ಆ್ಯಪ್ನಗರ

ಕಡಬ: ಉದ್ಯೋಗ ದೊರೆಯದ ಚಿಂತೆ, ಯುವತಿ ಆತ್ಮಹತ್ಯೆ

ಉದ್ಯೋಗ ದೊರೆಯಲಿಲ್ಲ ಎಂಬ ಕೊರಗಿನಲ್ಲಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬಿಕಾಂ ಪದವೀಧರೆಯಾಗಿದ್ದು ಎರಡು ವರ್ಷಗಳಿಂದ ಯಾವುದೇ ಉದ್ಯೋಗ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ತಿಳಿದು ಬಂದಿದೆ.

Vijaya Karnataka Web 23 Jul 2020, 8:52 am
ಕಡಬ: ತನ್ನ ವಿದ್ಯಾಭ್ಯಾಸಕ್ಕೆ ತಕ್ಕಂತೆ ಸೂಕ್ತ ಉದ್ಯೋಗ ದೊರೆಯಲಿಲ್ಲ ಎನ್ನುವ ಕೊರಗಿನಲ್ಲಿಆಲಂಕಾರು ಗ್ರಾಮದ ಪಾಂಜೋಡಿ ಮನೆ ಕರಿಯ ಮುಗೇರ ಎಂಬವರ ಪುತ್ರಿ ಸಂಧ್ಯಾ(22) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Vijaya Karnataka Web ಸಾಂದರ್ಭಿಕ ಚಿತ್ರ


ಬಿಕಾಂ ಪದವೀಧರೆಯಾಗಿದ್ದು ಎರಡು ವರ್ಷಗಳಿಂದ ಯಾವುದೇ ಉದ್ಯೋಗ ದೊರೆತಿರಲಿಲ್ಲ. ಈ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದಳು. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಸಂಧ್ಯಾ ರಾತ್ರಿ 12 ಗಂಟೆಯ ತನಕ ಮನೆಯಲ್ಲಿರುವುದು ಈಕೆಯ ತಂದೆಯ ಗಮನಕ್ಕೆ ಬಂದಿತ್ತು.
ಕೊರೊನಾ ಬಂತೆಂದು ಬ್ಲೇಡ್‌ನಿಂದ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ 54ರ ವ್ಯಕ್ತಿ!

ಬುಧವಾರ ಮುಂಜಾನೆ ಈಕೆಯ ತಾಯಿ ನೋಡಿದಾಗ ಕಾಣೆಯಾಗಿದ್ದಳು. ಹುಡುಕಾಡಿದಾಗ ಮನೆಯ ಪಕ್ಕದ ಕೆರೆಯ ಬಳಿ ಆಕೆಯ ಮೊಬೈಲ್‌ ಹಾಗೂ ಚಪ್ಪಲಿ ಇದ್ದು, ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸಹೋದರ ಸಂದೀಪ್‌ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪದೇ ಪದೇ ಸೂಸೈಡ್ ಮಾಡಿಕೊಳ್ಳುವ ಯೋಚನೆ ನಿಮ್ಮಲ್ಲಿದ್ದರೆ ತಕ್ಷಣ ಹೀಗೆ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ