ಆ್ಯಪ್ನಗರ

’ಗೊತ್ತಾಯೆರೆ ಬಲ್ಲಿ’ ನಾಟಕಕ್ಕೆ ಪ್ರಶಸ್ತಿ

ಮಂಗಳೂರಿನ ಕುತ್ತಾರ್‌ ಮುನ್ನೂರು ಯುವಕ ಮಂಡಲದ ಆಶ್ರಯದಲ್ಲಿ ಕುತ್ತಾರು ಪದವುನಲ್ಲಿ ನಡೆದ ದ.ಕ. ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ದಯಾನಂದ ನೆಲ್ಯಾಡಿ ಸಾರಥ್ಯದ ನೆಲ್ಯಾಡಿಯ ನಮ್ಮ ಕಲಾವಿದೆರ್‌ ಅಭಿನಯದ 'ಗೊತ್ತಾಯೆರೆ ಬಲ್ಲಿ' ನಾಟಕಕ್ಕೆ ಪ್ರಥಮ ಸ್ಥಾನ ದೊರೆತಿದೆ.

Vijaya Karnataka 21 Dec 2018, 2:46 pm
ನೆಲ್ಯಾಡಿ : ಮಂಗಳೂರಿನ ಕುತ್ತಾರ್‌ ಮುನ್ನೂರು ಯುವಕ ಮಂಡಲದ ಆಶ್ರಯದಲ್ಲಿ ಕುತ್ತಾರು ಪದವುನಲ್ಲಿ ನಡೆದ ದ.ಕ. ಜಿಲ್ಲಾಮಟ್ಟದ ನಾಟಕ ಸ್ಪರ್ಧೆಯಲ್ಲಿ ದಯಾನಂದ ನೆಲ್ಯಾಡಿ ಸಾರಥ್ಯದ ನೆಲ್ಯಾಡಿಯ ನಮ್ಮ ಕಲಾವಿದೆರ್‌ ಅಭಿನಯದ 'ಗೊತ್ತಾಯೆರೆ ಬಲ್ಲಿ' ನಾಟಕಕ್ಕೆ ಪ್ರಥಮ ಸ್ಥಾನ ದೊರೆತಿದೆ.
Vijaya Karnataka Web gothaiyere balli skipt award
’ಗೊತ್ತಾಯೆರೆ ಬಲ್ಲಿ’ ನಾಟಕಕ್ಕೆ ಪ್ರಶಸ್ತಿ


'ಗೊತ್ತಾಯೆರೆ ಬಲ್ಲಿ ' ನಾಟಕದಲ್ಲಿನ ಅಭಿನಯಕ್ಕೆ ಸುಧೀರ್‌ ಅವರಿಗೆ ದ್ವಿತೀಯ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ. ಸುಧೀರ್‌ ಅವರು ಸದ್ರಿ ನಾಟಕದ ಹೀರೋ ಧಿ'ಆಕಾಶ್‌' ಪಾತ್ರದಲ್ಲಿ ಅಭಿನಯಿಸಿದ್ದರು. ತಂಡದ ರಾಕೇಶ್‌ ಶೆಟ್ಟಿ ಅವರಿಗೆ ಹಾಸ್ಯ ನಟನೆಗಾಗಿ ದ್ವಿತೀಯ ಹಾಗೂ ರಮಾ ಬಿ.ಸಿ. ರೋಡ್‌ ಅವರಿಗೆ ಅತ್ಯುತ್ತಮ ಪೋಷಕ ನಟನೆಗೆ ಪ್ರಥಮ ಪ್ರಶಸ್ತಿ ಲಭಿಸಿದೆ. ರಮಾ ಬಿ.ಸಿ.ರೋಡ್‌ ಅತ್ಯುತ್ತಮ ನಿರ್ದೇಶಕ, ದಯಾನಂದ ನೆಲ್ಯಾಡಿ ಅತ್ಯುತ್ತಮ ಸಂಗೀತ ಹಾಗೂ ಅರುಣ್‌ಚಂದ್ರ ಬಿ.ಸಿ.ರೋಡ್‌ ಅವರಿಗೆ ಅತ್ಯುತ್ತಮ ರಚನೆಗಾಗಿ 'ಗೊತ್ತಾಯೆರೆ ಬಲ್ಲಿಧಿ' ನಾಟಕಕ್ಕೆ ಪ್ರಶಸ್ತಿ ಲಭಿಸಿದೆ. ಸಂತೋಷ್‌ ಕುಮಾರ್‌ ನೆಲ್ಯಾಡಿ, ಕುಶಾಲಪ್ಪ ನೆಲ್ಯಾಡಿ,ಪೂಜಾ ಗೋಳಿತ್ತೊಟ್ಟು, ಜಾಹ್ನವಿ ವಿಟ್ಲ, ಸತೀಶ್‌ ಸಂಪ್ಯ, ವಿನಾಯಕ ಜೆಪ್ಪು ಮಂಗಳೂರು,ಶ್ರೀಧರ್‌ ಪರಂಗಿಪೇಟೆ, ಸಚಿನ್‌ ಪರಂಗಿಪೇಟೆ, ಮೋಹನ ಇಳಂತಿಲ ಅವರು ಈ ನಾಟಕದಲ್ಲಿ ಕಲಾವಿದರಾಗಿ ಅಭಿನಯಿಸಿದ್ದರು. ಮೌನೇಶ್‌ ಮಾಣಿ ಹಾಗೂ ದಿನೇಶ್‌ ರಾಮಕುಂಜ ಅವರು ತಾಂತ್ರಿಕ ವಿಭಾಗದಲ್ಲಿ ಸಹಕರಿಸಿದ್ದಾರೆ. 'ಗೊತ್ತಾಯೆರೆ ಬಲ್ಲಿ ' ನಾಟಕವು 27ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ ಎಂದು ತಂಡದ ನಾಯಕರಾದ ದಯಾನಂದ ನೆಲ್ಯಾಡಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ