ಆ್ಯಪ್ನಗರ

ಬಾವಿಗೆ ಇಳಿದ ಅಪ್ಪ ಮಗನ ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

ಬಾಬು ಎಂಬವರು ಬಾವಿಗೆ ಇಳಿದು ಕೆಸರು ಶುಚಿಗೊಳಿಸುವ ಸಂದರ್ಭ 65 ಅಡಿ ಆಳದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕಂಡಿತು. ವಿಷಯ ಅರ್ಥ ಮಾಡಿಕೊಂಡ ಮಗ ಶ್ರೀನಿವಾಸ್ ಕೂಡ ಬಾವಿಗೆ ಇಳಿದರು.

Vijaya Karnataka Web 21 May 2019, 1:47 pm
ಪುತ್ತೂರು: ಬಾವಿಯ ಕೆಸರು ಮಣ್ಣು ತೆಗೆದು ದುರಸ್ತಿ ಮಾಡುವ ಕೆಲಸಕ್ಕೆಂದು ಅಳವಾದ ಬಾವಿಗೆ ಇಳಿದ ಅಪ್ಪ, ಮಗ ಇಬ್ಬರು ಬಾವಿಯೊಳಗೆ ಆಮ್ಲಜನಕದ ಕೊರತೆಯಿಂದ ಬಳಲಿದ್ದು, ಅಗ್ನಿಶಾಮಕ ದಳದವರು ಬಂದು ಇಬ್ಬರನ್ನೂ ರಕ್ಚಿಸಿದ್ದಾರೆ.
Vijaya Karnataka Web ಬಾವಿ
ಬಾವಿ


ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಬಾಣದಪದವು ಎಂಬಲ್ಲಿನ ಮೂಲೆಗದ್ದೆ ಎಂಬಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯರಾದ ಬಾಬು ( 50) ಮತ್ತು ಅವರ ಮಗ ಶ್ರೀನಿವಾಸ (26) ಎಂಬವರೇ ಬಾವಿಯೊಳಗೆ ಉಸಿರಾಟದ ಸಮಸ್ಯೆಗೆ ಸಿಲುಕಿದವರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಸ್ಥಳೀಯರಾದ ಸುರೇಖಾ ಎಂಬವರ ಮನೆಯ ಬಾವಿಯ ಕೆಸರು, ಮಣ್ಣು ತೆಗೆಯಲು ಆಳುಗಳನ್ನು ಕರೆಸಲಾಗಿತ್ತು.

ಬಾಬು ಎಂಬವರು ಬಾವಿಗೆ ಇಳಿದು ಕೆಸರು ಶುಚಿಗೊಳಿಸುವ ಸಂದರ್ಭ 65 ಅಡಿ ಆಳದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕಂಡಿತು. ವಿಷಯ ಅರ್ಥ ಮಾಡಿಕೊಂಡ ಮಗ ಶ್ರೀನಿವಾಸ್ ಕೂಡ ಬಾವಿಗೆ ಇಳಿದರು.

ಅವರಿಗೂ ಅದೇ ಸಮಸ್ಯೆ ಕಾಣಿಸಿಕೊಂಡಾಗ ಬಾವಿಯ ಮೇಲಿದ್ದವರು ತಕ್ಣಣ ಅಗ್ನಿಶಾಮಕ‌ದವರಿಗೆ ಮಾಹಿತಿ ನೀಡಿದರು.

ಅವರು ಬಂದು ತಕ್ಷಣ ಬಾವಿಗೆ ಇಳಿದು ಇಬ್ಬರನ್ನೂ ಮೇಲೆತ್ತಿ ರಕ್ಷಿಸಿದರು. ಅಗ್ನಿಶಾಮಕ ದಳ ಸಿಬ್ಬಂದಿ ಲೀಲಾಧರ್ ಬಾವಿಗೆ ಇಳಿದು ಧೈರ್ಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿಸಿದರು.ಇತರ ಸಿಬ್ಬಂದಿ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ