಚ್ಚು ಅಥವಾ ಬೆಂಕಿ ಅನಾಹುತಗಳು ಉಂಟಾಗದಂತೆ ಅರಣ್ಯ ಪ್ರದೇಶ ಹಾಗೂ ರಸ್ತೆ ಬದಿ ಗುರುತಿಸಿ ಅಗತ್ಯ ಇರುವಷ್ಟು ಅಗಲಕ್ಕೆ ಹುಲ್ಲನ್ನು ಕತ್ತರಿಸಿ ಬಳಿಕ ಆ ಪ್ರದೇಶಗಳಲ್ಲಿ ಬೆಂಕಿ ಹಚ್ಚಿ ನೀರನ್ನು ಹಾಯಿಸಿ ಹಸಿ ಸೊಪ್ಪು ಅಥವಾ ಗೋಣಿ ಚೀಲದಿಂದ ಆರಿಸಲಾಗುತ್ತದೆ. ಈ ಸಮಯ ಹುಲ್ಲುಸುಟ್ಟ ಸ್ಥಳ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇಂತಹ ಪ್ರದೇಶಗಳಲ್ಲಿ ಬೆಂಕಿ ಒಂದು ಕಡೆಯಿಂದ ಇನ್ನೊಂದು ಪ್ರದೇಶಕ್ಕೆ ಹರಡುವುದಿಲ್ಲ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇಲಾಖೆ ಸಿಬ್ಬಂದಿ ಜತೆ ಸ್ಥಳೀಯರು ಅಗತ್ಯ ಸಹಕಾರ ನೀಡುತ್ತಿದ್ದು, ನಮ್ಮ ವ್ಯಾಪ್ತಿಯಲ್ಲಿ ಶೇ.80ರಷ್ಟು ಬೆಂಕಿ ರೇಖೆ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಉಳಿದೆಡೆ ಕೆಲಸ ಪ್ರಗತಿಯಲ್ಲಿದ್ದು ಈ ವಾರದ ಕೊನೆಯಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇದೆ.
-ಸ್ವಾತಿ, ಆರ್ಎಫ್ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ