ಆ್ಯಪ್ನಗರ

ಹುಟ್ಟುಹಬ್ಬದ ಉಡುಗೊರೆ ಸಂತ್ರಸ್ತರ ನೆರವಿಗೆ ನೀಡಿದ ಬಾಲಕಿ

ಎಲ್ಲರೂ ಹುಟ್ಟಿದ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದರೆ, ಇಲ್ಲೊಬ್ಬಳು 10 ವರ್ಷದ ಬಾಲಕಿ, ತನ್ನ ಹುಟ್ಟಿನ ದಿನಕ್ಕೆ ಅಜ್ಜಿ ನೀಡಿದ ಬರೋಬ್ಬರಿ 10 ಸಾವಿರ ರೂ.ಗಳ ಉಡುಗೊರೆ ಮೊತ್ತವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡುವ ಮೂಲಕ ಮಾನವೀಯ ಸ್ಪಂದನ ತೋರಿಸಿದ್ದಾಳೆ.

Vijaya Karnataka 27 Aug 2019, 3:50 pm
ಮಂಗಳೂರು: ಎಲ್ಲರೂ ಹುಟ್ಟಿದ ದಿನವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿದ್ದರೆ, ಇಲ್ಲೊಬ್ಬಳು 10 ವರ್ಷದ ಬಾಲಕಿ, ತನ್ನ ಹುಟ್ಟಿನ ದಿನಕ್ಕೆ ಅಜ್ಜಿ ನೀಡಿದ ಬರೋಬ್ಬರಿ 10 ಸಾವಿರ ರೂ.ಗಳ ಉಡುಗೊರೆ ಮೊತ್ತವನ್ನು ಪ್ರವಾಹ ಸಂತ್ರಸ್ತರ ನೆರವಿಗೆ ದೇಣಿಗೆಯಾಗಿ ನೀಡುವ ಮೂಲಕ ಮಾನವೀಯ ಸ್ಪಂದನ ತೋರಿಸಿದ್ದಾಳೆ.
Vijaya Karnataka Web 26M-Sanmathi1


ತೊಕ್ಕೊಟ್ಟು ಸಮೀಪದ ಕಿನ್ಯಾ ಎಂಬಲ್ಲಿನ ಶಾರದಾ ವಿದ್ಯಾನಿಕೇತನ ಶಾಲೆಯ ಆಂಗ್ಲಮಾಧ್ಯಮದ 5ನೇ ತರಗತಿ ವಿದ್ಯಾರ್ಥಿನಿ ಸನ್ಮತಿ ಎಂಬಾಕೆ ನೆರೆ ಸಂತ್ರಸ್ತರಿಗೆ ಮಿಡಿದವಳು.

ಒಂದು ವಾರದಿಂದ ನಿತ್ಯವೂ ಮಾಧ್ಯಮಗಳಲ್ಲಿನೆರೆ ಸಂತ್ರಸ್ತರ ಬವಣೆ ನೋಡುತ್ತಿದ್ದ ಈಕೆ, ಮನೆ ಮಂದಿಯೂ ಪರಿಹಾರ ಕಾರ್ಯಕ್ಕೆ ನೆರವಾಗುವುದನ್ನು ತಿಳಿದಿದ್ದಳು. ಹಾಗಾಗಿ ತಾನು ಕೂಡ ನೆರೆ ಸಂತ್ರಸ್ತರಿಗೆ ನೆರವು ನೀಡಬೇಕು ಎಂದು ನಿರ್ಧರಿಸಿದಳು.

ಆ.25ರಂದು ಈಕೆಯ ಹುಟ್ಟಿದ ದಿನ. ತಂದೆ, ತಾಯಿ ಈಕೆಗೆ ಹುಟ್ಟಿದ ದಿನದ ಉಡುಗೊರೆ ನೀಡಿದ್ದರು. ತೊಕ್ಕೊಟ್ಟಿನ ಕುತ್ತಾರು ಪದವಿನ ಮನೆಯಲ್ಲಿಸಣ್ಣಮಟ್ಟಿನ ಸಂಭ್ರಮ ಆಚರಿಸಿದ್ದರು. ಮರುದಿನ ಸೋಮವಾರ ಶಾಲೆಗೆ ತೆರಳುವ ಮುನ್ನ ಬೆಳಗ್ಗೆ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಶಾಲಾ ಸಮವಸ್ತ್ರದಲ್ಲಿಆಗಮಿಸಿದ ಈ ಪೋರಿ, 10 ಸಾವಿರ ರೂ.ಗಳ ಚೆಕ್‌ನ್ನು ಜಿಲ್ಲಾಧಿಕಾರಿಗೆ ನೀಡಿ ಎಲ್ಲರನ್ನೂ ಅಚ್ಚರಿಯಲ್ಲಿಕೆಡವಿದಳು. ಪುಟಾಣಿಯ ಈ ಹೃದಯವಂತಿಕೆಗೆ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಬೆನ್ನು ತಟ್ಟಿದರು.

ಈಕೆಗೆ ಹುಟ್ಟಿದ ದಿನದ ಸಂಭ್ರಮಕ್ಕೆ ಅಜ್ಜಿ ನೀಡಿದ 10 ಸಾವಿರ ರೂ. ಮೊತ್ತವನ್ನು ಹಾಗೆಯೇ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ಹಸ್ತಾಂತರ ಮಾಡಿದ್ದಳು. ಅಲ್ಲದೆ ಹುಟ್ಟಿದ ದಿನದ ನೆನಪಿನಲ್ಲಿನೆರೆ ಸಂತ್ರಸ್ತರಿಗೆ ನನ್ನ ಕಿಂಚಿತ್‌ ಕಾಣಿಕೆ ಎಂಬ ಒಕ್ಕಣೆಯ ಪತ್ರವನ್ನೂ ಚೆಕ್‌ ಜತೆ ಇರಿಸಿದ್ದಳು. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾಳೆ.

ಮಂಗಳೂರಿನ ಜಿಲ್ಲಾಪಿಯುಸಿ ಇಲಾಖೆಯಲ್ಲಿಶಾಖಾಧಿಕಾರಿಯಾಗಿರುವ ನಿತಿನ್‌ ಅವರ ಎರಡನೇ ಪುತ್ರಿಯಾದ ಈಕೆ, ಪುತ್ತೂರಿನ ಮಾಜಿ ಶಾಸಕಿ ಶಕುಂತಶಾ ಶೆಟ್ಟಿ ಅವರ ಮೊಮ್ಮಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ