ಆ್ಯಪ್ನಗರ

ಕಿನ್ನಿಗೋಳಿ ಪರಿಸರದಲ್ಲಿ ನೆರೆ

ಕಳೆದೆರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಗೆ ಮೂಲ್ಕಿ ಹೋಬಳಿಯ ಬಹುತೇಕ ಕೃಷಿ ಭೂಮಿಗಳು ಜಲಾವೃತಗೊಂಡಿವೆ.

Vijaya Karnataka 11 Aug 2019, 4:16 pm
ಕಿನ್ನಿಗೋಳಿ: ಕಳೆದೆರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಗೆ ಮೂಲ್ಕಿ ಹೋಬಳಿಯ ಬಹುತೇಕ ಕೃಷಿ ಭೂಮಿಗಳು ಜಲಾವೃತಗೊಂಡಿವೆ.
Vijaya Karnataka Web MNR-10KINNIVRUDDARAKSHANE


ನಂದಿನಿ ನದಿ ತೀರದಲ್ಲಿರುವ ಕಿಲೆಂಜೂರು, ಮಿತ್ತಬೈಲು, ಮಲ್ಲಿಗೆಯಂಗಡಿ, ಕೊಡೆತ್ತೂರು ಮತ್ತಿತರ ಕಡೆಗಳಲ್ಲಿ ತಗ್ಗು ಪ್ರದೇಶಗಳು ನೀರಿನಿಂದ ತುಂಬಿದ್ದು, ಮಿತ್ತಬೈಲಿನಲ್ಲಿ 7ಕುಟುಂಬದ 20 ಮಂದಿಯನ್ನು ಮೂಲ್ಕಿ ಮಂತ್ರ ಸರ್ಫ್‌ ಕ್ಲಬ್‌ ಸದಸ್ಯರು ಹಾಗೂ ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಕಿಲೆಂಜೂರು ಪ್ರದೇಶದ 25 ಜನರನ್ನು ಸ್ಥಳಾಂತರಿಸಲಾಗಿದೆ. ಕಿಲೆಂಜೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಕಟೀಲಿನಲ್ಲಿ ನಂದಿನಿ ನದಿ ಉಕ್ಕಿ ಹರಿದ ಪರಿಣಾಮ ಜಳಕದಕಟ್ಟೆ ಹಾಗೂ ಅಜಾರು ಕಿಂಡಿ ಅಣೆಕಟ್ಟು ಸಂಪೂರ್ಣ ಜಲಾವೃತಗೊಂಡಿದೆ.

ಶಾಂಭವಿ ನದಿ ಉಕ್ಕಿ ಹರಿದು ಐಕಳ ಗ್ರಾಮ ಪಂಚಾಯಿತಿ ಮತ್ತು ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವಾರು ಎಕರೆ ಭತ್ತ ನಾಟಿ ಮಾಡಿದ ಪ್ರದೇಶ ಜಲಾವೃತವಾಗಿದೆ. ಐಕಳ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ಸಂಕಲಕರಿಯ ಪಟ್ಟೆ ಕ್ರಾಸ್‌ ಮುಖ್ಯ ರಸ್ತೆಯಿಂದ ಒಳಗಿನ ಪಟ್ಟೆ ಜಾರಂದಾಯ ದೈವಸ್ಥಾನ ಹಾಗೂ ಶುಂಠಿಪಾಡಿಗೆ ಹೋಗುವ ರಸ್ತೆ ಮುಳುಗಡೆಯಾಗಿದೆ. ಪಟ್ಟೆ ಪ್ರದೇಶದ 45 ಕ್ಕೂ ಹೆಚ್ಚು ಎಕರೆ ಭೂಮಿ ಹಾನಿಗೀಡಾಗಿದೆ. ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಗೇರ ಬೈಲು ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕರ್ನಿರೆ ಕೊಪ್ಪಲದಿಂದ ಅತಿಕಾರಿಬೆಟ್ಟು ಮೂಲ್ಕಿ ಹೋಗುವ ರಸ್ತೆ ನೆರೆ ನೀರಿನಿಂದ ಆವೃತ್ತವಾಗಿದೆ.

ಪಂಜ ಕೊಯಿಕುಡೆ, ಉಲ್ಯ, ಮೊಗಪಾಡಿ, ಬೈಲಗುತ್ತು, ಕುದ್ರು ಪ್ರದೇಶಗಳಲ್ಲಿ ಮನೆಗಳು ಜಲಾವೃತವಾಗಿದೆ. ಹತ್ತು ಕುಟುಂಬಗಳನ್ನು ದೋಣಿ ಮೂಲಕ ಸ್ಥಳೀಯ ಜನರ ಸಹಕಾರದೊಂದಿಗೆ ಸ್ಥಳಾಂತರಿಸಲಾಯಿತು. ಬೊಳ್ಳೂರು ವ್ಯಾಪ್ತಿಯಲ್ಲಿ 6ಮನೆಯವರನ್ನು ಸ್ಥಳಾಂತರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ